Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ‘ಸಿಂಹರೂಪಿಣಿ’ ದಿವ್ಯಾನುಭೂತಿ : ನಟ ವಿಜಯ್ ಚೆಂಡೂರ್
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

‘ಸಿಂಹರೂಪಿಣಿ’ ದಿವ್ಯಾನುಭೂತಿ : ನಟ ವಿಜಯ್ ಚೆಂಡೂರ್

Public TV
Last updated: October 17, 2024 1:47 pm
Public TV
Share
2 Min Read
Vijay Chendur
SHARE

ಕೆ.ಎಂ ನಂಜುಂಡೇಶ್ವರ ನಿರ್ಮಾಣ ಮತ್ತು ಕಿನ್ನಾಳ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಸಿಂಹರೂಪಿಣಿ’ ಚಿತ್ರ ಈ ವಾರ ಅಂದರೆ, ಅಕ್ಟೋಬರ್ ೧೭ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಭಕ್ತಿಪ್ರಧಾನ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಕಮರ್ಶಿಯಲ್ ಧಾಟಿಯಲ್ಲಿ, ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವಂತೆ ನಿರ್ದೇಶಕರು ರೂಪಿಸಿದ್ದಾರಂತೆ. ಬಹುದೊಡ್ಡ ತಾರಾಗಣ ಹೊಂದಿರುವ ಸಿಂಹರೂಪಿಣಿಯ ಸಮ್ಮುಖದಲ್ಲಿ ಘಟಾನುಘಟಿ ನಟ ನಟಿಯರು ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಟ ವಿಜಯ್ ಚೆಂಡೂರ್ ಪಾಲಿಗೂ ಒಂದೊಳ್ಳೆ ಪಾತ್ರವೇ ಒಲಿದು ಬಂದಿದೆ. ಚಿತ್ರೀಕರಣ ಆರಂಭಕ್ಕೂ ಮುನ್ನವೇ ತಮಗಾಗಿದ್ದ ರೋಮಾಂಚಕ ಅನುಭೂತಿಯೊಂದನ್ನು ವಿಜಯ್ ಚೆಂಡೂರ್ ತೆರೆದಿಟ್ಟಿದ್ದಾರೆ.

Simha Roopini 3

ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ವಿಜಯ್ ಚೆಂಡೂರ್, ಆ ನಂತರದಲ್ಲಿ ನಟನಾಗಿ ನೆಲೆ ಕಂಡುಕೊಂಡವರು. ಅದರಲ್ಲೂ ವಿಶೇಷವಾಗಿ ಹಾರರ್ ಸಿನಿಮಾಗಳ ಮೂಲಕವೇ ಅವರಿಗೆ ಹಂತ ಹಂತವಾಗಿ ವಿಜಯವೆಂಬುದು ಕೈ ಹಿಡಿಯುತ್ತಾ ಬಂದಿದೆ. ಹೀಗೆ ಹಾರರ್ ಮೂವಿಗಳ ಮೂಲಕ ಸದ್ದು ಮಾಡುತ್ತಾ ಬಂದಿರುವ ವಿಜಯ್ ಅವರಿಗೆ ಪರಿಚಿತರು `ನಿಮಗೆ ದೆವ್ವ ಕೈಹಿಡಿದಿದೆ’ ಅಂತ ಕಿಚಾಯಿಸುತ್ತಾರಂತೆ. ಆದರೆ, ಇದೀಗ ಸಿಂಹರೂಪಿಣಿಯ ಭೂಮಿಕೆಯಲ್ಲಿ ಮಾರಮ್ಮ ದೇವಿ ಕೈಹಿಡಿದು ಪೊರೆಯುತ್ತಾಳೆಂಬ ಗಾಢ ನಂಬಿಕೆ ವಿಜಯ್ ಚೆಂಡೂರ್ ಅವರದ್ದು.

Simha Roopini 2 1

ಅಂಥಾ ನಂಬಿಕೆಗೆ ಕಾರಣವಿದೆ. ವಿಜಯ್ ಚೆಂಡೂರ್ ಈ ಸಿನಿಮಾದಲ್ಲಿ ದೇವಿಯ ಆರಾಧಕನಾಗಿ ಕಾಣಿಸಿಕೊಂಡಿದ್ದಾರೆ. ಅದು ಸಿನಿಮಾದ ಆತ್ಮದಂಥಾ ಪಾತ್ರವೂ ಹೌದು. ಗ್ರಾಮವೊಂದರ ಜನರೆಲ್ಲ ತಮ್ಮ ಕಷ್ಟ ಕಾರ್ಪಣ್ಯಗಳನ್ನು, ಬೇಡಿಕೆಗಳನ್ನು ಮಾರಮ್ಮದೇವಿಯ ಮಡಿಲಿಗೆ ಹಾಕಿ ನಿರಾಳವಾಗುತ್ತಾರೆ. ಅಂಥಾದ್ದನ್ನೆಲ್ಲ ದೇವಿಗೆ ದಾಟಿಸುವ ವಾಹಕವಾಗಿ ಆರಾಧಕರಿರುತ್ತಾರೆ. ಅಂಥಾ ಪಾತ್ರವನ್ನಿಲ್ಲಿ ವಿಜಯ್ ಚೆಂಡೂರ್ ನಿಭಾಯಿಸಿದ್ದಾರೆ. ಇದರ ಜೊತೆ ಜೊತೆಗೇ ನಾಯಕನೊಂದಿಗೆ ಸದಾ ಸಾಥ್ ಕೊಡುತ್ತಾ, ಆತನ ಬೆನ್ನೆಲುಬಾಗಿ ನಿಲ್ಲುವ ಮತ್ತೊಂದು ಬಗೆಯ ಚಹರೆಯೂ ಆ ಪಾತ್ರಕ್ಕಿದೆಯಂತೆ.

Simha Roopini 1

ಇದು ಹೇಳಿಕೇಳಿ ಭಕ್ತಿಪ್ರಧಾನ ಚಿತ್ರ. ಆಳವಾದ ನಂಬಿಕೆ, ಭಕ್ತಿ ಭಾವವಿಲ್ಲದೆ ಇಂಥಾ ಚಿತ್ರವನ್ನು ರೂಪಿಸಲು ಸಾಧ್ಯವಿಲ್ಲ ಎಂಬುದನ್ನು ಸಿಂಹರೂಪಿಣಿಯೇ ವಿಜಯ್ ಅವರಿಗೆ ಮನದಟ್ಟು ಮಾಡಿಸಿದ್ದಾಳಂತೆ. ಅಪಾರ ದೈವ ಭಕ್ತಿ ಹೊಂದಿರೋ ನಿರ್ಮಾಪಕರು ಮತ್ತು ನಿರ್ದೇಶಕರ ಶ್ರದ್ಧೆ ಅವರಲ್ಲೊಂದು ಬೆರಗು ಮೂಡಿಸಿತ್ತಂತೆ. ಈ ಪಾತ್ರವನ್ನು ನಿರ್ವಹಿಸುವ ಮುನ್ನ ವಿಜಯ್ ಚೆಂಡೂರ್ ದೇವಿಯ ಮುಂದೆ ನಿಂತು ಅರಿಕೆ ಮಾಡಿಕೊಂಡಿದ್ದರಂತೆ. ನಿರ್ದೇಶಕರ ಇಷಾರೆಯ ಮೇರೆಗೆ ವಿಜಯ್ ಸಂಕಲ್ಪ ಮಾಡುತ್ತಲೇ ದೇವಿಯ ಕಡೆಯಿಂದ ಪಾಸಿಟಿವ್ ಸೂಚನೆ ಸಿಕ್ಕಿತ್ತಂತೆ. ಅದನ್ನು ಕಂಡು ಅಕ್ಷರಶಃ ರೋಮಾಂಚಿತರಾಗಿದ್ದ ವಿಜಯ್ ಚೆಂಡೂರ್, ತಮ್ಮ ಭಾಗದ ಚಿತ್ರೀಕರಣವನ್ನು ಅಂಥಾದ್ದೇ ಅನುಭೂತಿಯೊಂದಿಗೆ, ಭಕ್ತಿ ಭಾವಗಳೊಂದಿಗೆ ಮಾಡಿ ಮುಗಿಸಿದ್ದಾರಂತೆ.

 

ಸ್ವತಃ ದೈವಭಕ್ತರಾಗಿರುವ ವಿಜಯ್ ಚೆಂಡೂರ್ ಪಾಲಿಗಿದು ಭಿನ್ನ ಅನುಭವ. ಭಕ್ತಿ ಪ್ರಧಾನವಾದ ಚಿತ್ರವನ್ನು ನಿರ್ದೇಶಕ ಕಿನ್ನಾಳ್ ರಾಜ್ ಕಮರ್ಶಿಯಲ್ ಚೌಕಟ್ಟಿಗೆ ಒಗ್ಗಿಸಿದ ರೀತಿ ಅವರಲ್ಲೊಂದು ಬೆರಗು ಮೂಡಿಸಿದೆ. ಇಂಥಾ ಕಥನವನ್ನು ಎಲ್ಲರಿಗೂ ಹಿಡಿಸುವಂತೆ ರೂಪಿಸೋದು ನಿಜಕ್ಕೂ ಸವಾಲಿನ ಸಂಗತಿ. ಬರೀ ಭಕ್ತಿಪ್ರಧಾನ ಚೌಕಟ್ಟಿನಲ್ಲಿದ್ದರೆ ಒಂದು ವರ್ಗಕ್ಕೆ ಮಾತ್ರ ಹಿಡಿಸಬಹುದು. ಕಮರ್ಶಿಯಲ್ ಟಚ್ ಕೊಡಲು ಹೋದರೆ ಭಕ್ತಿ ಭಾವಗಳಿಗೆ ಅಪಮಾನವಾಗಬಹುದು. ಇವೆರಡನ್ನೂ ಸೂಕ್ಷ್ಮವಾಗಿ ಬ್ಲೆಂಡ್ ಮಾಡುವುದು ಅಸಲೀ ಕಸುಬುದಾರಿಕೆ. ಅದನ್ನು ಕಿನ್ನಾಳ್ ರಾಜ್ ಯಶಸ್ವಿಯಾಗಿ ಮಾಡಿದ್ದಾರೆಂಬ ನಂಬಿಕೆ ವಿಜಯ್ ಚೆಂಡೂರ್ ಅವರಲ್ಲಿದೆ. ನಿರ್ಮಾಪಕ ನಂಜುಂಡೇಶ್ವರ ಅವರ ಅಪಾರ ಭಕ್ತಿ ಈ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ ಎಂಬ ಭಾವ ಹೊಂದಿರುವ ವಿಜಯ್ ಪಾಲಿಗೆ ಓರ್ವ ನಟನಾಗಿ ಇದು ಮಹತ್ವದ ಮೈಲಿಗಲ್ಲು.

Share This Article
Facebook Whatsapp Whatsapp Telegram
Previous Article Ninasam Aswath ಈ ಕಾಲಘಟ್ಟದ ಅಪರೂಪದ ಚಿತ್ರ ‘ಸಿಂಹರೂಪಿಣಿ’ ಎಂದ ನೀನಾಸಂ ಅಶ್ವಥ್
Next Article ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ- ಸೆಕ್ಷನ್ 6ಎ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್

Latest Cinema News

diljit dosanjh kantara chapter 1 song rishab shetty
ಕಾಂತಾರಕ್ಕೆ ಕೈಜೋಡಿಸಿದ ಗಾಯಕ ದಿಲ್ಜಿತ್ ಸಿಂಗ್
Cinema Latest Main Post Sandalwood
marali manasagide song prema
ಮರಳಿ ಮನಸಾಗಿದೆ ಸಾಂಗ್ ರಿಲೀಸ್ ಮಾಡಿದ ನಟಿ ಪ್ರೇಮಾ
Cinema Latest Sandalwood Top Stories
Anushka Shetty
ಪತ್ರ ಬರೆದು ಅಭಿಮಾನಿಗಳಿಗೆ ಶಾಕ್ ಕೊಟ್ಟ ಅನುಷ್ಕಾ ಶೆಟ್ಟಿ!
Cinema Latest South cinema Top Stories
ranbir kapoor ramayana
ರಾಮನ ಪಾತ್ರಕ್ಕಾಗಿ ಮಾಂಸಾಹಾರ, ಮದ್ಯ ಸೇವನೆ ಬಿಟ್ಟಿದ್ದರಂತೆ ರಣ್‌ಬೀರ್ ಕಪೂರ್
Cinema Latest Sandalwood Top Stories
S Narayan
ಸೊಸೆಗೆ ವರದಕ್ಷಿಣೆ ಕಿರುಕುಳ ಆರೋಪ – ಎಸ್.ನಾರಾಯಣ್, ಪತ್ನಿ, ಪುತ್ರನಿಗೆ ನೋಟಿಸ್
Bengaluru City Cinema Latest Sandalwood Top Stories

You Might Also Like

DK Shivakumar Oxygen Tragedy 1
Chamarajanagar

ಚಾ.ನಗರ ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಕೊನೆಗೂ ಭರವಸೆಯ ಬೆಳಕು; ಸರ್ಕಾರಿ ನೌಕರಿ ಕೊಡಲು ಸಚಿವ ಸಂಪುಟ ಅಸ್ತು

2 hours ago
Thawar Chand Gehlot
Bengaluru City

ಸರ್ಕಾರದ 32 ಮಸೂದೆಗಳಿಗೆ ರಾಜ್ಯಪಾಲರ ಅಂಕಿತ

3 hours ago
hassan accident siddaramaiah
Hassan

ಹಾಸನ| ಗಣೇಶ ಮೆರವಣಿಗೆ ವೇಳೆ ಭೀಕರ ಅಪಘಾತ – ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

3 hours ago
sameer
Bengaluru City

ನನಗೆ ಯಾವುದೇ ರೀತಿಯ ಫಂಡ್ ಬಂದಿಲ್ಲ: ಸಮೀರ್‌ನಿಂದ ವೀಡಿಯೋ ರಿಲೀಸ್

3 hours ago
hassan accident
Hassan

ಹಾಸನ| ಗಣಪತಿ ಮೆರವಣಿಗೆ ವೇಳೆ ಭೀಕರ ದುರಂತ – ಟ್ರಕ್‌ ಹರಿದು 8 ಮಂದಿ ಸ್ಥಳದಲ್ಲೇ ಸಾವು

4 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?