Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bagalkot

ಮಗುವಿನಂತೆ ಆರೈಕೆ ಮಾಡಿದ್ದ ನರ್ಸ್ ಗಾಗಿ 20 ವರ್ಷದಿಂದ ಕಾಯ್ತಿದ್ದಾರೆ ಮಾಜಿ ಸೈನಿಕ

Public TV
Last updated: July 26, 2019 11:27 am
Public TV
Share
3 Min Read
KARIL
SHARE

– 2 ಕೈ, 1 ಕಾಲು ಕಳೆದುಕೊಂಡ ಯೋಧನ ಕರುಣಾಜನಕ ಕಥೆ ಓದಿ

ಬಾಗಲಕೋಟೆ: ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಒಬ್ಬೊಬ್ಬ ಯೋಧನ ಕಥೆ ಒಂದೊಂದು ರೀತಿ ಇದೆ. ಆದರೆ ಇಲ್ಲೊಬ್ಬರು ಯೋಧನ ಕಥೆ ತುಂಬಾ ವಿಭಿನ್ನವಾಗಿದ್ದು, ಇವರು ಮಾರಣಾಂತಿಕವಾಗಿ ಗಾಯಗೊಂಡ ವೇಳೆ ತಾಯಿಯಂತೆ ಆರೈಕೆ ಮಾಡಿದ್ದ ಓರ್ವ ಸ್ಟಾಪ್ ನರ್ಸ್ ಭೇಟಿಗಾಗಿ ಮಗುವಿನಂತೆ 20 ವರ್ಷಗಳಿಂದಲೂ ಕಾಯುತ್ತಿದ್ದಾರೆ. ಇದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹುಲಸಗೇರಿ ಗ್ರಾಮದ ನಿವಾಸಿ ರಂಗಪ್ಪ ಆಲೂರ ವೀರಯೋಧನ ಕರುಣಾಜನಕ ಕಥೆಯಾಗಿದೆ.

ಕಾರ್ಗಿಲ್ ಯುದ್ದ ನಡೆದು ಈಗ 20 ವರ್ಷಗಳು ಗತಿಸಿವೆ. ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಗೆಲುವಿನ ನಗೆ ಬೀರಿದ ದಿನ ಇಂದು. ಅಂತಹ ಭಯಾನಕ ಯುದ್ಧದಲ್ಲಿ 21 ದಿನಗಳ ಕಾಲ ರಂಗಪ್ಪ ಆಲೂರ ಅವರು ಹೋರಾಡಿ ಶತ್ರುಗಳ ಸದೆಬಡಿದವರು. ರಂಗಪ್ಪ ಆಲೂರು 1993ರಲ್ಲಿ ಭಾರತೀಯ ಸೇನೆಗೆ ನೇಮಕಗೊಂಡಿದ್ದರು. ನೇಮಕಗೊಂಡ 6 ವರ್ಷದಲ್ಲಿ ಕಾರ್ಗಿಲ್ ಯುದ್ಧ ಶುರುವಾಗಿದ್ದು, ಈ ಯುದ್ಧದಲ್ಲಿ 21 ದಿನಗಳ ಕಾಲ ಭಾಗಿಯಾಗಿದ್ದ ರಂಗಪ್ಪ ಆಲೂರು 21 ನೇ ದಿನ ಶತ್ರುಗಳ ಮಿಸೈಲ್‍ಗೆ ತುತ್ತಾಗಿ ತಮ್ಮ ಎರಡು ಕೈ ಹಾಗೂ ಒಂದು ಕಾಲನ್ನು ಕಳೆದುಕೊಂಡಿದ್ದರು. ಸೇನೆಯಲ್ಲಿ ಇವರ ಸೇವೆಗೆ ಸರ್ಕಾರದಿಂದ ಸಿಗಬೇಕಾದ ಭೂಮಿ ಸೈಟ್, ಪರಿಹಾರ ಧನ ಎಲ್ಲವೂ ಸಿಕ್ಕಿದೆ. ಆದರೆ ಇವರ ತುಡಿತವೇ ಬೇರೆಯಾಗಿದೆ.

vlcsnap 2019 07 26 08h56m39s245

ಅಂದು ಯುದ್ಧದಲ್ಲಿ ಗಾಯಗೊಂಡು ಎರಡು ವರ್ಷಗಳ ಕಾಲ ಚಿಕಿತ್ಸೆಗೆ ಒಳಗಾದ ವೇಳೆ ನನ್ನನ್ನು ಮಗುವಿನಂತೆ ಕನ್ನಡತಿ ಸ್ಟಾಪ್ ನರ್ಸ್ ಗೀತಾ ಆರೈಕೆ ಮಾಡಿದ್ದರು. ಚಂಡೀಗಢದ ಮಿಲಿಟರಿ ಆಸ್ಪತ್ರೆಯಲ್ಲಿ ಎರಡು ವರ್ಷ ಆರೈಕೆ ಮಾಡಿದ ಗೀತಾ ಅವರನ್ನು ಭೇಟಿಯಾಗಬೇಕೆಂದು 20 ವರ್ಷದಿಂದ ಕಾದಿದ್ದೇನೆ. ಹೇಗೋ ಮಾಡಿ ಅವರ ನಂಬರ್ ಪಡೆದಿದ್ದು, ಇದೇ ತಿಂಗಳು 29ರಂದು ಅವರನ್ನು ಭೇಟಿ ಮಾಡಲು ಹೊಗಲಿದ್ದೇನೆ. ಅವರು ನನ್ನ ತಾಯಿ, ಅವರೇ ನನ್ನ ಪಾಲಿನ ಭಾರತಮಾತೆ. ಅವರನ್ನು ಭೇಟಿಯಾದಾಗಲೇ ನನ್ನ ಜೀವನ ಸಾರ್ಥಕ ಎಂದು ರಂಗಪ್ಪ ಆಲೂರ ಹೇಳಿದ್ದಾರೆ.

ರಂಗಪ್ಪ ಆಲೂರ ಅವರಿಗೆ ಎರಡು ಕೈಗಳಿಲ್ಲ, ಒಂದು ಕಾಲು ಇಲ್ಲ. ಇದರಿಂದ ಪ್ರತಿನಿತ್ಯ ಇವರಿಗೆ ಕುಟುಂಬಸ್ಥರ ಸಹಕಾರ ಬೇಕೇ ಬೇಕು. ಕುಟುಂಬಸ್ಥರು ಕೂಡ ಇವರನ್ನು ತುಂಬಾ ಕಾಳಜಿಯಿಂದ ಆರೈಕೆ ಮಾಡುತ್ತಿದ್ದಾರೆ. ತಮ್ಮ ಪರಿಸ್ಥಿತಿ ವೈಕಲ್ಯತನದಿಂದ ಕೂಡಿದ ಕಾರಣ ಮತ್ತೊಬ್ಬರಿಗೆ ಹೊರೆಯಾಗಬಾರದೆಂದು ಇವರು ಮದುವೆ ಕೂಡ ಆಗಿಲ್ಲ. ಆದರೆ ಇವರ ಮನದಲ್ಲಿ ಸದಾ ಕಾಡುತ್ತಿರುವ ಕೊರಗು ಸ್ಟಾಪ್ ನರ್ಸ್ ಗೀತಾ ಅವರನ್ನು ಭೇಟಿಯಾಗುವುದು ಮಾತ್ರ. ದೇಹದಲ್ಲಿ ಒಟ್ಟು 28 ಆಪರೇಷನ್ ಆಗಿದ್ದು, ಇವರ ಎರಡು ವರ್ಷದ ಚಿಕಿತ್ಸಾ ಅವಧಿಯಲ್ಲಿ ತಮ್ಮ ಸ್ವಂತ ಮಗುವಿನಂತೆ ಗೀತಾ ಅವರು ಈ ಯೋಧನನ್ನು ಆರೈಕೆ ಮಾಡಿದ್ದಾರೆ. ವೀರಯೋಧ ಎಂಬ ಅಭಿಮಾನ ಜೊತೆಗೆ ನಮ್ಮ ಕನ್ನಡಿಗ ಎಂಬ ಕಾಳಜಿ ಎಲ್ಲಕ್ಕಿಂತಲೂ ತಾಯಿ ಹೃದಯ, ತಾಯಿ ಪ್ರೀತಿ ತೋರಿಸಿ ಇವರು ಗುಣಮುಖವಾಗಲು ಕಾಣರಾಗಿದ್ದು ಗೀತಾ ಎಂದು ಸಂಬಂಧಿಕರಾದ ಶ್ರೀಕಾಂತ್ ತಿಳಿಸಿದ್ದಾರೆ.

vlcsnap 2019 07 26 08h57m19s101

ಮಹಾತಾಯಿಯನ್ನು ಭೇಟಿ ಮಾಡಲು ಇವರು ಬರೋಬ್ಬರಿ 20 ವರ್ಷ ಕಾದಿದ್ದಾರೆ. ಕೊನೆಗೂ ಸತತ ಪ್ರಯತ್ನದ ಮೇರೆಗೆ ಇತ್ತೀಚೆಗೆ ಅವರ ಫೋನ್ ನಂಬರ್ ಪಡೆದು ಒಂದು ಫೋಟೋ ಪಡೆದಿದ್ದಾರೆ. ದಿನಾಲೂ ಅವರ ಮೊಬೈಲ್‍ನಲ್ಲಿ ಗೀತಾ ಅವರ ಫೋಟೋ ನೋಡಿಯೇ ಇವರು ಜೀವನ ಆರಂಭಿಸುತ್ತಾರೆ. ಇದರ ಜೊತೆಗೆ ಇಂದಿಗೂ ಸೇನೆ ಬಗ್ಗೆ ಅಭಿಮಾನ ದೇಶ ಕಾಯಬೇಕೆಂಬ ತುಡಿತವಿದೆ. ಇದಕ್ಕಾಗಿ ಸಮಯ ಸಿಕ್ಕಾಗಲೆಲ್ಲ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಕಾರ್ಗಿಲ್ ಯುದ್ಧದ ಬಗ್ಗೆ ಅನುಭವ ಹಂಚಿಕೊಳ್ಳುತ್ತಾರೆ. ಸೇನೆಗೆ ಸೇರುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಾ ಸೈನ್ಯಕ್ಕೆ ಸೇರಲು ಹೇಗೆಲ್ಲ ತಯಾರಾಗಬೇಕೆಂದು ಸಲಹೆ ನೀಡುತ್ತಾರೆ. ಇವರನ್ನು ಕಂಡರೆ ವಿದ್ಯಾರ್ಥಿಗಳಿಗೆ, ಸ್ಥಳೀಯರಿಗೆ ಮತ್ತು ಕುಟುಂಬಸ್ಥರಿಗೆ ಎಲ್ಲರಿಗೂ ಹೆಮ್ಮೆಯಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ವಿದ್ಯಾರ್ಥಿ ಸಮರ್ಥ್ ಹೇಳಿದ್ದಾನೆ.

TAGGED:bagalakoteKargil warnursePublic TVsoldierಕಾರ್ಗಿಲ್ ಯುದ್ಧನರ್ಸ್ಪಬ್ಲಿಕ್ ಟಿವಿಬಾಗಲಕೋಟೆಸೈನಿಕ
Share This Article
Facebook Whatsapp Whatsapp Telegram

Cinema Updates

Actor Darshan At Bengaluru Airpor
ಏರ್‌ಪೋರ್ಟ್‌ನಲ್ಲಿ ದರ್ಶನ್ ಫೋಟೋ ರಿವೀಲ್
Bengaluru City Cinema Latest Sandalwood Top Stories
Yogaraj Bhat Jayant Kaikini
ಯೋಗರಾಜ್ ಭಟ್ ಗೀತ ಗುಚ್ಛಕ್ಕೆ ಕಾಯ್ಕಿಣಿ ಸಾಥ್
Bengaluru City Cinema Latest Sandalwood
31 Days
ಜಾಲಿಡೇಸ್ ಹುಡುಗನ ಚಿತ್ರಕ್ಕೆ ಮನೋಹರ್ ಸಂಗೀತ : ಇದು 150ನೇ ಸಿನಿಮಾ
Cinema Latest Sandalwood Top Stories
K Manju and Style Shrinu
ಸದ್ಯದಲ್ಲೇ ಕೆ.ಮಂಜು ಮತ್ತು ಸ್ಮೈಲ್ ಶ್ರೀನು ಕಾಂಬಿನೇಶನ್ ಚಿತ್ರ
Cinema Latest Sandalwood Top Stories
Sidharth Malhotra Kiara
ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ದಂಪತಿಗೆ ಹೆಣ್ಣು ಮಗು ಜನನ
Bollywood Cinema Latest Main Post

You Might Also Like

Chikkaballapura
Chikkaballapur

ಚಿಕ್ಕಬಳ್ಳಾಪುರ | ಆನ್‌ಲೈನ್‌ ಜೂಜಿಗೆ ದಾಸನಾಗಿದ್ದ ಹೆಡ್ ಕಾನ್‌ಸ್ಟೆಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ

Public TV
By Public TV
5 minutes ago
KN Rajanna Surjewala 2
Bengaluru City

ಸುರ್ಜೇವಾಲಾಗೆ ಡೋಂಟ್ ಕೇರ್ ಅಂದ ಸಚಿವ ರಾಜಣ್ಣ – ಯುರೋಪ್‌ಗೆ ಫ್ಯಾಮಿಲಿ ಟೂರ್

Public TV
By Public TV
14 minutes ago
Siddaramaiah 6
Bengaluru City

50% ಒಟ್ಟಾರೆ ಮೀಸಲಾತಿ ಮಿತಿ ತೆಗೆದು, 75%ಗೆ ಹೆಚ್ಚಿಸಬೇಕು: ಸಿದ್ದರಾಮಯ್ಯ ಪ್ರಸ್ತಾಪ

Public TV
By Public TV
30 minutes ago
NCERT Text Book
Latest

NCERT 8ನೇ ತರಗತಿ ಪಠ್ಯಪುಸ್ತಕ ಪರಿಷ್ಕರಣೆ – ದೆಹಲಿ ಸುಲ್ತಾನರ ಕ್ರೌರ್ಯ, ಮೊಘಲರ ಅಸಹಿಷ್ಣುತೆ ಉಲ್ಲೇಖ

Public TV
By Public TV
33 minutes ago
Gali Anjaneya Temple Bengaluru
Bengaluru City

ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ – ಹೈಕೋರ್ಟ್‌ನಲ್ಲಿ ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

Public TV
By Public TV
36 minutes ago
Narendra Modi
Latest

ನವೀಕರಿಸಬಹುದಾದ ಇಂಧನದಲ್ಲಿ ಭಾರತ ಅದ್ಭುತ ಸಾಧನೆ – ಪ್ರಧಾನಿ ಮೋದಿ ಶ್ಲಾಘನೆ

Public TV
By Public TV
47 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?