ಕೋಲಾರ: ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ನಾನು ಮೊದಲೇ ಹೇಳಿದ್ದೆ, ಅವರು ಈಗಲೂ ನಮ್ಮ ಮುಖ್ಯಮಂತ್ರಿಯೇ. ಅವರು ನಿಧಾನವಾಗಿ ನಡೆಯುತ್ತಿದ್ದರೆ ಹುಲಿ(ಪುಲಿ) ನಡೆಯುತ್ತಿದ್ದಂತೆ ಕಾಣುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಬಣ್ಣ ಬಣ್ಣವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ವರ್ಣಿಸಿದ್ದಾರೆ.
ಹೌದು ಕೋಲಾರದ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದ ಕನಕ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2012 ರಲ್ಲಿಯೇ ಸಿದ್ದರಾಮಯ್ಯ ಅವರು ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ್ದೆ. ಆಗ ತುಂಬಾ ಜನ ನನ್ನ ವಿರುದ್ಧ ಮಾತನಾಡಿದ್ದರು. ಸಿದ್ದರಾಮಯ್ಯ ಅವರು ಈಗಲೂ ನಮ್ಮ ಮುಖ್ಯಮಂತ್ರಿ, ನಮ್ಮ ನಾಯಕರು ಎಂದು ತಮ್ಮ ಮಾತಿನುದ್ದಕ್ಕೂ ಸಿದ್ದರಾಮಯ್ಯ ಅವರನ್ನು ವರ್ಣಿಸಿದ್ದಾರೆ.
ಇಷ್ಟು ಮಾತ್ರವಲ್ಲದೆ ಸಿದ್ದರಾಮಯ್ಯ ಅವರ ವರ್ತನೆ ಒರಟು, ಗುಣ ಮಾತ್ರ ಮೃದು. ಅವರು ನಿಧಾನವಾಗಿ ನಡೆದು ಬರುತ್ತಿದ್ದರೆ ಹುಲಿ ಇದ್ದಂತೆ. ಅವರು ಇನ್ನೂ ಮುಂದೆ ರಾಜ್ಯದ ಬಬ್ಬುಲಿ ಪುಲಿ(ಹುಲಿ) ಎಂದು ಹೇಳಿ, ಬಬ್ಬುಲಿ ಪುಲಿಕಿ ಜೈ ಎಂದು ತೆಲುಗಿನಲ್ಲಿ ಹೇಳಿ ತಮ್ಮ ಭಾಷಣ ಮುಗಿಸಿದ್ದಾರೆ.
ಶ್ರೀಮಾನ್ ಸಿದ್ದರಾಮಯ್ಯನವರಿಗೆ ನಿಮ್ಮೆಲ್ಲರ ಪರವಾಗಿ ಒಂದೇ ಚಿಕ್ಕ ಪ್ರಾರ್ಥನೆ. ಸಾಯಿ ಬಾಬಾ ಬಳಿ ಪ್ರಾರ್ಥನೆ ಮಾಡುತ್ತೇನೆ. ಸದಾ ಕಾಲ ನಿಮ್ಮನ್ನ ಗೌರವಸ್ಥರ ರೀತಿ ದೇವರು ಇಟ್ಟಿರಲಿ. ಸದಾಕಾಲ ನಿಮ್ಮ ಮೂಲಕ ಜನರಿಗೆ ಒಳ್ಳೆಯದಾಗಲಿ. ಸದಾ ಕಾಲ ನಿಮ್ಮ ಆರೋಗ್ಯ ಚಿರಸ್ಥಾಯಿಯಾಗಿ ಇರಲಿ. ಗೌರವಸ್ಥರ ರೀತಿ ಜನರ ಮಧ್ಯೆ ನೀವು ಇರಬೇಕು. ಇನ್ನು ಮುಂದೆ ನಮ್ಮ ಕರ್ನಾಟಕದ ಬೊಬ್ಬುಲಿ ಪುಲಿ ಯಾರು ಸಿದ್ದರಾಮಯ್ಯ, ಬೊಬ್ಬುಲಿ ಪುಲಿಗೆ ಜೈ ಎಂದು ಜೈಕಾರ ಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv