ಬೆಂಗಳೂರು: ನಟ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ‘ಸಲಗ’ ಸಿನಿಮಾ ಇದೇ ತಿಂಗಳು ತೆರೆಗೆ ಬರಲು ಸಿದ್ಧವಾಗಿದೆ. ಈ ವೇಳೆ ದುನಿಯಾ ವಿಜಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ.
ಶುಕ್ರವಾರ ದುನಿಯಾ ವಿಜಿ ಪತ್ನಿ ಕೀರ್ತಿ ಮತ್ತು ಚಿತ್ರತಂಡದ ಜೊತೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು. ದುನಿಯಾ ವಿಜಿಗೆ ಗಾಯಕ ನವೀನ್ ಸಜ್ಜು ಕೂಡ ಸಾಥ್ ನೀಡಿದ್ದರು. ನಂತರ ದೇವರಿಗೆ ವಿಶೇಷವಾದ ಪೂಜೆ ಮಾಡಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಅಲ್ಲದೇ ಬೆಟ್ಟದಲ್ಲಿರುವ ಆನೆಗೆ ಹಣ್ಣು-ಹಂಪಲು ಕೊಟ್ಟು ಆಶೀರ್ವಾದ ಪಡೆದುಕೊಂಡಿದ್ದಾರೆ.
ಇದೇ ವೇಳೆ ಅಭಿಮಾನಿಗಳು ಮುಗಿಬಿದ್ದಿದ್ದು, ಸೆಲ್ಫಿ ಕ್ಕಿಕ್ಕಿಸಿಕೊಂಡಿದ್ದಾರೆ. ನವೀಜ್ ಸಜ್ಜು, ದುನಿಯಾ ವಿಜಿ ಅವರ ಸರಳತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ವಿಜಿ ಅವರ ಸರಳ ವ್ಯಕ್ತಿತ್ವದ ಬಗ್ಗೆ ಬರೆದುಕೊಂಡಿದ್ದಾರೆ.
“ಸರಳತೆಯ ಸಲಗ, ಶುಕ್ರವಾರ ವಿಜಯಣ್ಣನೊಂದಿಗೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದೆ. ಬೆಟ್ಟಕ್ಕೆ ಹೋಗುವ ಮಾರ್ಗಮಧ್ಯೆ ಸಿಕ್ಕ ಈ ಪುಟ್ಟ ಗುಡಿಸಲು ಹೋಟೆಲ್ಗೆ ಕರೆದೊಯ್ದ ವಿಜಿಯಣ್ಣ ಉಪಾಹಾರ ಕೊಡಿಸಿದ್ದರು. ಸ್ಟಾರ್, ಸೆಲೆಬ್ರಿಟಿ ಎಂಬ ಯಾವ ಅಹಂ ಇಲ್ಲದ ವಿಜಿಯಣ್ಣ ಇರುವುದೇ ಹೀಗೆ, ಬದುಕುತ್ತಿರುವುದು ಹೀಗೆ. ಇವರು ತುಂಬಾ ಸರಳವಾದ ವ್ಯಕ್ತಿ. ನಿನ್ನೆಯ ಜರ್ನಿ ಅದ್ಭುತವಾಗಿತ್ತು. ಮುಂದಿನ ಸಲಗ ಜರ್ನಿ ಕೂಡ ಯಶಸ್ವಿಯಾಗಿ ಇರಲೆಂದು ಮಾದೇಶ್ವರನಲ್ಲಿ ಬೇಡಿಕೊಳ್ಳುತ್ತೇನೆ” ಎಂದು ಪ್ರೀತಿ ಬರೆದುಕೊಂಡಿದ್ದಾರೆ.
https://www.instagram.com/p/B9ZWv81hV8E/
ದುನಿಯಾ ವಿಜಿ ನಟನೆಯ ‘ಸಲಗ’ ಚಿತ್ರಕ್ಕೆ ಸಿಂಗರ್ ನವೀನ್ ಸಜ್ಜು ಎರಡು ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿ ಹಾಡಿದ್ದಾರೆ. ಈಗಾಗಲೇ ರೆಕಾರ್ಡಿಂಗ್ ಮುಗಿಸಿದ ತಂಡ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ. ಇದು ದುನಿಯಾ ವಿಜಿ ನಿರ್ದೇಶನದ ಮೊದಲ ಚಿತ್ರ, ಸಿನಿಮಾದಲ್ಲಿ ನಟಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ಸದ್ಯದಲ್ಲೇ ಹಾಡು ರಿಲೀಸ್ ಆಗಲಿದೆ.