ಚಾಮರಾಜಪೇಟೆ: ರಾಜಕೀಯ ಪಕ್ಷ ಸೇರುವ ಸುದ್ದಿ ಹರಿದಾಡಿ ವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿ `ಸೈಲೆಂಟ್’ ಆಗಿದ್ದ ಸುನೀಲ್ ಮತ್ತೆ ಎಂಟ್ರಿ ಕೊಟ್ಟಿದ್ದಾನೆ. ಚಾಮರಾಜಪೇಟೆಯ ತುಂಬೆಲ್ಲ ಸೈಲೆಂಟ್ ಸುನೀಲ್ ಬ್ಯಾನರ್, ಕಟೌಟ್ಗಳು ರಾರಾಜಿಸುತ್ತಿದ್ದು, ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾನೆ.
ಶಿವರಾತ್ರಿ (Shivaratri) ಹಬ್ಬದ ಪ್ರಯುಕ್ತ ಸೈಲೆಂಟ್ ಸುನೀಲ್ ಶುಭ ಕೋರಿರುವ ಕಟೌಟ್ಗಳು ರಾಜಾಜಿಸುತ್ತಿವೆ. ಸಮಾಜ ಸೇವಕರು ಎಂದು ಬರೆದುಕೊಂಡಿರುವ ಕಟೌಟ್ಗಳು ನಗರದೆಲ್ಲೆಡೆ ಗೋಚರಿಸುತ್ತಿವೆ. ಇದನ್ನೂ ಓದಿ: ದೇವೇಗೌಡರನ್ನೇ ಮನೆ, ಜಿಲ್ಲೆಯಿಂದ ಹೊರಹಾಕಿದವರು ನನ್ನನ್ನು ಬಿಡ್ತಾರಾ: ರೇವಣ್ಣ ವಿರುದ್ಧ ಎ.ಟಿ.ರಾಮಸ್ವಾಮಿ ವಾಗ್ದಾಳಿ
ಕಟೌಟ್ಗಳಲ್ಲಿ ಬುದ್ಧ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಅಬ್ದುಲ್ ಕಲಾಂ ಅವರ ಭಾವಚಿತ್ರಗಳೊಂದಿಗೆ ಸೈಲೆಂಟ್ ಸುನೀಲ್ ಭಾವಚಿತ್ರವಿರುವ ಪೋಸ್ಟರ್ಗಳನ್ನು ಅಳವಡಿಸಲಾಗಿದೆ. ಸೈಲೆಂಟ್ ಸುನೀಲ್ (Silent Sunil) ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯ ತಿಳಿಸಿರುವ ಪೋಸ್ಟರ್ ಇದಾಗಿದೆ.
41 ವಯಸ್ಸಿನ ಸುನೀಲ್ ಮೇಲೆ ಕೊಲೆ, ದರೋಡೆ, ಅಪಹರಣ, ಭೂ ಮಾಫಿಯಾದಂತಹ ಪ್ರಕರಣಗಳಿವೆ. ಇತ್ತೀಚೆಗೆ ಬಿಜೆಪಿ (BJP) ನಾಯಕರೊಂದಿಗೆ ಕಾಣಿಸಿಕೊಂಡಿದ್ದ. ಇದು ವಿಪಕ್ಷಗಳಿಂದ ತೀವ್ರ ಟೀಕೆಗೆ ಕಾರಣವಾಗಿತ್ತು. ರೌಡಿಶೀಟರ್ ರಾಜಕೀಯ ಪ್ರವೇಶಕ್ಕೆ ಬಿಜೆಪಿ ಕಾರಣವಾಗಿದೆ ಎಂದು ಕಾಂಗ್ರೆಸ್, ಜೆಡಿಎಸ್ ಟೀಕೆ ವ್ಯಕ್ತಪಡಿಸಿದ್ದವು. ಇದನ್ನೂ ಓದಿ: ಸಿನಿಮಾ ಶಿವರಾತ್ರಿ : ಬೆಂಗಳೂರಿನಲ್ಲಿ ‘ರಾಜಕುಮಾರ’, ಹೈದರಾಬಾದ್ ನಲ್ಲಿ ‘ಕಾಂತಾರ’
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k