ಬಳ್ಳಾರಿ: ಮುಖ್ಯಮಂತ್ರಿ ಕುಮಾರಸ್ವಾಮಿ 5-6 ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಅವರು ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಬಳ್ಳಾರಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಆಡಳಿಯ ಯಾವ ರೀತಿ ಆಗಿದೆ ಅಂದ್ರೆ, ನಾವು ಕುಮಾರಸ್ವಾಮಿ ಸ್ವಚ್ಛ ಮತ್ತು ಪಾರದರ್ಶಕ ಆಡಳಿತವನ್ನು ನೀಡುತ್ತಾರೆ ಅಂದುಕೊಂಡಿದ್ದೇವು. ಆದರೆ ಕುಮಾರಸ್ವಾಮಿ ಮನೆ ಮುಂದೆ ವರ್ಗಾವಣೆಗಾಗಿ ಅಧಿಕಾರಿಗಳು ಸೂಟ್ ಕೇಸ್ ತುಂಬಿಕೊಂಡು ನಿಂತಿದ್ದಾರೆ. ಮುಖ್ಯಮಂತ್ರಿ ವಿಧಾನಸಭೆಯಿಂದ ಮಾಧ್ಯಮಗಳಿಗೆ ನಿರ್ಬಂಧ ಸರಿಯಲ್ಲ. ಪತ್ರಕರ್ತರನ್ನು ದೂರವಿಟ್ಟು ಆಡಳಿತ ನಡೆಸುವುದು ಸರಿಯಲ್ಲ. ಕುಮಾರಸ್ವಾಮಿ ಹಿಟ್ಲರ್ ನಂತೆ ನಡೆದುಕೊಳ್ಳುತ್ತಿದ್ದಾರೆಂದು ಶಾಸಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ನಿರ್ಮಾಣ ಬೆಂಬಲಿಸಿ, ವಾಪಸ್ ಪಡೆದ ಶ್ರೀರಾಮುಲು
ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯದ ಕೂಗು ಎದ್ದಿದೆ. ಕುಮಾರಸ್ವಾಮಿ ಉತ್ತರ ಕರ್ನಾಟಕದ ಜನರನ್ನು ಕೆಣಕುವಂತೆ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ನಾನೇ ಹೋರಾಟದ ನೇತೃತ್ವದ ವಹಿಸಿಕೊಳ್ಳುವೆ ಅಂತ ಮತ್ತೊಮ್ಮೆ ಉಚ್ಚರಿಸಿದ್ದಾರೆ.
ಉತ್ತರ ಕರ್ನಾಟಕ ಹೈದರಾಬಾದ್ ಕರ್ನಾಟಕ ಬಂದರೆ. ಅದು ನೆಲ, ಜಲ, ಭಾಷೆ, ಗಡಿಯಾಗಿರಬಹುದು. ನನ್ನ ಸ್ವಾರ್ಥ ನಾನು ಉತ್ತರ ಕರ್ನಾಟಕದ ಕಡೆ ನಿಂತಿರುತ್ತೇನೆ. ನಾನು ಹೀಗೆ ಸುಮ್ಮನೆ ಕುಳಿತರೆ ಆಗದು. ನಾನು ಈ ರಾಜಕಾರಣದಲ್ಲಿ ಇರುತ್ತೇನೋ, ಹೋಗುತ್ತೀನೋ ಗೊತ್ತಿಲ್ಲ. ನಾನು ಇವತ್ತೇ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ನನಗೆ ರಾಜಕಾರಣ ಮುಖ್ಯವಲ್ಲ. ನಾನು ರಾಜೀನಾಮೆ ಕೊಟ್ಟು, ಕೊಟ್ಟು ಚುನಾವಣೆ ಮಾಡಿಕೊಂಡು ಬಂದಿದ್ದೇನೆ. ಯಾವ ಅವಧಿಯನ್ನು ನಾನು ಪೂರ್ಣ ಮಾಡಿಲ್ಲ ಎಂದು ಆಕ್ರೋಶದಿಂದ ಶ್ರೀರಾಮುಲು ಹೇಳಿದ್ದಾರೆ.