– ನದಿ ನೀರು ಸ್ವಚ್ಛವಾಗಿರಿಸಲು ಸಲಹೆ
ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣದ ಟೋಲ್ ಗೇಟ್ ಬಳಿಯ ಕಾವೇರಿ ದೇವಸ್ಥಾನದಲ್ಲಿ ಬಾರವಿ ಕನ್ನಡ ಅಭಿಮಾನಿ ಸಂಘದಿಂದ ಬನದ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜೆ ಜರುಗಿತು.
ಅರ್ಚಕ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಕಾವೇರಿ ಪ್ರತಿಮೆಗೆ ವಿವಿಧ ಪುಷ್ಪ ಹಾಗೂ ವಸ್ತ್ರಗಳಿಂದ ಅಲಂಕಾರ, ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿ, ಮಹಾ ಆರತಿ ಬೆಳಗಲಾಯಿತು. ಬೆಂಗಳೂರಿನ ಉದ್ಯಮಿ ಸುನಂದ ಕೌಶಿಕ್ ಹಾಗೂ ರುದ್ರೇಶ್ ಕುಟುಂಬಸ್ಥರು ಸೇವಾರ್ಥ ಪೂಜೆ ನೆರವೇರಿಸಿದರು.
ಬಳಿಕ ಮಾತಾನಾಡಿದ ಅವರು, ಕಾವೇರಿ ತವರು ಜಿಲ್ಲೆಯಲ್ಲಿ ಕಾವೇರಿ ನದಿ ಮಾಲಿನ್ಯವಾಗುತ್ತಿರುವುದು ಆಘಾತಕಾರಿ ಸುದ್ದಿಯಾಗಿದೆ. ಕೊಡಗಿನಿಂದ ಬೆಂಗಳೂರಿಗೆ ಕಾವೇರಿ ನದಿ ಹರಿಯುತ್ತಾಳೆ. ಕಾವೇರಿ ಮಾತೆಯನ್ನ ಎಲ್ಲಾರೂ ಪೂಜ್ಯ ಭಾವನೆಯಿಂದ ನೋಡಬೇಕು ಹಾಗೂ ನದಿಯನ್ನ ಎಲ್ಲರೂ ಪ್ರೀತಿಸಬೇಕು ಎಂದು ತಿಳಿಸಿದ್ರು. ಅಲ್ಲದೇ ಕಾವೇರಿ ಮಾತೆಗೆ ರುದ್ರೇಶ್ ಕುಟುಂಬಸ್ಥರು ಕಾವೇರಿ ಮಾತೆಗೆ ವಸ್ತ್ರ ಸಮರ್ಪಿಸಿದರು.
ಚಿಕ್ಲಿಹೊಳೆಯಲ್ಲಿ ಇಲಿ ಜಿಂಕೆ ರಕ್ಷಣೆ!
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಚಿಕ್ಲಿಹೊಳೆ ಜಲಾಶಯದ ಕಾಲುವೆಯಲ್ಲಿ ಬಿದ್ದಿದ್ದ ಇಲಿ ಜಿಂಕೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ. ಕುಶಾಲನಗರ ವಲಯದ ಮೀನುಕೊಲ್ಲಿ ಉಪವಲಯದ ಚಿಕ್ಲಿಹೊಳೆ ನಾಲೆಯಲ್ಲಿ ಇಂದು ರಾತ್ರಿ ಇಲಿಜಿಂಕೆಯೊಂದು ಸಿಲುಕಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ತಂಡ ಪರಿಶೀಲಿಸಿದಾಗ ಇಲಿ ಜಿಂಕೆಯೊಂದು ನಾಲೆಯ ನೀರಲ್ಲಿ ಸಿಲುಕಿ, ಹೊರಬರಲು ಸಂಕಟ ಪಡುತ್ತಿತ್ತು. ತಂಡದವರು ಅದನ್ನು ನಾಲೆಯಿಂದ ಹೊರತೆಗೆದು ಅರಣ್ಯಕ್ಕೆ ಬಿಟ್ಟರು. ಉಪ ವಲಯ ಅರಣ್ಯಾಧಿಕಾರಿ ಸಚಿನ್ ನಿಂಬಾಳ್ಯರ್, ಗಸ್ತು ಅರಣ್ಯ ಪಾಲಕ ನಾಗರಾಜ್ ರಡರಟ್ಟಿ, ಅರಣ್ಯ ವೀಕ್ಷಕರಾದ ಅಪ್ಪಾಸ್ವಾಮಿ, ಜಗದೀಶ್, ಚಾಲಕ ವಾಸುದೇವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


