– ಚಾಮುಂಡೇಶ್ವರಿ ವಕ್ಫ್ ಆಸ್ತಿಯೇ? ಎಂದು ಪ್ರಶ್ನೆ
ನವದೆಹಲಿ: ಡಿ.ಕೆ ಶಿವಕುಮಾರ್ (DK Shivakumar) ಅವರೇ ನೀವು ಸಿಎಂ ಆಗುವ ವೇಗದಲ್ಲಿ ಹಿಂದೂಗಳಿಗೆ ಅಪಮಾನ ಮಾಡ್ತಿದ್ದೀರಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಕಿಡಿಕಾರಿದ್ದಾರೆ.
ನವದೆಹಲಿಯಲ್ಲಿ (New Delhi) ಸುದ್ದಿಗೋಷ್ಠಿ ನಡೆಸಿದ ಅವರು ಚಾಮುಂಡೇಶ್ವರಿ ಹಿಂದೂಗಳ ಆಸ್ತಿ ಅಲ್ಲ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ 3500 ಹೆಚ್ಚು ದೇವಸ್ಥಾನಗಳು ಹಿಂದೂಗಳ ಆಸ್ತಿ. ಸರ್ಕಾರದ ಆಸ್ತಿ ಎಂದರೆ ಮುಜುರಾಯಿ ಆಸ್ತಿ, ಮುಜುರಾಯಿ ಆಸ್ತಿಯಾದರೆ ಅದು ಹಿಂದೂಗಳ ಆಸ್ತಿ ಅಲ್ವ. ಸರ್ಕಾರದ ಆಸ್ತಿ ಹಿಂದೂಗಳದ್ದೂ ಅಲ್ಲ ಅಂದ್ರೆ ಏನು ಹೇಳಲು ಹೊರಟಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಏನಾಗಿದೆ ನಿಮಗೆ ಎಂದು ಕೆಂಡಾಮಂಡಲರಾಗಿದ್ದಾರೆ. ಇದನ್ನೂ ಓದಿ: ಡಿಕೆಶಿ RSS ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ರಿಂದ ಎಲ್ಲವೂ ಮುಗಿದಿದೆ: ಡಿಸಿಎಂ ಪರ ಖರ್ಗೆ ಬ್ಯಾಟಿಂಗ್
ಡಿಕೆಶಿ ಅವರೇ ನೀವು ಮುಖ್ಯಮಂತ್ರಿಯಾಗುವ ಭರದಲ್ಲಿ ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದೀರಿ. ಹಿಂದೂಗಳ ವಿಚಾರದಲ್ಲಿ ಸಂಶಯ ಹುಟ್ಟು ಹಾಕುತ್ತಿದ್ದೀರಿ. ಸರ್ಕಾರವನ್ನು ನೀವು ಬಿಟ್ಟು ಹೋಗಿ. ಹಿಂದೂ ಮಾನಸಿಕತೆ ಇರುವವರು ಬಂದು ಆಡಳಿತ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.
ಭಾನು ಮುಸ್ತಾಕ್ ಅವರ ಬಗ್ಗೆ ವಿರೋಧ ಇಲ್ಲ. ಕನ್ನಡನಾಂಬೆಯನ್ನು ಒಪ್ಪದವರು ಚಾಮುಂಡೇಶ್ವರಿ ಅವರನ್ನು ಒಪ್ಪುತ್ತಾರಯೇ? ಹಳದಿ ಮತ್ತು ಕುಂಕುಮವನ್ನು ಒಪ್ಪಿಲ್ಲ ಅಂದರೆ ಇದನ್ನು ಒಪ್ಪುತ್ತಾರಾ ಎನ್ನುವುದಷ್ಟೇ ಪ್ರಶ್ನೆ ಎಂದಿದ್ದಾರೆ. ಇದನ್ನೂ ಓದಿ: ತಿಮರೋಡಿಯ ಮನೆಯ ಒಳಗಡೆಗೆ ಚಿನ್ನಯ್ಯನಿಗೆ ಇರಲಿಲ್ಲ ಪ್ರವೇಶ!
ಕರ್ನಾಟಕದಲ್ಲಿ ಬೇರೆ ಸಾಹಿತಿ ಸಿಗಲಿಲ್ವ? ಕನ್ನಡಾಂಬೆಯನ್ನು ಒಪ್ಪದವರಿಗೆ ಯಾಕೆ ಅವಕಾಶ ನೀಡಬೇಕು ಎಂದು ಕೇಳಿದ್ದೆ. ಮಹಾದೇವಪ್ಪ ಇದನ್ನು ಧಾರ್ಮಿಕ ಅಲ್ಲ ಸಾಂಸ್ಕೃತಿಕ ಹಬ್ಬ ಎಂದು ಹೇಳಿದ್ದರು. ದಸರಾ ಸಾಂಸ್ಕೃತಿಕ ಹಬ್ಬ ಎಂದು ಯಾವಾಗ ಆಯ್ತು? ನವರಾತ್ರಿ ಎಂದರೆ ದೇವಿಯ ಒಂಭತ್ತು ಅವತರಾಗಳು. ಮೈಸೂರು ರಾಜರು ಇದನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇವರಿಗೆ ಧರ್ಮವಿಲ್ಲ, ಪ್ರಾರ್ಥನೆ ಯಾರೊಬ್ಬರ ಸ್ವತ್ತಲ್ಲ – ಡಿಕೆಶಿ
ಚಾಮುಂಡೇಶ್ವರಿ ವಕ್ಫ್ ಆಸ್ತಿಯೇ?
ಈಗ ಚಾಮುಂಡೇಶ್ವರಿ ಮೇಲೆ ನಂಬಿಕೆ ಇಲ್ಲದವರ ಕಡೆಯಿಂದ ಉದ್ಘಾಟನೆ ಮಾಡಿಸುತ್ತಿದ್ದಾರೆ. ಈ ಮೂಲಕ ಹಿಂದೂಗಳಿಗೆ ಅವಮಾನ ಮಾಡ್ತಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಹೊಸ ವಿವಾದ ಹುಟ್ಟು ಹಾಕಿದ್ದಾರೆ. ಚಾಮುಂಡೇಶ್ವರಿ ಮತ್ತು ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಆಸ್ತಿ ಅಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಹಾಗಿದ್ರೆ ಇದು ಯಾರ ಆಸ್ತಿ? ಟಿಪ್ಪು ಆಡಳಿತ ಮಾಡಿದ ಅನ್ನೊ ಕಾರಣಕ್ಕೆ ಅದು ವಕ್ಫ್ ಆಸ್ತಿಯೇ ಎಂದು ಪ್ರಶ್ನಿಸಿದ್ದಾರೆ.
ಹಿಂದೆಯೇ ಹಲವು ರೈತರ ಜಮೀನು ವಕ್ಫ್ ಆಸ್ತಿ ಎಂದು ಘೋಷಿಸಲಾಯಿತು. ಈಗ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ ಎನ್ನುತ್ತಾರೆ. ಇದು ಕಾಂಗ್ರೆಸ್ ನಾಯಕರ ವ್ಯವಸ್ಥಿತ ಷಡ್ಯಂತ್ರ. ಆರ್ಎಸ್ಎಸ್ ಹೇಳಿಕೆಯಿಂದ ಹೊರ ಬರಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಹೈಕಮಾಂಡ್ ಮೆಚ್ಚಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೂ ಧಾರ್ಮಿಕ ನಂಬಿಕೆಗಳು ಇಲ್ಲ. ಇದಕ್ಕಾಗಿಯೇ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದೆ. ಹಿಂದೂಗಳ ಆಸ್ತಿ ಅಲ್ಲ ಎನ್ನಲು ಎಷ್ಟು ಧೈರ್ಯ? ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ದಿವಾಳಿಯಾಗಿದ್ದಾರೆ. ಹಿಂದೂ ವಿರೋಧಿ ಮನಸ್ಥಿತಿಗೆ ಕುಮ್ಮಕ್ಕು ನೀಡಲಾಗುತ್ತಿದೆ. ಚಾಮುಂಡಿ ಬೆಟ್ಟದ ವಿರೋಧ ಇರುವ ಮನಸ್ಥಿತಿಯವರಿಗೆ ದೇವರು ಪಾಠ ಕಲಿಸುತ್ತಾನೆ ಎಂದಿದ್ದಾರೆ.