ಮೊಟ್ಟೆಯಿಂದ ಹೊರಬಂದ ಅಪರೂಪದ ಆಭರಣ ಹಾವಿನ ಮರಿಗಳು

Public TV
1 Min Read
NML SNAKE copy

ನೆಲಮಂಗಲ: ಅಪರೂಪದ ಆಭರಣ ಜಾತಿಗೆ ಸೇರಿದ ಒಂಬತ್ತು ನವಜಾತ ಹಾವಿನ ಮರಿಗಳು ಜನಿಸಿದ ಅಪರೂಪದ ದೃಶ್ಯ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನಲ್ಲಿ ಕಂಡು ಬಂದಿದೆ.

ತಾಲೂಕಿನ ಕೆಂಪಲಿಂಗನಹಳ್ಳಿ ಬಳಿ ಈ ರಕ್ಷಣಾ ಕಾರ್ಯಚರಣೆ ನಡೆದಿದೆ. ಕೆಂಪಲಿಂಗನಹಳ್ಳಿ ಗ್ರಾಮದ ರಾಜಣ್ಣ ಎಂಬವರ ಮನೆಯಲ್ಲಿ ಹಾವು ಕಂಡು ಬಂದಿದೆ. ಬಳಿಕ ಅವರು ನೆಲಮಂಗಲದ ಉರಗ ತಜ್ಞ ಸ್ನೇಕ್ ಲೊಕೇಶ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

NML

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ತಜ್ಞ ಸ್ನೇಕ್ ಲೊಕೇಶ್ ಅವರು ಅಪರೂಪದ ಪ್ರಭೇಧದ ಹಾವನ್ನು ರಕ್ಷಿಸಿದ್ದಾರೆ. ಈ ಆಭರಣದ ಹಾವು ಸಂಜೆ ವೇಳೆಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಹಾವು ಒಂಭತ್ತರಿಂದ ಹದಿಮೂರು ಹಾವಿನ ಮರಿಗಳನ್ನು ಮಾತ್ರ ಮರಿಹಾಕುತ್ತದೆ. ಈ ಹಾವನ್ನು ರಕ್ಷಿಸುವ ಕಾರ್ಯ ನಮ್ಮ ಮೇಲಿದೆ ಎಂದು ಸ್ನೇಕ್ ಲೋಕೇಶ್ ಜನತೆಗೆ ಕಿವಿಮಾತು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *