ಬಳ್ಳಾರಿ: ಚುನಾವಣೆಯ ಸಂದರ್ಭದಲ್ಲೇ ಅಭ್ಯರ್ಥಿಯ ತಾಯಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಿರಗುಪ್ಪ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ ಎಸ್ ಸೋಮಲಿಂಗಪ್ಪರ ತಾಯಿ ವಿಧಿವಶರಾಗಿದ್ದಾರೆ
ಮೃತ ಹೊನ್ನರಮ್ಮಗೆ 80 ವರ್ಷವಾಗಿದ್ದು, ಅವರು ಅಕಾಲಿಕ ನಿಧನ ಹೊಂದಿರುವುದರಿಂದ ಉತ್ಸಾಹದಲ್ಲಿದ್ದ ಅಭ್ಯರ್ಥಿಯ ಮನೆಯಲ್ಲೀಗ ಶೋಕ ಮಡುಗಟ್ಟಿದೆ
ನಾಳೆ ಸೋಮಲಿಂಗಪ್ಪರ ಸ್ವಗ್ರಾಮ ತೆಕ್ಕಲಕೋಟಿಯಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು. ಅಭ್ಯರ್ಥಿಯ ತಾಯಿ ನಿಧನಕ್ಕೆ ಹಲವು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.