ಬೆಂಗಳೂರು: ರಾಜ್ಯಕ್ಕೆ ಮೇ 30ರ ಒಳಗಡೆ ಮುಂಗಾರು ಮಳೆ ಪ್ರವೇಶಿಸಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಕೇರಳಕ್ಕೆ ಮುಂಗಾರು ಮಳೆ ಪ್ರವೇಶಿಸಿ ಐದು ಕಳೆದರೂ ಇನ್ನೂ ರಾಜ್ಯಕ್ಕೆ ಆಗಮಿಸದೇ ಇರುವುದು ರೈತರಿಗೆ ಬೇಸರ ತಂದಿದೆ.
ಮೇ 28 ರಿಂದ 30 ರೊಳಗೆ ಕೇರಳ ಮೂಲಕ ದೇಶಕ್ಕೆ ಮುಂಗಾರು ಪ್ರವೇಶ ಮಾಡಲಿದೆ. ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡುತ್ತಿದ್ದ ಹಾಗೇ ರಾಜ್ಯಕ್ಕೂ ಮುಂಗಾರು ಪ್ರವೇಶ ಆಗಲಿದೆ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಈ ಹಿಂದೆ ಮಾಹಿತಿ ನೀಡಿತ್ತು.
ಆದರೆ ಇನ್ನೂ ಯಾಕೆ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿಲ್ಲ ಎಂದು ಪಬ್ಲಿಕ್ ಟಿವಿ ಪ್ರಶ್ನಿಸಿದ್ದಕ್ಕೆ, ನೈಋತ್ಯ ಮಾರುತಗಳು ಬಲ ಹೊಂದದೇ ಇರುವುದು ಹಾಗೂ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣವಾಗಿರುವುದು ಮಳೆ ವಿಳಂಬಕ್ಕೆ ಕಾರಣವಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
- Advertisement
ಹಾಗಾದರೆ ಯಾವಾಗ ಮಳೆಯಾಗಬಹುದು ಎಂದು ಕೇಳಿದ್ದಕ್ಕೆ, ರಾಜ್ಯಕ್ಕೆ ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಉತ್ತರಿಸಿದರು.
- Advertisement
ಕಳೆದ ವರ್ಷ ರಾಜ್ಯಕ್ಕೆ ಮುಂಗಾರು ಮಳೆ ಜೂನ್ 9 ರಂದು ಪ್ರವೇಶ ಮಾಡಿತ್ತು.