Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದೂರಾದ ರಾಧಾಕೃಷ್ಣರನ್ನು ಜಗತ್ತು ಪ್ರೇಮದಿಂದಲೇ ಗುರುತಿಸೋದು!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Special | ದೂರಾದ ರಾಧಾಕೃಷ್ಣರನ್ನು ಜಗತ್ತು ಪ್ರೇಮದಿಂದಲೇ ಗುರುತಿಸೋದು!

Special

ದೂರಾದ ರಾಧಾಕೃಷ್ಣರನ್ನು ಜಗತ್ತು ಪ್ರೇಮದಿಂದಲೇ ಗುರುತಿಸೋದು!

Public TV
Last updated: November 13, 2025 9:46 pm
Public TV
Share
3 Min Read
WEB1
SHARE

ಹಾಯ್‌ ವಿಭಾ…
ಇಷ್ಟೆಲ್ಲ ಪ್ರೀತಿನ ಮನಸ್ಸಲ್ಲಿ ಇಟ್ಕೊಂಡು.. ನಮ್‌ ಪ್ರೀತಿ (Love) ಸಕ್ಸಸ್‌ ಆಗುತ್ತಾ? ಇಲ್ವಾ ಅನ್ನೋ ಅನುಮಾನ ಯಾಕೆ ನಿಂಗೆ? ಎಲ್ಲಾ ಪ್ರೇಮಿಗಳಿಗೂ (Lovers) ಇಂತಹದ್ದೇ ಆತಂಕ ಇದ್ದೆ ಇರತ್ತೆ ಬಿಡು. ಇನ್ನೂ ಟೈಮ್‌ ಇದೆ, ಅವಸರ ಏನಿಲ್ಲ.. ಆದ್ರೂ ಈ ಭಯ ಅಂದೆ ನೋಡು ನೀನು… ಅದನ್ನ ಮೀರಬೇಕು..! ಯಾಕಂದ್ರೆ ಪ್ರೇಮ ಅನ್ನೋದು ಅಪರಿಮಿತ ದೈರ್ಯ..! ಅದು ಜಗತ್ತಲ್ಲಿ ಏನೇ ಅಡ್ಡ ಬಂದ್ರೂ ಎದುರಿಸ್ತೀವಿ ಅನ್ನೋ ತಾಕತ್ತು! ಹಾಗಿದ್ರೂ ನಾವು ಭಯ ಪಡಬೇಕಿರೋದು ನನ್ನ ಲೆಕ್ಕದಲ್ಲಿ ನಮಗೆ ಮಾತ್ರ… ನಾನಂತೂ ಪ್ರೇಮದ ವಿಚಾರದಲ್ಲಿ ಸ್ವಾರ್ಥಿನೆ. ಆ ಪ್ರೇಮಕ್ಕಾಗಿ ನಾನು ಯಾರಿಗೆ ಬೇಕಾದ್ರೂ ಮೋಸ ಮಾಡೋಕೆ ರೆಡಿ ಇದ್ದೀನಿ.. ಆದ್ರೆ ನಿನಗಾಗ್ಲಿ, ನಮ್ಮ ಪ್ರೇಮಕ್ಕಾಗಲಿ ಮೋಸ ಮಾಡಲ್ಲ.

LOVE 2

ನಿನಗೆ ಅನ್ನಿಸಬಹುದು ಇವನಿನ್ನೂ ನನ್ನಷ್ಟು ಪ್ರಾಕ್ಟಿಕಲ್‌ ಆಗಿಲ್ಲ ಅಂತ.. ಇರಬಹುದು.. ನನಗೆ ಈ ಸಮಾಜದ ಭಯ, ಕುಟುಂಬದ ಭಯ ಖಂಡಿತಾ ಇಲ್ಲ. ನಾನು ನಿನ್ನ ಪ್ರೀತ್ಸಿದಿನಿ… ಅದನ್ನ ನಾನು ಎಲ್ಲರ ಮುಂದೂ ಒಪ್ಕೋತಿನಿ.. ಎಷ್ಟೋ ಜನರಿಗೆ ಪ್ರೇಮದಲ್ಲಿ ಅರಳಿ ನಿಂತ ಬಳಿಕ.. ಅವನು ನನ್ನವನು ಅಥವಾ ನನ್ನವಳು ಅಂತ ಹೇಳ್ಕೊಳ್ಳೋಕೆ… ಎಲ್ಲರಿಗೂ ಕಾಣುವಂತೆ ಜೊತೆಗೆ ಕೂತು ಮಾತಾಡೋಕೆ ಅದ್ಯಾಕೋ ನಾಚಿಕೆನೋ? ಅದ್ಯಾಕೆ ಭಯನೋ ನನಗೆ ಗೊತ್ತಿಲ್ಲ.

ನನಗೆ ಕಾಫಿ ಅಥವಾ ಟೀ ಇಷ್ಟ ಅಂದ ಹಾಗೆ, ನೇರವಾಗಿ ಅವನು, ಅವಳು ಇಷ್ಟ ಅನ್ನೋಕೆ ಯಾಕೆ ಸಾಧ್ಯ ಇಲ್ಲ? ನೀನು ನನ್ನ ಮಗು ಅಂತ ಹೇಳೊಕೆ ಯಾವ ತಾಯಿನೂ ಹಿಂಜರಿಯಲ್ಲ.. ಹಾಗೇ ಆ ಮಗುನೂ ಅಷ್ಟೇ ಸಾವಿರಾರು ಜನರ ಮುಂದೆ ಅಮ್ಮ ಅಂತ ಕರಿಯೋಕೆ ಯಾವುದೇ ಮುಜುಗರಪಡಲ್ಲ.. ಅದೇ ರೀತಿ, ನೀನು ನನ್ನವಳು ಅನ್ನೋಕು ನನಗೆ ಭಯ ಇಲ್ಲ.. ಪ್ರೇಮಕ್ಕೆ ಯಾವ ಮಿತಿಯೂ ಇಲ್ಲ..! ಸಿದ್ಧಾಂತ ಬೋರ್‌ ಆಯ್ತಾ..? ಆದ್ರೂ ನನ್ನ ಪಾಲಿಗೆ ಇದೇ ಸತ್ಯ ವಿಭಾ..!

LOVE 1 1

ಈಗ ನಿನ್ನ ಲೆಕ್ಕಾಚಾರದ ಬ್ಯಾಂಕ್‌ (Bank) ಬ್ಯಾಲೆನ್ಸ್ ನನ್ನಲ್ಲಿನೋ.. ಅಥವಾ ನಿನ್ನಲ್ಲಿನೋ ಇಲ್ಲ ಅಂತ ದೂರ ಆದ್ವಿ ಅಂತಿಟ್ಕೋ.. ಮುಂದೆ ಅದೆಲ್ಲ ಬಂದು, ನಾನೊಂದು ತೀರದಲ್ಲಿ ನೀನೊಂದು ತೀರದಲ್ಲಿ ನಿಂತು ಹಿಂದಿರುಗಿ ನೋಡಿದ್ರೆ…. ನಮ್ಮ ಎದೆಯ ಮಗು I Mean ನಮ್ಮ ಪ್ರೇಮ ಅನಾಥವಾಗಿ ಅದ್ಯಾವುದೋ ಮೂಲೆಯಲ್ಲಿ ಬಿಕ್ಕಳಿಸಬಾರದು.. ಅಲ್ವಾ? ಹಾಗೊಂದು ವೇಳೆ ದೂರಾದ್ರೆ ನಮ್ಮ ಮೂರ್ಖತನಕ್ಕೆ ನಾವು ನಗಬೇಕೆ ಹೊರತು, ಬೇಸರ ಪಡಬಾರದು!

ನಾನಂತೂ ಈ ಸಿಟ್ಟು, ದುಡ್ಡು, ಸಂಬಂಧ ಅಂತ ಬಂದಾಗ ಸಂಬಂಧಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡ್ತೀನಿ ವಿಭಾ… ನೆನಪಿದಿಯಾ… ಯಾವುದೋ ವಿಚಾರಕ್ಕೆ ನಿನ್ನ ಕಾಲಿಗೂ ಬೀಳೋಕು ಮುಂದಾಗಿದ್ದೆ… ನನ್ನವಳ ಮುಂದೆ ಇಷ್ಟು ಶರಣಾಗಿಲ್ಲ ಅಂದ್ರೆ ಹೇಗೆ..? ಇಷ್ಟು ಸೋತಾದ್ರೂ ಸಂಬಂಧ ಉಳಿಬೇಕು ಅನ್ನೋದು ನನ್ನ ಆಸೆ.. ಹಾಗಂತ ನಾನು ಅದನ್ನ ಸೋಲು ಅಂತ ಒಪ್ಪಿಕೊಳ್ಳಲ್ಲ..!

LOVE 2 1

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳ್ಬೆಕು ಅಂದ್ರೆ ನನ್ನ ಆಸ್ತಿ, ಅಂತಸ್ತು, ಬ್ಯಾಂಕ್‌ ಬ್ಯಾಲೆನ್ಸ್‌, ಗೌರವ ಎಲ್ಲ ನೀನೇ… ನೀನು ಇಲ್ದೇ ಇದ್ಯಾವುದು ಇಲ್ಲ… ಏನೇ ಆದ್ರೂ ನಿನ್ನ ಕೈ ನನ್ನ ಹೆಗಲ ಮೇಲೆ ಇರಬೇಕು… ಆಗಷ್ಟೇ ಆ ಸಾಧನೆಗೆ… ಒಂದು ಗತ್ತು..! ನೀನು ಹೇಳಿದ ಹಾಗೆ ಪತ್ರ ಓದುವಾಗ ನನ್ನ ಧ್ವನಿ ಕೇಳ್ಸುತ್ತೆ ಅಂದ್ಯಲ್ಲ.. ಹಾಗೆ ನಾನು ಏನೇ ಕೆಲಸ ಮಾಡ್ಬೇಕಾದ್ರೂ ನೀನು ಕಾಣ್ತಿಯಾ..! ನಾನು ನಿನ್ನ ಜೊತೆ ಮಾತಾಡ್ತಾನೆ ಕೆಲಸ ಮಾಡೋದು! ಯಾವುದೇ ವಿಚಾರ ಇರಲಿ, ಸ್ಥಳ, ಯಾವ ವಸ್ತು ಇರಲಿ ಅಲ್ಲೆಲ್ಲ ನೀನು ಹಾಜರ್‌ ಇರ್ತೀಯ..!

ನನಗೆ ಈಗಲೂ ನೀನು ಅದೇ ಕುಟುಂಬ, ಸಮಾಜ, ಹಣ ಅಂತ ದೂರ ಹೋಗ್ತಿಯಾ ಅನ್ನೋ ಭಯ ಇಲ್ಲ.. ನಾನು ನಿನ್ನನ್ನ ಪೂರ್ತಿ ಅರ್ಥ ಮಾಡ್ಕೊಂಡಿದಿನಿ.. ನೀನೇ ಹೇಳ್ತಿಯಲ್ಲ ʻಪ್ರೀತಿ ಅಂದ್ರೆ, ಪ್ರೀತಿ ಅಷ್ಟೇ ಅಂತ.. ಹಾಗೇ ಪ್ರೀತಿಸ್ತಾ ಕಾಲ ಕಳೆಯಬಹುದಲ್ವಾ..? ನಿಜ ವಿಭಾ.. ಹತ್ತಿರದಲ್ಲೇ ಇದ್ದು ಪ್ರೀತಿ ಮಾಡ್ಬೇಕು ಅಂತಾನೂ ಇಲ್ಲ.. ʻಸೂರ್ಯ ಅದೆಷ್ಟು ದೂರ ಇದಾನೆ.. ಭೂಮಿಗೆ ಪ್ರೀತಿಯ ಬೆಳಕು ಚೆಲ್ಲಲ್ವಾ..?ʼ ಅದೇ ರೀತಿ, ಪ್ರೀತಿ ಅನ್ನೋದಷ್ಟೇ ಅಂತಸ್ತು.. ನೀನು.. ನಿನ್ನನ್ನ ಪಡೆಯಲೇ ಬೇಕು ಅನ್ನೋದು ಆಸೆ.. ವ್ಯಾಮೋಹ..!! ಹೀಗೂ ಬದಲಾಗಬಹುದಲ್ವಾ ನಾನು?

Love 3

ಇದೆಲ್ಲ ನನಗೆ ನಾನೇ ಮಾಡಿಕೊಳ್ಳುವ ಸಮಾಧಾನನಾ? ಅಥವಾ ನಿನ್ನ ಗೊಂದಲಗಳಿಗೆ ನಾನು ಕಂಡುಕೊಂಡ ವಿಚಿತ್ರ ಉತ್ತರನಾ? ಗೊತ್ತಿಲ್ಲ.. ನನಗೂ ಗೊಂದಲವಿದೆ… ನಿನ್ನ ಪ್ರೀತಿಯ ಅಮಲಿನಲ್ಲಿ ತೇಲುವಾಗ ಪುಟಕ್ಕೆ ಇಳಿಸಿದ ಸಾಲುಗಳಿವು…! ಆದರೆ ನಮ್ಮ ಪ್ರೇಮದಲ್ಲಿ ಯಾವ ಗೊಂದಲವೂ ಇಲ್ಲ..!

ನಾವಿಬ್ರೂ ಬದುಕಲ್ಲಿ ಒಂದಾಗ್ತೀವೋ ಇಲ್ವೋ ಆ ಆಲೋಚನೆ ಬೇಡ್ವೇ ಬೇಡ ವಿಭಾ.. ಒಂದಾಗಲಿ.. ಆಗದೇ ಇರಲಿ… ಪ್ರೀತ್ಸೋಣ.. ಇಂದಿಗೂ ದೂರಾದ ರಾಧೆ ಕೃಷ್ಣರನ್ನ (Radha Krishna) ಜಗತ್ತು ಪ್ರೇಮದಿಂದಲೇ (Love) ಗುರುತಿಸುತ್ತಿದೆ!!

TAGGED:Kannada Love StorylovemoneyRadha Krishna
Share This Article
Facebook Whatsapp Whatsapp Telegram

Cinema news

Mia Khalifa
Viral | 71 ವರ್ಷದ ʻಮಿಸ್ಟರ್ ಬೀನ್ʼ ಜೊತೆ 32 ರ ಮಿಯಾ ಖಲೀಫಾ ಡೇಟಿಂಗ್‌?
Cinema Latest World
Dhurandhar 2 teaser
Dhurandhar 2 Teaser; ಹಮ್ಜಾ ಆಗಿ ರಣವೀರ್ ಸಿಂಗ್ ಮತ್ತೆ ಮಾಸ್ ಎಂಟ್ರಿ
Bollywood Cinema Latest Top Stories
dhanush maari sai pallavi
8 ವರ್ಷಗಳ ಬಳಿಕ ಒಂದಾದ ರೌಡಿಬೇಬಿ
Cinema Latest South cinema Top Stories
Ram Charan Mob At Hospital
ರಾಮ್ ಚರಣ್ ತಳ್ಳಾಟ ನೂಕಾಟ..ಆಸ್ಪತ್ರೆ ಅನ್ನೋದನ್ನೂ ನೋಡದ ಜನ
Cinema Latest Top Stories

You Might Also Like

bjp jds protest
Bengaluru City

ಅಬಕಾರಿ ಇಲಾಖೆ ಅವ್ಯವಹಾರದ ವಿರುದ್ಧ ‘ದೋಸ್ತಿ’ ಸಮರ; ಸದನದಲ್ಲಿ ಬಿಜೆಪಿ-ಜೆಡಿಎಸ್ ಅಹೋರಾತ್ರಿ ಧರಣಿ

Public TV
By Public TV
2 hours ago
Delhi Capitals Women
Cricket

WPL 2026: ಗುಜರಾತ್‌ ವಿರುದ್ಧ 7 ವಿಕೆಟ್‌ಗಳ ಜಯ – ಫೈನಲ್‌ಗೆ ಡೆಲ್ಲಿ ಲಗ್ಗೆ

Public TV
By Public TV
2 hours ago
Residential School
Bengaluru City

ವಸತಿ ಶಾಲೆ ಅರ್ಜಿ ಸಲ್ಲಿಸಲು ಫೆ.7ರವರೆಗೆ ಅವಕಾಶ – ಕೆಇಎ

Public TV
By Public TV
2 hours ago
kea
Bengaluru City

ಎಂ-ಫಾರ್ಮಾ: ಫೆ.7ರಿಂದ ಇಚ್ಛೆ/ಆಪ್ಷನ್ ನಮೂದಿಸಲು ಅವಕಾಶ- ಕೆಇಎ

Public TV
By Public TV
2 hours ago
HD Kumaraswamy
Latest

ತಂಬಾಕು ಮೇಲಿನ 18% ಅಬಕಾರಿ ಸುಂಕ ಹಿಂದಕ್ಕೆ – ಬೆಳೆಗಾರರು ನಿರಾಳ

Public TV
By Public TV
3 hours ago
Karwar Suicide
Crime

ರಿಶೇಲ್ ಡಿಸೋಜಾ ಆತ್ಮಹತ್ಯೆ ಕೇಸ್ – ಜೆಡಿಎಸ್ ಮುಖಂಡೆ ಪುತ್ರ ಮತ್ತೆರಡು ದಿನ ಪೊಲೀಸ್ ಕಸ್ಟಡಿಗೆ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?