ಸರ್ವಾಧಿಕಾರಿಯೊಬ್ಬ ಕ್ರೂರಿಯಾಗಿ ಬದಲಾಗುತ್ತಾನೆ: ಸಿದ್ದರಾಮಯ್ಯ

Public TV
1 Min Read
siddaramaiah 2

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಒಬ್ಬ ಸರ್ವಾಧಿಕಾರಿಯಾಗಿದ್ದು, ಕ್ರೂರಿಯಾಗಿ ಬದಲಾಗುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

siddu 2

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ, ಸಿಎಎ ಮತ್ತು ಎನ್.ಆರ್.ಸಿ ವಿಚಾರದಲ್ಲಿ ಮೋದಿ ಹಾಗೂ ಅಮಿತ್ ಶಾ ಇಬ್ಬರು ಸುಳ್ಳು ಹೇಳುತ್ತಿದ್ದಾರೆ. ಒಂದೊಂದು ವೇದಿಕೆಯಲ್ಲಿ ಒಂದೊಂದು ರೀತಿ ಮಾತನಾಡುತ್ತಾರೆ. ಯಾರು ಸತ್ಯ ಹೇಳುತ್ತಿದ್ದಾರೆ ಅಂತಾ ಅವರೇ ಹೇಳಬೇಕು. ನಾನು ಹುಟ್ಟಿದ ದಿನಾಂಕವೇ ನನಗೆ ಗೊತ್ತಿಲ್ಲ. ನನ್ನ ಹುಟ್ಟಿದ ದಿನಾಂಕವನ್ನಾ ನನ್ನ ಶಾಲೆ ಟೀಚರ್ ಬರೆದಿದ್ದು. ಇನ್ನು ನಮ್ಮ ಅಪ್ಪ – ಅವ್ವ ಹುಟ್ಟಿದ ದಿನಾಂಕವನ್ನು ಎಲ್ಲಿ ತರೋದು. ಒಬ್ಬ ಸರ್ವಾಧಿಕಾರಿ ಕ್ರೂರಿಯಾಗಿ ಬದಲಾಗುತ್ತಾನೆ. ಹಿಟ್ಲರ್ ಕೂಡ ತನ್ನ ಕೊನೆ ದಿನಗಳಲ್ಲಿ ಕ್ರೂರಿಯಾಗಿ ಬದಲಾಗಿದ್ದ ಎಂದರು.

Siddu

ಜೆಎನ್‍ಯು ದಾಳಿ ಸರ್ಕಾರಿ ಪ್ರಯೋಜಿತ ಅಟ್ಯಾಕ್. ಯಾರು ಏಟು ತಿಂದಿದ್ದಾರೋ ಅವರ ಮೇಲೆ ಎಫ್ ಐಆರ್ ಮಾಡಿದ್ದಾರೆ. ಸಿಎಎ ಮತ್ತು ಎನ್‍ಆರ್ ಸಿಯಲ್ಲಿ ಸತ್ತಿದ್ದು ಕೇವಲ ಮುಸ್ಲಿಂಮರಲ್ಲ ಹಿಂದೂಗಳು ಸತ್ತಿದ್ದಾರೆ. ಸಿಎಎ ವಿರೋಧಿಸುತ್ತಾರೋ ಅಂತಹವರ ಚಲನಚಿತ್ರಗಳನ್ನು ನೋಡಬೇಡಿ ಅಂತಾ ಪ್ರಚಾರ ಮಾಡುತ್ತಿದ್ದಾರೆ. ಜನರೇನೂ ಕ್ರೂರಿಗಳ ಮಾತನ್ನು ಕೇಳಿ ಬೀಡುತ್ತಾರಾ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *