ಸಾಹಿತ್ಯ ಪ್ರೇಮಿಗಳಾದ ಶ್ರೀಗಳು ಗ್ರಂಥಾವವಲೋಕನ ಮಾಡದ ದಿನಗಳಿಲ್ಲ. ಗ್ರಂಥ ಪ್ರಕಟಣೆಯಲ್ಲಿ ಅವರಿಗಿರುವ ಆಸಕ್ತಿ ಅಷ್ಟಿಷ್ಟಲ್ಲ. ಶ್ರೀಮಠದ ಮುಖಾಂತರವೂ ಶ್ರೀಗಳು ಅನೇಕ ಪುಸ್ತಕಗಳನ್ನು ಪ್ರಕಟಪಡಿಸಿದ್ದಾರೆ.
ಅಧ್ಯಯನ ಶೀಲರಾಗಿರುವ ಸಿದ್ದಗಂಗಾ ಶ್ರೀಗಳಿಗೆ ಪುಸ್ತಕ ಅಂದ್ರೆ ಅಚ್ಚುಮೆಚ್ಚು, ನಿತ್ಯ ಪುಸ್ತಕ ಓದುವ ಅಭ್ಯಾಸವನ್ನು ಹೊಂದಿದ್ದ ಶ್ರೀಗಳಿಗೆ ಮುಖ್ಯವಾಗಿ ಇಂಗ್ಲೀಷ್ ಪುಸ್ತಕ ಅಂದ್ರೆ ಇನ್ನಷ್ಟು ಅಚ್ಚುಮೆಚ್ಚು. ನಾನಾ ಭಾಷೆಯಲ್ಲಿ ಅಪಾರ ಪಾಂಡಿತ್ಯ ವಹಿಸಿದ್ದ ಶ್ರೀಗಳು ಪ್ರತಿನಿತ್ಯ ದಿನಚರಿ ಬರೆಯುವ ಹವ್ಯಾಸವನ್ನು ಬೆಳೆಸಿದ್ದರೆ, ಅಪರೂಪಕ್ಕೊಮ್ಮೆ ಬರೆಯುವ ಅಭ್ಯಾಸವೂ ಸಿದ್ದಗಂಗಾ ಶ್ರೀಗಳಿಗೆ ಇತ್ತು. ಶರಣ ಬಸವಣ್ಣನವರ ಪುಸ್ತಕವನ್ನು ಕೂಡ ಪ್ರೀತಿಯಿಂದ ಓದುತ್ತಿದ್ದ ಶ್ರೀಗಳ ಬಳಿ ಗ್ರಂಥಗಳ ಭಂಡಾರವೇ ಇತ್ತು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!
ಸರಳ ಬದುಕು: ಆಡಂಬರದ ಬದುಕನ್ನು ಕಂಡ್ರೆ ಕಿಡಿಕಿಡಿಯಾಗುವ ಶ್ರೀಗಳು ಸರಳ ಜೀವಿ. ವಿಪರೀತ ಖರ್ಚನ್ನು ಕಂಡ್ರೆ ಸಿಕ್ಕಾಪಟ್ಟೆ ಸಿಟ್ಟಾಗುತ್ತಿದ್ದರು. ಸದಾ ಖಾದಿಯ ಖಾವಿ ಬಟ್ಟೆ, ಹೊದೆಯುವ ಖಾದಿ ಸೆಲ್ಲೆ, ತಲೆಗೆ ಸುತ್ತುವ ಒಂದು ಪಾವುಡ ಅಷ್ಟೇ ಇವರ ಐಸಿರಿ. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ
ಒಂದು ಬಾರಿ ಮೈಸೂರಿನ ಅರಮನೆ ಪಂಚಗವಿ ಮಠಾಧ್ಯಕ್ಷರಾದ ಗೌರಿಶಂಕರ ಸ್ವಾಮೀಗಳು ಸ್ವಾಮೀಜಿ ವಿರಕ್ತ ಜೀವನ, ದಾಸೋಹ ಭಾವಕ್ಕೆ ಮಾರುಹೋಗಿ ಪಾದಪೂಜೆ ಮಾಡಿ 15 ತೊಲೆ ಬಂಗಾರದ ಕರಡಿಗೆ ಅರ್ಪಿಸಿದ್ರು. ಆದ್ರೇ ನಾನಿದನ್ನು ಧರಿಸಲ್ಲ ನನಗೆ ಬೇಡ ಬುದ್ದಿ ಅಂತ ಹೇಳಿದ್ರಂತೆ. ಆದ್ರೆ ಒತ್ತಾಯ ಮಾಡಿದ ಮೇಲೂ ತೆಗೆದುಕೊಂಡ ಶ್ರೀಗಳನ್ನು ಇದನ್ನೆಂದೂ ಬಳಸಿಲ್ಲ.
ಅಡ್ಡಪಲ್ಲಕ್ಕಿಯ ಉತ್ಸವ ನಡೆಸಬೇಕೆಂದೂ ಭಕ್ತರು ಕೇಳಿದಾಗ ಇದ್ಯಾವುದೂ ಬೇಡವೇ ಬೇಡ ಅಂತಾ ನಿರಾಕರಿಸಿ ತಮ್ಮ ನಿರಹಂಭಾವವನ್ನು ತೋರ್ಪಡಿಸಿದ್ದರು.
https://www.youtube.com/watch?v=2lK_EgaS96U
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv