ಮೈಸೂರು: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದಂತೆ ಅದು ಯಾವ ಯಾವ ಬಗೆಯ ರಾಜಕಾರಣ ಶುರುವಾಗುತ್ತೋ ಆ ದೇವರೆ ಬಲ್ಲ ಅನ್ನೋ ಸ್ಥಿತಿ ಇದೆ. ಕಾರಣ, ಟೀಕೆ ರಾಜಕಾರಣ, ಪಕ್ಷಾಂತರ ರಾಜಕಾರಣ, ಜ್ಯೋತಿಷ್ಯ ರಾಜಕಾರಣ ನಡೆದಂತೆ ಈಗ ರಾಜ್ಯದಲ್ಲಿ ನಾಗಾಸಾಧು ಪಾಲಿಟೆಕ್ಸ್ ಆರಂಭವಾಗಿದೆ.
ಅಕ್ಟೋಬರ್ 2 ರಂದು ಬೆಂಗಳೂರಿನಲ್ಲಿ ಕೆಲ ನಾಗಾಸಾಧುಗಳು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ಆಗಮಿಸಿ ಸಿಎಂ ಆಗುವಂತೆ ಆಶಿರ್ವಾದ ಮಾಡಿದ್ದರು. ಇವತ್ತು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಭಿಮಾನಿ ಕಂಸಾಳೆ ರವಿ ಅವರ ಮನೆಗೆ ನಾಗಾಸಾಧುಗಳು ಬಂದು ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ವರ್ತೂರು ಪ್ರಕಾಶ್ ಅವರ ಫೋಟೋಗೆ ಆಶೀರ್ವದಿಸಿ ಶುಭಾವಾಗುವಂತೆ ಹಾರೈಸಿದ್ದಾರೆ.
ಕಂಸಾಳೆ ರವಿ ಸಿಎಂ ಅವರ ಪರಮ ಅಭಿಮಾನಿ. ಹೀಗಾಗಿ ಸಿದ್ದರಾಮಯ್ಯ ಹಾಗೂ ವರ್ತೂರು ಪ್ರಕಾಶ್ ಅವರ ಫೋಟೋಗೆ ಹಿಮಾಲಯದಿಂದ ಬಂದ ಈ ನಾಗಾ ಸಾಧು ಮುಂದಿನ ಚುನಾವಣೆಯಲ್ಲಿ ಶುಭವಾಗಲಿ ಎಂದು ಆಶಿರ್ವಾದಿಸಿದ್ದಾರೆ.
ಇದನ್ನೂ ಓದಿ: ಮನೆಗೆ ನಾಗ ಸಾಧುಗಳು ಬಂದು ಹೇಳಿದ್ದೇನು: ಬಿಎಸ್ವೈ ತಿಳಿಸಿದ್ರು