ಬೆಂಗಳೂರಿಗೆ ವಿಶ್ವಮಾನ್ಯ ಗರಿಮೆ ಕೊಟ್ಟ `ಗಾರುಡಿಗ’ ಎಸ್‌ಎಂಕೆ – ವಿಶ್ವದ ಪ್ರಖ್ಯಾತ ಐಟಿ ಕಂಪನಿಗಳಿಗೆ ಸ್ಪೇಸ್

Public TV
2 Min Read
SMK Gift

ಬೆಂಗಳೂರು: ವಿಶ್ವಭೂಪಟದಲ್ಲಿಂದು ಬೆಂಗಳೂರಿಗೆ ಪ್ರತ್ಯೇಕ ಸ್ಥಾನವಿದೆ.. ಕಳೆದ ಎರಡು ದಶಕಗಳಿಂದ ಐಟಿ ರಂಗದಲ್ಲಿ ಅಗ್ರಗಣ್ಯವಾಗಿ ನಿಂತಿದೆ. ಭಾರತಕ್ಕೆ ಸೆಮಿಕಂಡಕ್ಟರ್ ಹಬ್ ಆಗಿ ಮಾರ್ಪಟ್ಟಿದೆ. ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ, ಐಟಿ ಕ್ಯಾಪಿಟಲ್ ಆಫ್ ಇಂಡಿಯಾ, ಎಲೆಕ್ಟಾçನಿಕ್ಸ್ ಕ್ಯಾಪಿಟಲ್ ಆಫ್ ಇಂಡಿಯಾ ಎಂದು ಬೆಂಗಳೂರು ಕರೆಯಲ್ಪಡುತ್ತಿದೆ.

ಬೆಂಗಳೂರಿಗೆ ಇಷ್ಟು ಗರಿಮೆಗಳು ದಕ್ಕಲು ಕಾರಣ ಎಸ್‌.ಎಂ ಕೃಷ್ಣ ಅವರು ಮಾಡಿದ ಕೃಷಿ ಎಂದರೇ ತಪ್ಪಾಗಲಾರದು.. ಬೆಂಗಳೂರನ್ನು ಸಿಂಗಾಪುರ ಮಾಡುವ ಘೋಷಣೆಯೊಂದಿಗೆ ಎಸ್‌ಎಂ ಕೃಷ್ಣ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ರು. ಆದ್ರೆ, ಬೆಂಗಳೂರು ಸಿಂಗಾಪುರ ಆಗದಿದ್ರೂ ಎಸ್‌ಎಂ ಕೃಷ್ಣ ದೂರದೃಷ್ಟಿಯ ಕಾರಣ ಐಟಿ ಸಿಟಿಯಾಗಿ ಹೊರಹೊಮ್ಮಿತು. ಅಷ್ಟಕ್ಕೂ, ಬೆಂಗಳೂರಿಗೆ ಮತ್ತು ರಾಜ್ಯಕ್ಕೆ ಎಸ್‌ಎಂ ಕೃಷ್ಣ ಅವರು ಕೊಟ್ಟ ಕೊಡುಗೆಗಳ ಪಟ್ಟಿಯನ್ನು ಒಮ್ಮೆ ಕಣ್ಣಾಯಿಸೋಣ…

ಬೆಂಗಳೂರಿಗೆ ಎಸ್‌ಎಂ ಕೃಷ್ಣ ಕೊಡುಗೆ
* ಜಗತ್ತಿನ ಪ್ರಖ್ಯಾತ ಐಟಿ ಕಂಪನಿಗಳಿಗೆ ಬೆಂಗಳೂರಿನಲ್ಲಿ ಸ್ಪೇಸ್
* ಐಟಿ ರಂಗದ ಅಭಿವೃದ್ಧಿಗೆ ಅನುಗುಣವಾದ ವಾತಾವರಣ
* ಐಟಿ ಪಾರ್ಕ್, ಎಸ್‌ಇಝೆಡ್, ಮೂಲಸೌಕರ್ಯಕ್ಕೆ ಆದ್ಯತೆ
* ತಮ್ಮ ಭಾಷಾ ಪ್ರೌಢಿಮೆ ಬಳಸಿ ಐಟಿ ದಿಗ್ಗಜರ ಜೊತೆ ಮಂಥನ
* ತೆರಿಗೆ ಪ್ರೋತ್ಸಾಹಕ, ಸರಳೀಕೃತ ನಿಯಮ.. ಸ್ಟಾರ್ಟಪ್‌ಗಳಿಗೆ ಬೆಂಬಲ
* ಬೆಂಗಳೂರಿಗೆ ಪ್ರತ್ಯೇಕ ಟಾಸ್ಕ್ಫೋರ್ಸ್, ವಿದೇಶಿ ಹೂಡಿಕೆ ಆಕರ್ಷಣೆ
* ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬೆಂಗಳೂರಿನ ಬಗ್ಗೆ ಪ್ರಮೋಷನ್
* ಇನ್ಫೊಸಿಸ್, ವಿಪ್ರೋ, ಟಾಟಾ ಮೊದಲಾದ ಕಂಪನಿಗಳಿಗೆ ಗಟ್ಟಿ ನೆಲೆ
* ಐಟಿ ಹೊರಗುತ್ತಿಗೆ ಸೇವೆ ಒದಗಿಸುವ ಅತೀದೊಡ್ಡ ಹಬ್
* ಕೆಂಪೇಗೌಡ ಏರ್‌ಪೋರ್ಟ್, ಮೆಟ್ರೋಗೆ ಆದ್ಯತೆ
* ಪೀಣ್ಯ ಕೈಗಾರಿಕಾ ಪ್ರದೇಶದ ರೂವಾರಿ
* ವಿಧಾನಸೌಧದ ಪ್ರತಿಕೃತಿ ವಿಕಾಸಸೌಧ ನಿರ್ಮಾಣ

ರಾಜ್ಯಕ್ಕೆ ಎಸ್‌ಎಂ ಕೃಷ್ಣ ಕೊಡುಗೆ
* ಬೆಂಗಳೂರಿಗೆ ಪರ್ಯಾಯ ನಗರವಾಗಿ ಮೈಸೂರು
* ಬೆಂಗಳೂರು-ಮೈಸೂರು ನಾಲ್ಕು ಪಥದ ಹೆದ್ದಾರಿ
* ಮೈಸೂರು ಹೊರವರ್ತುಲ ರಸ್ತೆ
* ಮೈಸೂರಲ್ಲಿ ಇನ್ಫೋಸಿಸ್, ವಿಪ್ರೋ ಕ್ಯಾಂಪಸ್
* ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ
* ಸ್ತ್ರೀ ಶಕ್ತಿ ಯೋಜನೆಗೆ ಆದ್ಯತೆ
* ಯಶಸ್ವಿನಿ ಯೋಜನೆ ಜಾರಿಗೆ ತಂದ ಕೀರ್ತಿ
* ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ
* ಶಾಲಾ ಮಕ್ಕಳಿಗೆ ಕಂಪ್ಯೂಟರ್ ಕಲಿಕೆ ವ್ಯವಸ್ಥೆ

Share This Article