ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿದ್ದು, ಸೌಂದರ್ಯ ನೋಡಲು ಆಸ್ಪತ್ರೆಯ ಸಹ ವೈದ್ಯರು ಶಾಕ್ ಆಗಿದ್ದಾರೆ.
ಬಿಎಸ್ವೈ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ತಮ್ಮ ಅಪಾಟ್ಮೆಂಟ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೌರಿಂಗ್ನಲ್ಲಿ ಜನರಲ್ ಸರ್ಜನ್ ಆಗಿದ್ದ ಸೌಂದರ್ಯ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅವರನ್ನು ಬೌರಿಂಗ್ ಆಸ್ಪತ್ರೆಯ ಸಹ ವೈದ್ಯರ ದಂಡು ಜಮಾಯಿಸುತ್ತಿದ್ದಾರೆ. ಇದನ್ನೂ ಓದಿ: ಅತ್ತಿಯಾಗಬೇಕಿದ್ದವಳ ಮೇಲೆ ಕಣ್ಣಾಕಿದ್ದ ಸಹೋದರನ ಕತ್ತು ಸೀಳಿದ ಅಣ್ಣ!
ಈ ಕುರಿತಂತೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಸಹವೈದ್ಯರೊಬ್ಬರು, ಆಕೆ ಇಲ್ಲಿ ಕಾರ್ಯನಿರ್ವಹಿಸುವಾಗ ಯಾವುದೇ ರೀತಿಯಿಂದಲೂ ಆಕೆಗೆ ಡಿಪ್ರೆಷನ್ ಸಮಸ್ಯೆ ಇರಲಿಲ್ಲ. ಆಕೆ ಓರ್ವ ಉತ್ತಮ ವೈದ್ಯೆ. ಈ ಹಿಂದೆ ಅವರ ಅಜ್ಜ ಸಿಎಂ ಆಗಿದ್ದಾಗಲೂ ತಾನೊಬ್ಬ ಸಿಎಂ ಮೊಮ್ಮಗಳು ಎಂಬ ಅಹಂ ಎಂದೂ ಕೂಡ ಇರಲಿಲ್ಲ. ಇದಕ್ಕಿದಂತೆ ಆಕೆಗೆ ಡಿಪ್ರೆಷನ್ ಆಗಿದ್ದು ಹೇಗೋ ಏನೋ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ
ಡೆಲಿವರಿ ಸಮಯದಲ್ಲಿ ಕೂಡ ಸೌಂದರ್ಯ ಕೆಲಸದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ ಇದೀಗ ಆಕೆಯ ಸಾವು ನಿಜಕ್ಕೂ ಶಾಕಿಂಗ್ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಸೌಂದರ್ಯ ನೋಡಲು ಬೌರಿಂಗ್ ಆಸ್ಪತ್ರೆಯ ಸಹ ವೈದ್ಯರು ದೌಡು ಮಾರ್ಚರಿಯ ಬಳಿ ಆಗಮಿಸುತ್ತಿದ್ದಾರೆ.