ಶಿವಸೇನೆಯಿಂದ ಬಾಳಾ ಠಾಕ್ರೆಗೆ ಅವಮಾನ – ಕರಂದ್ಲಾಜೆ

Public TV
1 Min Read
shobha karandlaje

ಉಡುಪಿ: ಶಿವಸೇನೆ ಸರ್ಕಾರ ರಚಿಸುವ ಉದ್ದೇಶದಿಂದ ಕಾಂಗ್ರೆಸ್ ಮತ್ತು ಎನ್‍ಸಿಪಿ ಜೊತೆ ಹೋಗುವುದು ಬಾಳ ಠಾಕ್ರೆ ಅವರ ಉದ್ದೇಶಕ್ಕೆ ಅವಮಾನ ಮಾಡಿದಂತೆ ಎಂದು ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವ್ಯಾಖ್ಯಾನಿಸಿದ್ದಾರೆ.

ಉಡುಪಿಯ ಪಡುಕೆರೆಯಲ್ಲಿ ಬೀಚ್ ಕ್ಲೀನಿಂಗ್ ಅಭಿಯಾನದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಶಿವಸೇನೆ ಮೂರು ದಶಕದ ದೋಸ್ತಿಗಳು. ಆದರೆ ಶಿವಸೇನೆ ಯಾಕೆ ಈ ರೀತಿಯ ನಿರ್ಧಾರ ತೆಗೆದುಕೊಂಡಿದೆ ಎನ್ನುವುದು ಗೊತ್ತಿಲ್ಲ ಎಂದರು.

maharashtra

ಇನ್ನೂ ಅವಕಾಶ ಇದೆ. ಹಿಂದುತ್ವದ ಆಧಾರದಲ್ಲಿ ನಾವು ಜೊತೆಯಾಗಿ ಚುನಾವಣೆ ಎದುರಿಸಿದ್ದೇವೆ. ಕಾಂಗ್ರೆಸ್, ಎನ್‍ಸಿಪಿ ಜೊತೆ ಹೋಗುದು ಬಾಳಾಠಾಕ್ರೆ ಅವರ ಉದ್ದೇಶಕ್ಕೆ ಅವಮಾನ ಎಂದರು. ಈ ಬೆಳವಣಿಗೆ ಶಿವಸೇನೆಯ ಮೂಲ ಉದ್ದೇಶಕ್ಕೆ ಆಘಾತವಾಗಿದೆ. ಇನ್ನೂ ಅವಕಾಶ ಇದೆ, ನಮ್ಮ ಪಾಟ್ನರ್ಸ್ ಆಗಿ ಮುಂದುವರಿಯಲಿ ಎಂದು ಸಲಹೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *