ವಿಜಯಪುರ: ಟಿಪ್ಪುನನ್ನು ಸ್ವಾಂತಂತ್ರ್ಯ ಹೋರಾಟಗಾರರು ಎಂದು ಶ್ರದ್ಧೆ, ಭಕ್ತಿಯಿಂದ ಗೌರವಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪುನನ್ನು ಆರಾಧನೆ ಮಾಡುವ ಕಾಂಗ್ರೆಸ್ಗೆ (Congress) ಮತ ಹಾಕಬೇಡಿ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿಕೆ ವಿಚಾರಕ್ಕೆ ಟಾಂಗ್ ನೀಡಿದರು. ಟಿಪ್ಪುನೂ ಕೂಡ ಓರ್ವ ದೇಶದ ಭಕ್ತ ಅಂತಾ ಅನ್ಕೊಂಡು ನಾವು ಹೊರಟಿದ್ದೇವೆ. ಬಿಜೆಪಿಗರು (BJP) ಗೋಡ್ಸೆ ಪೂಜೆ ಮಾಡುವವರು ಅವರೇನು ನಮಗೆ ಪಾಠ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಸಾವರ್ಕರ್ ಪೂಜೆ ಮಾಡುವವರು ನಮಗೇನು ಹೇಳ್ತಾರಪ್ಪಾ, ಮಹಾತ್ಮ ಗಾಂಧಿ ಕೊಂದವರನ್ನು ಪೂಜಿಸುವವರನ್ನು ಏನು ಮಾಡಬೇಕು? ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಮಾಡಿದವನು ನಾನು. ಕಾಂಗ್ರೆಸ್ ಪಕ್ಷ ಜಾತ್ಯಾತೀತ ಪಕ್ಷವಾಗಿದ್ದು, ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಪಕ್ಷವಾಗಿದೆ ಎಂದರು. ಇದನ್ನೂ ಓದಿ: ಮತ್ತೆ ಕರೆಂಟ್ ಶಾಕ್ಗೆ ಸಜ್ಜು- ಹೋಟೆಲ್ ಉದ್ಯಮದಿಂದ ವ್ಯಾಪಕ ಆಕ್ರೋಶ
ಬಿಜೆಪಿ ಅವರು ಸಂವಿಧಾನ ನಂಬಿಕೆ, ಗೌರವ ಇಲ್ಲದಂತಹವರು. ಸಂವಿಧಾನಕ್ಕೆ ವಿರುದ್ಧವಾಗಿರುವಂತಹ ಪಕ್ಷವಾಗಿದ್ದು, ಜೆಡಿಎಸ್ ಸೆಕ್ಯುಲರ್ ಪಾರ್ಟಿ ಅಲ್ಲ. ಇವರಿಬ್ಬರೂ ಸೇರಿ ಸರ್ಕಾರ ಮಾಡಿದ್ದರಲ್ಲ. ಅದೆಂಗೆ ಒಂದಾಗಲಿಕ್ಕೆ ಆಗತ್ತೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಪತಿಯನ್ನ ಅರೆಸ್ಟ್ ಮಾಡ್ತಾರೆ ಅಂತಾ ಹೆದರಿ ನವ ವಿವಾಹಿತೆ ಆತ್ಮಹತ್ಯೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k