ಚದುರಂಗದಲ್ಲಿ ಯಾರು ಗೆಲ್ತಾರೋ? ಯಾರು ಸೋಲ್ತಾರೋ ಗೊತ್ತಿಲ್ಲ: ಸ್ಪೀಕರ್

Public TV
1 Min Read
Speaker Ramesh kumar copy

– ಗುರುವಾರಕ್ಕೆ ವಿಧಾನಸಭಾ ಕಲಾಪ ಮುಂದೂಡಿಕೆ

ಬೆಂಗಳೂರು: ಪ್ರತಿಪಕ್ಷ ಸದಸ್ಯರು ಸದನದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದು ವಿರೋಧ ಪಕ್ಷವಿಲ್ಲದೇ ಇಲ್ಲದೇ ಕಲಾಪ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ವಿಧಾನಸಭೆಯನ್ನು ಗುರವಾರಕ್ಕೆ ಮುಂದೂಡಲಾಗುತ್ತಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

ಸದನ ಸಲಹಾ ಸಮತಿ ಸಭೆ ಬಳಿಕ ಅಧಿವೇಶನದಲ್ಲಿ ಭಾಗವಹಿಸಿ, ನಾಯಕರು ಈಗಾಗಲೇ ವಿಶ್ವಾಸಮತಯಾಚನೆ ಮನವಿ ಮಾಡಿದ್ದಾರೆ. ಈ ಬಗ್ಗೆ ನಾನು ಅವರಿಗೆ ಮಾಹಿತಿ ನೀಡಿದ್ದು, ಇಂದು ಬೆಳಗ್ಗೆ ಸದನ ಸದಸ್ಯರಾದ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿದ್ದೆ. ಈ ಸಂದರ್ಭದಲ್ಲಿ ಅವರು ನನಗೆ ಅವಿಶ್ವಾಸ ಮತಯಾಚನೆ ಮಾಡಲು ಮನವಿ ಮಾಡಿದ್ದರು. ಇಬ್ಬರ ಉದ್ದೇಶ ಒಂದೇ ಆಗಿರುವುದರಿಂದ ನನ್ನ ಅಭಿಪ್ರಾಯದೊಂದಿಗೆ ಕಾನೂನುನಿನ ಅಡಿ ನಿರ್ಧಾರ ಕೈಗೊಂಡಿದ್ದೇನೆ ಎಂದರು. ಅಲ್ಲದೇ ಈ ಬಗ್ಗೆ ಎರಡು ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ್ದಾಗಿ ಸ್ಪಷ್ಟಪಡಿಸಿದರು.

RAMESH KUMAR A

ಇದರಂತೆ ಗುರುವಾರದಂದು ವಿಶ್ವಾಸಮತಯಾಚನೆ ಚರ್ಚೆ ಮಾಡಲು ಸಮಯ ನಿಗದಿ ಮಾಡಲಾಗಿದೆ. ಈ ನಡುವೆ ಸದನದಲ್ಲಿ ಭಾಗವಹಿಸಲು ವಿರೋಧ ಪಕ್ಷದ ನಾಯಕರು ಭಾಗವಹಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಹಿನ್ನೆಲೆಯಲ್ಲಿ ಈ ಹಿಂದೆ ನಡೆದುಕೊಂಡ ರೀತಿಯನ್ನು ನಾನು ಅವಲೋಕಿಸಿಕೊಂಡಿದ್ದೇನೆ. ಆದ್ದರಿಂದ ಸಂಸದೀಯ ಕಲಾಪಗಳನ್ನು ಗುರುವಾರ 11 ಗಂಟೆಗೆ ಮುಂದೂಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಎರಡು ಪಕ್ಷಗಳಿಗೆ ಸೂಚನೆ ನೀಡಿದ ಅವರು, ಈ ಚದುರಂಗದಲ್ಲಿ ಯಾರು ಗೆಲ್ತಿರೋ ಯಾರು ಸೋಲ್ತಿರೋ ಗೊತ್ತಿಲ್ಲ. ಅದು ನನಗೆ ಮುಖ್ಯವೂ ಅಲ್ಲ. ಆದರೆ ಮಾತಿನ ಬಗ್ಗೆ ನಿಗಾ ಇರಲಿ. ನಿಮ್ಮ ಮಾತುಗಳೆಲ್ಲವೂ ದಾಖಲೆಯಾಗಲಿದೆ. ಅನೇಕ ಜನ ಬದುಕು ಮುಡುಪಿಟ್ಟು ಈ ಅವಕಾಶ ನೀಡಿದ್ದಾರೆ. ನಾನು ಯಾರನ್ನ ಮೆಚ್ಚಿಸಲು ಇಲ್ಲಿ ಕುಳಿತಿಲ್ಲ. ನಾನು ಅಸಹಾಯಕ ಸ್ಥಾನದಲ್ಲಿ ಇದ್ದು, ನೀವು ನನ್ನ ಮೇಲೆ ವಾಕ್ಬಾಣಗಳನ್ನು ಪ್ರಯೋಗಿಸಿದರೂ ನಾನು ಈ ಸ್ಥಾನದಲ್ಲಿ ಇರುವುದರಿಂದ ಏನು ಮಾತನಾಡಲಾರೆ ಆದರೆ ನಾನು ಉತ್ತರಿಸಲು ಸಾಧ್ಯವಾಗದೇ ಕುಳಿತಿಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *