ಸಾರಿ ಮಮ್ಮಿ, ಪಪ್ಪಾ – ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ: ಸೌಜನ್ಯ ಡೆತ್‍ನೋಟ್

Public TV
2 Min Read
soujanya

ಬೆಂಗಳೂರು: ಕನ್ನಡ ಕಿರುತೆರೆ ನಟಿ ಸೌಜನ್ಯ ಇಂದು ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೌಜನ್ಯ ಡೆತ್ ನೋಟ್ ಬರೆದಿಟ್ಟಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಇಷ್ಟ ಇಲ್ಲದೇ ಇದ್ದರೂ ಸಾವಿಗೆ ಶರಣಾಗಿರುವಂತೆ ಡೆತ್ ನೋಟ್‍ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅಡವಿಡುವಾಗ ಅಸಲಿ, ತೆಗೆಯುವಾಗ ನಕಲಿ – ಗ್ರಾಮಸ್ಥರಿಂದ ಬ್ಯಾಂಕಿಗೆ ಮುತ್ತಿಗೆ

soujanya death note

ನನ್ನನ್ನು ಕ್ಷಮಿಸಿ. ನನಗೆ ಜೀವನ ತುಂಬಾ ಕಷ್ಟ ಆಗುತ್ತಿದೆ. ಸಾರಿ ಮಮ್ಮಿ. ಸಾರಿ ಪಪ್ಪಾ. ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ಪಪ್ಪಾ. ಲವ್ ಯೂ ಸೋ ಮಚ್. ಯಶು ಅಕ್ಕ ನಾನು ಈ ರೀತಿ ಮಾಡಿಕೊಳ್ಳುತ್ತಿರುವುದಕ್ಕೆ ಸಾರಿ. ನನ್ನ ಮಾನಸಿಕ ಸ್ಥಿತಿ ಸರಿ ಇಲ್ಲ.. ನನ್ನ ಆರೋಗ್ಯ ಸಮಸ್ಯೆ ನನ್ನನ್ನು ದಿನೇ ದಿನೇ ಕೊಲ್ಲುತ್ತಿದೆ. ನಾನು ನಿಮ್ಮನ್ನು ಬಿಟ್ಟು ಹೋಗುತ್ತಿದ್ದೇನೆ. ನನಗೆ ಹೆಚ್ಚು ಸಮಯ ಇಲ್ಲ. ನನಗೆ ತುಂಬಾ ತಲೆ ನೋವು ಆಗ್ತಿದೆ. ನಾನು ಯಾವುದೇ ನಾಟಕ ಮಾಡ್ತಿಲ್ಲ. ಎಲ್ಲರಿಗೂ ಸಾರಿ. ಹೇಳಲು ತುಂಬಾ ಇದೆ. ಬರೆಯೋಕೆ ತುಂಬಾ ಇದೆ. ಆದರೆ ಎಲ್ಲ ಬರೆಯಲು ಇಷ್ಟ ಇಲ್ಲ. ನಿಮ್ಮನ್ನು ಕ್ಷಮೆ ಕೇಳುತ್ತಿದ್ದೇನೆ. ಎಲ್ಲರೂ ಹುಷಾರಾಗಿರಿ. ಇದು ನನ್ನ ಆತ್ಮಹತ್ಯೆಯ ಪತ್ರ ಅಲ್ಲ. ಹಾಗೆ ಯೋಚನೆ ಮಾಡಬೇಡಿ. ಇದು ನನ್ನ ಅಪಾಲಜಿ ಲೆಟರ್ ಅಂದುಕೊಳ್ಳಿ. ನಿಮ್ಮನ್ನು ಕ್ಷಮೆ ಕೇಳುತ್ತಿದ್ದೇನೆ. ನನ್ನ ನಿರ್ಧಾರಕ್ಕೆ ಕ್ಷಮೆ ಇರಲಿ ಎಂದು ಬರೆದಿದ್ದಾರೆ.

SOWJANYA MADAPPA

ಸದ್ಯ ಸೌಜನ್ಯ ಸಾವಿನ ವಿಚಾರವಾಗಿ ಅವರ ತಂದೆ, ನನ್ನ ಮಗಳು ಹಾಗೂ ಮಗ ಬೆಂಗಳೂರಿನಲ್ಲಿ ವಾಸವಾಗಿದ್ದು, ಅವರಿಬ್ಬರೂ ಕೂಡ ಬೇರೆ, ಬೇರೆ ಕಡೆ ವಾಸ ಮಾಡುತ್ತಿದ್ದಾರೆ. ನಿನ್ನೆ ಸಂಜೆ ಕರೆ ಮಾಡಿ ಇಬ್ಬರು ಕೊಡಗಿಗೆ ಬರುವುದಾಗಿ ತಿಳಿಸಿದ್ದರು. ಇಂದು ಅವರು ಬರಬೇಕಿತ್ತು ಆದರೆ ಈ ರೀತಿಯಲ್ಲಿ ಆಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜೊತೆಗೆ ನಿನ್ನೆ ಸಂಜೆ ಕರೆ ಮಾಡಿದಾಗ ತನ್ನ ಬಳಿ 6 ಲಕ್ಷ ರೂಪಾಯಿ ಹಣ ಇದೆ ಎಂದು ಸೌಜನ್ಯ ಹೇಳಿದ್ದಳು. ಆದರೆ ಇದೀಗ ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಅಂದರೆ ಅನುಮಾನ ಮೂಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಅಡವಿಡುವಾಗ ಅಸಲಿ, ತೆಗೆಯುವಾಗ ನಕಲಿ – ಗ್ರಾಮಸ್ಥರಿಂದ ಬ್ಯಾಂಕಿಗೆ ಮುತ್ತಿಗೆ

Share This Article
Leave a Comment

Leave a Reply

Your email address will not be published. Required fields are marked *