Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಎಸ್‍ಪಿ ಜೊತೆ ಮೈತ್ರಿ ರಚಿಸಿದ್ದು ದೊಡ್ಡ ತಪ್ಪು: ಮಾಯಾವತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಎಸ್‍ಪಿ ಜೊತೆ ಮೈತ್ರಿ ರಚಿಸಿದ್ದು ದೊಡ್ಡ ತಪ್ಪು: ಮಾಯಾವತಿ

Latest

ಎಸ್‍ಪಿ ಜೊತೆ ಮೈತ್ರಿ ರಚಿಸಿದ್ದು ದೊಡ್ಡ ತಪ್ಪು: ಮಾಯಾವತಿ

Public TV
Last updated: June 24, 2019 2:58 pm
Public TV
Share
2 Min Read
Mayawati 3
SHARE

– ಅಖಿಲೇಶ್ ಯಾದವ್ ಅಪಕ್ವತೆಯಿಂದಾಗಿ ಸೋಲು
– ಮುಂದಿನ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ
– ಮುಲಾಯಂ ಪರ ಮತ ಕೇಳಬಾರದಿತ್ತು

ಲಕ್ನೋ: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸಮಾಜವಾದಿ ಪಾರ್ಟಿ(ಎಸ್‍ಪಿ) ಮತ್ತು ಬಹುಜನ ಸಮಾಜವಾದಿ ಪಾರ್ಟಿ(ಬಿಎಸ್‍ಪಿ) ನಾಯಕರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಚುನಾವಣಾ ಪೂರ್ವ ಮೈತ್ರಿ ರಚಿಸಿಕೊಂಡು ಕಣಕ್ಕಿಳಿದಿದ್ದ ಎರಡೂ ಪಕ್ಷಗಳು ಭಾರೀ ಹಿನ್ನಡೆಯನ್ನು ಅನುಭವಿಸಿದೆ. ಹೀಗಾಗಿ ಎರಡೂ ಪಕ್ಷಗಳ ನಾಯಕರು ಇಷ್ಟು ದಿನ ಬಹಿರಂಗವಾಗಿ ಸೋಲಿಗೆ ಮೈತ್ರಿಯೇ ಕಾರಣ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿಕೊಂಡು ಬಂದಿದ್ದರು. ಇದೀಗ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಎಸ್‍ಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ದೊಡ್ಡ ತಪ್ಪೆಂದು ನೇರವಾಗಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.

Mayawati akhilesh

ಮುಂದಿನ ವಿಧಾನಸಭೆಯ ಉಪ ಚುನಾವಣೆಯಲ್ಲಿ ಬಿಎಸ್‍ಪಿ ಏಕಾಂಗಿ ಸ್ಪರ್ಧಿಸಲಿದೆ ಎಂಬ ಅಂಶವನ್ನು ಮಾಯಾವತಿ ರಿವೀಲ್ ಮಾಡಿದ್ದಾರೆ. ಇದೇ ವೇಳೆ ಎಸ್‍ಪಿ ಮತ್ತು ನಾಯಕ ಮುಲಾಯಂ ಸಿಂಗ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಲೋಕಸಮರದ ಫಲಿತಾಂಶದ ಬಳಿಕ ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಒಂದು ಬಾರಿ ಕರೆ ಮಾತನಾಡಿಲ್ಲ ಎಂದು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

MAYAWATI AKHILESH

ಭಾನುವಾರ ಪಕ್ಷದ ಸಂಸದರು, ಶಾಸಕರು ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಪಕ್ಷದ ಮುಖ್ಯಸ್ಥೆಯಾಗಿರುವ ಮಾಯಾವತಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬಾರದಿತ್ತು. ಚುನಾವಣೆ ಸಂಬಂಧಿಸಿದ ನಿರ್ಣಯ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದೇವೆ ಎಂದು ಸಭೆಯಲ್ಲಿ ಹೇಳಿದ್ದಾರೆಂದು ಮಾಧ್ಯಮಗಳು ಬಿತ್ತರಿಸಿವೆ.

vlcsnap 2018 08 06 08h21m55s190

 

ಅಖಿಲೇಶ್ ಅಪರಿಪಕ್ವತೆಯ ನಾಯಕತ್ವ:
ಅಖಿಲೇಶ್ ಯಾವದ್ ಅವರ ಅಪರಿಪಕ್ವತೆಯ ನಾಯಕತ್ವದಿಂದಲೇ ಸ್ಪರ್ಧಿಸಿದ್ದ ಬಹು ಕ್ಷೇತ್ರಗಳಲ್ಲಿ ಸೋಲು ಕಾಣಬೇಕಾಯ್ತು. ಹಾಗಾಗಿ ಮುಂದಿನ ದಿನಗಳಲ್ಲಿ ಎಸ್‍ಪಿ ಜೊತೆ ಮೈತ್ರಿ ಉಳಿಸಿಕೊಳ್ಳುವ ಅಗತ್ಯ ಇಲ್ಲ. ಎಸ್‍ಪಿ ಸಹಯೋಗದಿಂದಲೇ ಬಿಎಸ್‍ಪಿ 10 ಸಂಸದರು ಗೆಲುವು ಕಂಡಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ರಾಜ್ಯದಲ್ಲಿ ಹರಡಲಾಗುತ್ತಿದೆ. ಹಾಗಾದರೆ ಯಾದವ್ ಕುಟುಂಬಸ್ಥರು ಚುಬನಾವಣೆಯಲ್ಲಿ ಸೋತಿದ್ದು ಯಾಕೆ ಎಂದು ಮಾಯಾವತಿ ಪ್ರಶ್ನೆ ಮಾಡಿದ್ದಾರೆ.

mulayam singh akhilesh yadav

ತಾಜ್ ಕಾರಿಡಾರ್ ಹಗರಣದಲ್ಲಿ ನನ್ನನ್ನು ಸಿಲುಕಿಸಲು ಕೇವಲ ಬಿಜೆಪಿ ಪ್ರಯತ್ನ ಮಾಡಿರಲಿಲ್ಲ. ಅದರಲ್ಲಿ ಮುಲಾಯಂ ಸಿಂಗ್ ಯಾದವ್ ಸಹ ಒಬ್ಬರಾಗಿದ್ದರು. ಇಂತಹ ಘಟನೆಗಳನ್ನು ಮರೆತು ಚುನಾವಣೆಯಲ್ಲಿ ಮುಲಾಯಂ ಸಿಂಗ್ ಪರ ಮತ ಯಾಚನೆ ಮಾಡಿದ್ದನ್ನು ಅಖಿಲೇಶ್ ಯಾವದ್ ಪರಿಗಣಿಸಲಿಲ್ಲ. ಲೋಕಸಮರದ ಫಲಿತಾಂಶದ ಬಳಿಕ ಅಖಿಲೇಶ್ ಯಾದವ್ ಒಂದು ಬಾರಿಯೂ ಕರೆ ಮಾಡಿ ಮಾತನಾಡಲಿಲ್ಲ. ಕೊನೆಗೆ ನಾನೇ ಕರೆ ಮಾಡಿ ಕುಟುಂಬಸ್ಥರೊಂದಿಗೆ ಮಾತನಾಡಿದೆ ಎಂದರು.

Mayawati Akhilesh

ಎಸ್‍ಪಿ ಮತ ನಮ್ಗೆ ಬಂದಿಲ್ಲ:
ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದರೂ ಸಮಾಜವಾದಿ ಪಕ್ಷದ ಮತಗಳು ನಮ್ಮ ಅಭ್ಯರ್ಥಿಗಳಿಗೆ ಬಂದಿಲ್ಲ. ಹಾಗಾಗಿ ಈ ಮಹಾಮೈತ್ರಿ ಮೊದಲಿನಂತೆ ಮುಂದುವರಿಯುವುದು ಅನುಮಾನ. ಆದ್ರೆ ಬಿಎಸ್‍ಪಿಯ ಬಹುತೇಕ ಮತಗಳು ಎಸ್‍ಪಿ ಅಭ್ಯರ್ಥಿಗಳು ಪಾಲಾಗುವಂತೆ ನಮ್ಮ ಕಾರ್ಯಕರ್ತರು ತಳಮಟ್ಟದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈ ವಿಷಯಗಳ ಬಗ್ಗೆ ಅಖಿಲೇಶ್ ಗೆ ತಿಳಿದಿದ್ದರೂ ಮೌನವಾಗಿದ್ದಾರೆ. ಉಪಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ನಾವು ಗೆಲುವು ಕಾಣಬೇಕಿದೆ ಎಂದು ಹೇಳಿದ್ದಾರೆ.

akhilesh yadav

TAGGED:Akhilesh YadavbspLok Sabha ElectionsMayawatiPublic TVspಅಖಿಲೇಶ್ ಯಾದವ್ಎಸ್‍ಪಿಪಬ್ಲಿಕ್ ಟಿವಿಬಿಎಸ್‍ಪಿಮಾಯಾವತಿಲೋಕಸಭಾ ಚುನಾವಣೆ
Share This Article
Facebook Whatsapp Whatsapp Telegram

Cinema news

Spandana Somanna 1
ಲಕ್‌ ನಿಂದ ಉಳಿದುಕೊಂಡಿರಲಿಲ್ಲ, ಕಾಮೆಂಟ್‌ಗಳಿಗೆ ತಲೆ ಕೆಡಿಸಿಕೊಳ್ಳಲ್ಲ – ಮನಬಿಚ್ಚಿ ಮಾತನಾಡಿದ ಸ್ಪಂದನಾ
Cinema Latest Top Stories TV Shows
Devanobba Jadugara Movie
ದೇವನೊಬ್ಬ ಜಾದೂಗಾರ ಟೀಸರ್ ರಿಲೀಸ್ ಮಾಡಿದ ಶ್ವೇತಾ
Cinema Latest Sandalwood Top Stories
Poorna Mysore
ಡಾಲಿ ಧನಂಜಯ್ ನಿರ್ಮಾಣದ ಹೊಸ ಚಿತ್ರಕ್ಕೆ ಪೂರ್ಣ ಹೀರೋ
Cinema Latest Sandalwood
Century Gowda
ತಿಥಿ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ ನಿಧನ
Cinema Latest Mandya Sandalwood Top Stories

You Might Also Like

Gurmeet Ram Rahim singh
Court

ಅತ್ಯಾಚಾರ ಅಪರಾಧಿ ರಾಮ್ ರಹೀಮ್‌ಗೆ ಮತ್ತೆ ಬಿಡುಗಡೆ ಭಾಗ್ಯ – 15ನೇ ಬಾರಿಗೆ 40 ದಿನ ಪೆರೋಲ್

Public TV
By Public TV
23 minutes ago
Siddaramaiah 4
Districts

ರಾಜ್ಯದ ದೀರ್ಘಾವಧಿ ಸಿಎಂ – ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾದ ಸಿಎಂ

Public TV
By Public TV
42 minutes ago
Kogilu Layout BJP Protest
Bengaluru City

ಕೋಗಿಲು ಉಳಿಸಿ, ಅಕ್ರಮ ವಲಸಿಗರನ್ನು ತೊಲಗಿಸಿ – ಬಿಜೆಪಿಯಿಂದ ಬೃಹತ್ ಪ್ರತಿಭಟನೆ

Public TV
By Public TV
51 minutes ago
RCB Team
Cricket

ಬಾಂಗ್ಲಾದಲ್ಲಿ 2026ರ ಐಪಿಎಲ್‌ ಪ್ರಸಾರ ಬಂದ್‌ – RCB ಬ್ರ್ಯಾಂಡ್‌ಗೂ ಸಮವಿಲ್ಲ ಕ್ರಿಕೆಟ್‌ನ ಆದಾಯ!

Public TV
By Public TV
1 hour ago
Train
Latest

IRCTC ಹೊಸ ನಿಯಮ – ಇನ್ಮುಂದೆ ರೈಲ್ವೇ ಟಿಕೆಟ್ ಬುಕಿಂಗ್‌ಗೆ ಆಧಾರ್ ಲಿಂಕ್ ಕಡ್ಡಾಯ

Public TV
By Public TV
1 hour ago
Cyber Crime
Latest

ಹೆಚ್ಚುತ್ತಿದೆ Cyber Crime – ಆರು ವರ್ಷಕ್ಕೆ 52,976 ಕೋಟಿಗೂ ಅಧಿಕ ವಂಚನೆ, ದೇಶದಲ್ಲೇ ಕರ್ನಾಟಕ ಸೆಕೆಂಡ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?