ಕುಡಿಯಲು ಹಣ ಕೊಡಲಿಲ್ಲವೆಂದು ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಕೊಂದ!

Public TV
1 Min Read
ygr murder

ಯಾದಗಿರಿ: ಮದ್ಯ ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಮಗನೇ ತಾಯಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ.

YGR MURDER AV 2

ಅಮಾತೆವ್ವ ಕಂಪ್ಲಿ(70) ಮಗನಿಂದಲೇ ಹತಳಾದ ತಾಯಿ. ಅಮಾತೆವ್ವರ ಮಗ ರಾಮಣ್ಣ ತಾಯಿಗೆ ಪ್ರತಿಬಾರಿಯೂ ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದನು. ಸೋಮವಾರ ತಾಯಿ ಹಣ ಕೊಡದಕ್ಕೆ ಕುಡಿದ ಅಮಲಿನಲ್ಲಿ ತಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

YGR MURDER AV 4

ಅಮಾತೆವ್ವ ತಾವು ಪಡೆಯುತ್ತಿದ್ದ ವೃದ್ಧಾಪ್ಯ ವೇತನವನ್ನು ಕೂಡಿಟ್ಟುಕೊಂಡಿದ್ದರು. ಹೀಗಾಗಿ ತಾಯಿಯ ಈ ವೃದ್ಧಾಪ್ಯ ವೇತನದ ಮೇಲೆ ಮಗ ರಾಮಣ್ಣ ಕಣ್ಣು ಹಾಕಿದ್ದು, ಹಣ ಕೊಡುವಂತೆ ಕೇಳುತ್ತಿದ್ದನು. ದೊಣ್ಣೆಯಿಂದ ಹಲ್ಲೆಗೊಳಗಾದ ಅಮಾತೆವ್ವ ಗಂಭೀರವಾಗಿ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸದ್ಯ ಪೊಲೀಸರು ಆರೋಪಿ ರಾಮಣ್ಣನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

YGR MURDER AV 3

 

 

Share This Article
Leave a Comment

Leave a Reply

Your email address will not be published. Required fields are marked *