ಚಿಕ್ಕಮಗಳೂರು: ಉಡುಪಿ ಜಿಲ್ಲೆಯ ಕಾಪುವಿನಲ್ಲಿರುವ ಸಾಯಿರಾಧಾ ರೆಸಾರ್ಟ್ನಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ನಡೀತಿದ್ದ ಪ್ರಕೃತಿ ಚಿಕಿತ್ಸೆ ಇಂದಿಗೆ ಮುಗಿಯುತ್ತದೆ. ಚಿಕಿತ್ಸೆ ಮುಗಿಸಿಕೊಂಡು ಇಬ್ಬರೂ ಶೃಂಗೇರಿಗೆ ತೆರಳಲಿದ್ದಾರೆ.
ಶಾರದಾಂಬೆಯ ಸನ್ನಿಧಿಯಲ್ಲಿ ನಾಳೆಯವರೆಗೂ ಹೋಮ ಹವನದಲ್ಲಿ ಪಾಲ್ಗೊಳ್ಳಲಿದ್ದಾರೆ. ಲೋಕಸಭಾ ಫಲಿತಾಂಶದಂದೇ ಸರ್ಕಾರ ಬೀಳುತ್ತೆ ಅನ್ನೋ ಆತಂಕದಲ್ಲಿರುವ ಕುಮಾರಸ್ವಾಮಿ ಎಲ್ಲವನ್ನೂ ಪರಿಹಾರ ಮಾಡುವಂತೆ, ಶತ್ರು ಸಂಹಾರ, ಯಶಸ್ಸು ಹಾಗೂ ಶ್ರೇಯಸ್ಸಿಗಾಗಿ ಪೂಜೆ ವಿಶೇಷ ಪೂಜೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ದೇವೇಗೌಡರು ಮತ್ತೆ ಪ್ರಧಾನಿ ಆದರೂ ಆಗಬಹುದು ಎಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ. ಈ ಬಾರಿ ಮೋದಿಯೂ ಪ್ರಧಾನಿ ಆಗಲ್ಲ, ರಾಹುಲ್ ಗಾಂಧಿಯೂ ಪ್ರಧಾನಿ ಆಗಲ್ಲ. ನನ್ನ ಲೆಕ್ಕಾಚಾರ ಪ್ರಕಾರ ಬಿಜೆಪಿ 160 ರಿಂದ 200 ಸೀಟಷ್ಟೇ ಬರುತ್ತದೆ. ಕಾಂಗ್ರೆಸ್ ನೂರು ಸೀಟು ಗಡಿ ದಾಟುತ್ತದೆ. ಪ್ರಧಾನಿ ಹುದ್ದೆಗೆ ದೇವೇಗೌಡರನ್ನು ಎಲ್ಲರೂ ಒಪ್ಪುತ್ತಾರೆ. ಮೇ 23ರವರೆಗೆ ಕಾಯಿರಿ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.