ಬಳ್ಳಾರಿ: ಮತಾಂತರ (Conversion) ತಡೆಯಲು ವಿಜಯನಗರ (Vijayanagar) ಜಿಲ್ಲೆಯ ತಾಂಡಾಗಳಲ್ಲಿ ವಿಶೇಷ ದೀಪೋತ್ಸವ (Deepotsav) ಈಗ ನಡೆಯುತ್ತಿದೆ.
ವಿಜಯನಗರ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹೂವಿನ ಹಡಗಲಿ, ಹಗರಿಬೊಮ್ಮನ ಹಳ್ಳಿ ತಾಲೂಕಿನ ತಾಂಡಾಗಳಲ್ಲಿ ಸಂತ ಸೇವಾಲಾಲ್ ಮಹಾರಾಜರ ದೀಪೋತ್ಸವ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ. ತಾಂಡಾದ ಜನರು ಶ್ರೀ ಸೇವಾಲಾಲ್ ಹಾಗೂ ಮಾರಿಯಮ್ಮ ದೇಗುಲದಲ್ಲಿ ದೀಪ ಹಚ್ಚಿ ಸಂಭ್ರಮಿಸಿದರು. ಇದನ್ನೂ ಓದಿ: ಕೊಡಚಾದ್ರಿ ಬಳಿ ಜೀಪ್, ಟಿಟಿ ನಡುವೆ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ
ಇತ್ತೀಚೆಗೆ ತಾಂಡಾಗಳಲ್ಲಿ ಮತಾಂತರ ಹೆಚ್ಚಾಗುತ್ತಿದೆ. ಇದನ್ನ ಅರಿತ ತಾಂಡಾದ ಪ್ರಮುಖರು ಜಾಗೃತಿ ಮೂಡಿಸಲು ವಿಶೇಷ ದೀಪೋತ್ಸವ ಮಾಡುತ್ತಿದ್ದಾರೆ.