ಬೆಂಗಳೂರು: ಕೋಲಾರದಿಂದ (Kolar) ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ನೆರವಿಗೆ ಅವರ ಹಳೆ ಅಹಿಂದ ಟೀಂ ಮುಂದಾಗಿದೆ ಎನ್ನಲಾಗುತ್ತಿದೆ.
ಅಂದು ಅಹಿಂದ ಕಟ್ಟಲು ಸಹಕಾರ ನೀಡಿದ್ದ ಟೀಂನಿಂದ ಇಂದು ಸಿದ್ದರಾಮಯ್ಯ ಜೊತೆ ಎರಡು ರಹಸ್ಯ ಸಭೆ ಸಹ ನಡೆದಿದೆ ಎಂದು ಸಿದ್ದರಾಮಯ್ಯ ಆಪ್ತ ವಲಯ ಹೇಳುತ್ತಿದೆ. ಇಡೀ ಕೋಲಾರ ಕ್ಷೇತ್ರದ ಸಂಪೂರ್ಣ ವರದಿ ಕೊಡುವ ಜವಾಬ್ದಾರಿಯನ್ನು ಟೀಂ ಅಹಿಂದ ಹೊತ್ತುಕೊಂಡಿದೆ. ಹಳೆ ಟೀಂ ಗ್ರೀನ್ ಸಿಗ್ನಲ್ ಕೊಟ್ಟರಷ್ಟೆ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಖಚಿತ ಪಡಿಸುತ್ತಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಸೇಫ್ ಗಾರ್ಡ್ ಮಾಡಲು ಅಖಾಡಕ್ಕಿಳಿದ ಹಳೇ ಅಹಿಂದ ತಂಡದಿಂದ ಸೇವ್ ಸಿದ್ದರಾಮಯ್ಯ ಸೈಲೆಂಟ್ ಆಪರೇಷನ್ ಶುರುವಾದಂತಿದೆ.
ಅಹಿಂದ ತಂಡಕ್ಕೆ ಕಾನ್ಫಿಡೆನ್ಸ್ ಬಂದರಷ್ಟೆ ಸಿದ್ದರಾಮಯ್ಯ ಕೋಲಾರ ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಸಿದ್ದರಾಮಯ್ಯ ಕೋಲಾರ ಕ್ಷೇತ್ರ ಸ್ಪರ್ಧೆ ಬಗ್ಗೆ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಸಿದ್ದರಾಮಯ್ಯಗೆ ಕೋಲಾರ ಅಂದುಕೊಂಡಷ್ಟು ಸೇಫ್ ಇಲ್ಲ. ಒಳ ಏಟು ಬೇರೆನಾದರೂ ಇದೆಯಾ? ಇದನ್ನೆಲ್ಲ ಸಂಪೂರ್ಣ ಮಾಹಿತಿ ಸಂಗ್ರಹಕ್ಕೆ ಸಿದ್ದರಾಮಯ್ಯ ಅಹಿಂದ ಹಳೆ ಟೀಂ ಅಖಾಡಕ್ಕೆ ಇಳಿದಿದೆ ಎನ್ನಲಾಗಿದೆ. ಇದನ್ನೂ ಓದಿ: ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ – ಶಿವಲಿಂಗೇಗೌಡರ ಮತ್ತೊಂದು ಆಡಿಯೋ ವೈರಲ್
ನಂಬಿಕಸ್ಥ ಬಂಟರ ಅಹಿಂದ ಟೀಂ ಈಗಾಗಲೇ ಎರಡು ಬಾರಿ ಸಿದ್ದರಾಮಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದೆ ಎನ್ನಲಾಗಿದೆ. ಅಹಿಂದ ಟೀಂ ನೆಗೆಟಿವ್ ರಿಪೋರ್ಟ್ ಕೊಟ್ಟರೆ ಸಿದ್ದರಾಮಯ್ಯ ಸ್ಪರ್ಧೆ ವಿಚಾರದಲ್ಲಿ ಬೇರೆಯದ್ದೇ ಬೆಳವಣಿಗೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮಾರ್ಚ್ ಮೊದಲ ವಾರ ಮೋದಿ ಫೈನಲ್ ಮೆಗಾ ಶೋ?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k