Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚಿತ್ರದುರ್ಗ ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದ ನಿರಾಶ್ರಿತರ ಮನವೊಲಿಸಿದ ಲೇಡಿ ಸಿಂಗಂ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chitradurga | ಚಿತ್ರದುರ್ಗ ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದ ನಿರಾಶ್ರಿತರ ಮನವೊಲಿಸಿದ ಲೇಡಿ ಸಿಂಗಂ

Chitradurga

ಚಿತ್ರದುರ್ಗ ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದ ನಿರಾಶ್ರಿತರ ಮನವೊಲಿಸಿದ ಲೇಡಿ ಸಿಂಗಂ

Public TV
Last updated: April 17, 2020 11:38 am
Public TV
Share
2 Min Read
ctd sp radhika
SHARE

ಚಿತ್ರದುರ್ಗ: ಕೊರೊನಾ ಹರಡದಂತೆ ತಡೆಗಟ್ಟಲು ಜಾರಿಮಾಡಿರುವ ಲಾಕ್‍ಡೌನ್ ಅವಧಿ ವಿಸ್ತರಣೆಯಿಂದಾಗಿ ಕಳೆದ ಎರಡು ದಿನಗಳಿಂದ ಚಿತ್ರದುರ್ಗ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ಎನಿಸಿದ್ದ ಯಾದಗಿರಿಯ ನಿರಾಶ್ರಿತರ ಮನವೊಲಿಸುವಲ್ಲಿ ಚಿತ್ರದುರ್ಗ ಎಸ್‍ಪಿ ಜಿ. ರಾಧಿಕಾ ಕೊನೆಗೂ ಯಶಸ್ವಿಯಾಗಿದ್ದಾರೆ.

ಭಾರತ ಲಾಕ್‍ಡೌನ್ ವಿಸ್ತರಣೆಯಾದ ಬೆನ್ನಲ್ಲೇ ತಮ್ಮ ಸ್ವಗ್ರಾಮಗಳಿಗೆ ನಮ್ಮನ್ನು ಕಳುಹಿಸಿ ಇಲ್ಲವಾದರೆ ನಮಗೆ ನೀವು ಕೊಡುವ ಅನ್ನ-ನೀರು ಬೇಡವೆಂದು ಹಠಹಿಡಿದು, ಚಿಕ್ಕ ಹಸುಗೂಸುಗಳಿಗೂ ಹಾಲುಣಿಸದಂತೆ ನಿರಾಶ್ರಿತರು ಉಪವಾಸ ಮಾಡುತ್ತಾ ಪಟ್ಟು ಹಿಡಿದಿದ್ದರು.

ctd sp radhika 1

ಹೀಗಾಗಿ ಅವರನ್ನು ಬುಧವಾರ ಮೊಳಕಾಲ್ಮೂರಿನ ಯರ್ರೇನಹಳ್ಳಿಯಿಂದ ಬೇರೆಡೆಗೆ ಎರಡು ಗುಂಪುಗಳಾಗಿ ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಆಗ ಮೊಳಕಾಲ್ಮೂರಿನ ಅಕ್ಕಪಕ್ಕದ ಹಳ್ಳಿಗಳ ಗ್ರಾಮಸ್ಥರು ಮಾಹಿತಿಯ ಕೊರತೆಯಿಂದಾಗಿ ನಿರಾಶ್ರಿತರನ್ನೇ ಕೊರೊನಾ ಸೊಂಕಿತರೆಂದು ಭಾವಿಸಿ, ಅವರನ್ನು ನಮ್ಮ ಊರೊಳಗೆ ಕರೆತರಬೇಡಿ ಎಂದು ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದರು. ರಾತ್ರಿಯಿಡಿ ಹೋರಾಟ ನಡೆಸಿದ್ದರು.

ಚಿತ್ರದುರ್ಗಕ್ಕೆ ಕರೆ ತರೋಣವೆಂದರೆ ಅಲ್ಲಿನ ಹಾಸ್ಟಲ್‍ಗಳೆಲ್ಲಾ ಭರ್ತಿಯಾಗಿದ್ದವು. ಹೀಗಾಗಿ ಬುಧವಾರ ತಡರಾತ್ರಿ ಚಳ್ಳಕೆರೆ ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಹಾಸ್ಟಲ್‍ಗಳಲ್ಲಿ ಎರಡು ಕಡೆ ಈ ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಹೀಗಾಗಿ ಈ ಎಲ್ಲಾ ವಿಷಯವನ್ನು ತಿಳಿದಿದ್ದ ಚಿತ್ರದುರ್ಗ ಎಸ್‍ಪಿ ರಾಧಿಕಾ ಅವರು ಕರ್ತವ್ಯದಲ್ಲಿ ಖಡಕ್ ಅಧಿಕಾರಿ ಆಗಿದ್ದರು ಸಹ ಆ ಚಿಕ್ಕ ಚಿಕ್ಕ ಮಕ್ಕಳ ಪರಿಸ್ಥಿತಿ ಹಾಗೂ ನಿರಾಶ್ರಿತರ ಅಸಹಯಕತೆ ಕಂಡು ಮನದಲ್ಲೆ ಮರುಗಿದ್ದರು.

ctd sp radhika 2

ಸುಮಾರು 30 ಜನ ಮಕ್ಕಳು ಸೇರಿದಂತೆ 126 ಜನ ನಿರಾಶ್ರಿತರಿರುವ ಕೇಂದ್ರಕ್ಕೆ ಗುರುವಾರ ದಿಡೀರ್ ಧಾವಿಸಿ ಎಸ್‍ಪಿ ಆ ನಿರಾಶ್ರಿತರ ಸಂಕಷ್ಟ ಆಲಿಸಿದರು. ಕರುಣೆ ಹಾಗೂ ಮಾನವೀಯತೆ ಅನ್ನೋದು ಅಧಿಕಾರಿಗಳಲ್ಲೂ ಅಡಗಿರುತ್ತದೆ ಅನ್ನೋದಕ್ಕೆ ಸಾಕ್ಷಿ ಎಂಬಂತೆ ಮೊದಲು ಅಧಿಕಾರಿಯಾಗಿ ಕಾನೂನು ಹಾಗೂ ಸದ್ಯದ ವಾತಾವರಣದ ಬಗ್ಗೆ ನಿರಾಶ್ರಿತರಿಗೆ ಅರಿವು ಮೂಡಿಸಿದರು. ಬಳಿಕ ಹಸುಗೂಸುಗಳಿಗೆ ದಯವಿಟ್ಟು ಉಪವಾಸವಿಡಬೇಡಿ ಎಂದು ನಿರಾಶ್ರಿತರಲ್ಲಿ ಮನವಿ ಮಾಡಿದರು. ಅಲ್ಲದೇ ಇಂತಹ ಸಮಸ್ಯೆಗಳು ಸಹಜವಾಗಿದ್ದು, ಕೊರೊಮಾ ಸೋಂಕು ಹರಡದಂತೆ ಪ್ರಧಾನಿ ಮೋದಿ ಅವರು ಲಾಕ್‍ಡೌನ್ ಜಾರಿಮಾಡಿದ್ದಾರೆ ಹೊರೆತು ಯಾರ ಮೇಲಿನ ದ್ವೇಷವೇನಲ್ಲ ಎಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ctd sp radhika 3

ಈಗ ನಾವು ನಿಮ್ಮನ್ನು ನಿಮ್ಮ ಗ್ರಾಮಗಳಿಗೆ ಕಳುಹಿಸಿದರು ಸಹ ನೀವುಗಳು ನಿಮ್ಮ ಊರೊಳಗೆ ಪ್ರವೇಶಿಸೋದು ಸುಲಭವಲ್ಲ ಎಂದು ತಿಳಿ ಹೇಳಿದರು. ನಿರಾಶ್ರಿತರ ಸ್ವಗ್ರಾಮಗಳು ಹಾಗೂ ಅವರ ಜಿಲ್ಲೆಯಲ್ಲಿರುವ ಜನರ ಮನಸ್ಥಿತಿಯ ವಾಸ್ತವವನ್ನು ಅರ್ಥವಾಗುವಂತೆ ಹೇಳಿದರು. ಇದರಿಂದಾಗಿ ಸ್ವಲ್ಪ ಸಮಾಧಾನಗೊಂಡ ನಿರಾಶ್ರಿತರು ರಾಧಿಕಾ ಅವರ ಮಾತಿನಲ್ಲಿದ್ದ ಸತ್ಯವನ್ನು ಯೋಚಿಸಿದ್ದು, ಅವರ ಮನದಲ್ಲಿದ್ದ ಊರಿಗೆ ಹೋಗುವ ಆಸೆಯನ್ನು ತಾತ್ಕಾಲಿಕವಾಗಿ ಬದಿಗಿಟ್ಟಿದ್ದಾರೆ.

ಹಾಗೆಯೇ ನಿರಾಶ್ರಿತರಿಗಾಗಿ ರಾಧಿಕಾ ಅವರು ಪ್ರೀತಿಯಿಂದ ತಂದಿದ್ದ ಹಣ್ಣು ಸೇರಿದಂತೆ ದಿನ ಬಳಕೆಯ ಅಗತ್ಯ ವಸ್ತುಗಳನ್ನು ನೀಡಲಾಗಿದ್ದು, ಅವನ್ನೆಲ್ಲಾ ಪಡೆದು ಸದ್ಯ ನಿರಾಶ್ರಿತರು ಶಾಂತವಾಗಿದ್ದಾರೆ. ಹೀಗಾಗಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ಎನಿಸಿದ್ದ ನಿರಾಶ್ರಿತರ ಹಠವಾದಿತನವನ್ನು ಲೇಡಿ ಸಿಂಗಂ ಅವರ ಮನಗೆಲ್ಲುವ ಮೂಲಕ ಲಾಠಿ ಹಿಡಿಯುವ ಕೈಯಲ್ಲಿ ಜನರ ಮನಗೆಲ್ಲುವ ಶಕ್ತಿ ಕೂಡ ಇರುತ್ತದೆ ಅನ್ನೋದನ್ನು ಸಾಬೀತು ಮಾಡಿದ್ದಾರೆ.

TAGGED:ChitradurgaLockdownPublic TVRefugeesSP G. Radhikaಎಸ್‍ಪಿ ಜಿ. ರಾಧಿಕಾಚಿತ್ರದುರ್ಗನಿರಾಶ್ರತರುಪಬ್ಲಿಕ್ ಟಿವಿಲಾಕ್‍ಡೌನ್
Share This Article
Facebook Whatsapp Whatsapp Telegram

Cinema news

Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories

You Might Also Like

MQ 4C Triton
Latest

ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ 1,859 ಕೋಟಿ ಮೌಲ್ಯದ MQ-4C ಟ್ರೈಟಾನ್ ಡ್ರೋನ್ ನಾಪತ್ತೆ

Public TV
By Public TV
8 minutes ago
kalaburagi train
Kalaburagi

ಪಂಢರಪುರ-ತಿರುಪತಿ, ಬೆಂಗಳೂರು ಕಂಟೋನ್ಮೆಂಟ್-ಕಲಬುರಗಿ, SMVT ಬೆಂಗಳೂರು-ಬೀದರ್ ವಿಶೇಷ ರೈಲುಗಳ ಸೇವೆ ಮುಂದುವರಿಕೆ

Public TV
By Public TV
31 minutes ago
Match Rain RR vs RCB
Cricket

IPL 2026 | RR Vs RCB ಪಂದ್ಯಕ್ಕೆ ಮಳೆ ಅಡ್ಡಿ, ಟಾಸ್‌ ವಿಳಂಬ

Public TV
By Public TV
1 hour ago
Bengaluru Rain 2
Bengaluru City

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಆರಂಭ – ಬೆಂಗಳೂರಲ್ಲಿ ಬಿರುಗಾಳಿ ಸಹಿತ ಮಳೆ

Public TV
By Public TV
1 hour ago
pune murder
Crime

ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ 6 ವರ್ಷದ ಹೆತ್ತ ಮಗನನ್ನೇ ಕೊಂದ ಪಾಪಿ ತಾಯಿ

Public TV
By Public TV
1 hour ago
ruk samhita yaga udupi
Latest

ಪ್ರಪಂಚದಲ್ಲಿ ಯುದ್ಧೋನ್ಮಾದ ನಿಲ್ಲಲಿ: ವೆಂಕಟರಮಣ ದೇವಸ್ಥಾನದಲ್ಲಿ ಋಕ್ ಸಂಹಿತಾ ಯಾಗ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?