Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಶೋಭಾ ಕರಂದ್ಲಾಜೆ ಸಹೋದರನ ಎಸ್ಟೇಟ್ ದಾಖಲೆಗಳೇ ನಾಪತ್ತೆ – ಕೇಳಿದ್ರೆ ನಾಶಪಡಿಸಿದ್ದೇವೆ ಅಂತಾರೆ ರಿಜಿಸ್ಟ್ರಾರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Uncategorized | ಶೋಭಾ ಕರಂದ್ಲಾಜೆ ಸಹೋದರನ ಎಸ್ಟೇಟ್ ದಾಖಲೆಗಳೇ ನಾಪತ್ತೆ – ಕೇಳಿದ್ರೆ ನಾಶಪಡಿಸಿದ್ದೇವೆ ಅಂತಾರೆ ರಿಜಿಸ್ಟ್ರಾರ್

Uncategorized

ಶೋಭಾ ಕರಂದ್ಲಾಜೆ ಸಹೋದರನ ಎಸ್ಟೇಟ್ ದಾಖಲೆಗಳೇ ನಾಪತ್ತೆ – ಕೇಳಿದ್ರೆ ನಾಶಪಡಿಸಿದ್ದೇವೆ ಅಂತಾರೆ ರಿಜಿಸ್ಟ್ರಾರ್

Public TV
Last updated: October 7, 2017 10:28 am
Public TV
Share
3 Min Read
sh
SHARE

ಶಿವಮೊಗ್ಗ: ಸಂಸದೆ ಶೋಭಾ ಕರಂದ್ಲಾಜೆ ಸಹೋದರ ಲಕ್ಷ್ಮಣ್ ಗೌಡ ಖರೀದಿಸಿದ ಎಸ್ಟೇಟ್ ದಾಖಲೆ ನಾಪತ್ತೆಯಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಕೊಡಗಿನ ಭಾಗಮಂಡಲದ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ 166 ಎಕರೆ ಎಸ್ಟೇಟ್ ಖರೀದಿಸಿದ್ದ ದಾಖಲೆ ನಾಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮಡಿಕೇರಿ ರಿಜಿಸ್ಟ್ರಾರ್ ಎಸ್ಟೇಟ್ ಖರೀದಿ ದಾಖಲೆಗಳು ನಾಶವಾಗಿರಬಹುದು ಎಂದು ಹೇಳಿದ್ದಾರೆ. ಇದೀಗ ಆರ್‍ಟಿಐ ಕಾರ್ಯಕರ್ತರಿಂದ ದಾಖಲೆ ನಾಪತ್ತೆ ಹಗರಣ ಬಟಾ ಬಯಲಾಗಿದೆ.

vlcsnap 2017 10 07 10h16m45s537

ಕೊಡುಗು ಜಿಲ್ಲೆ ಭಾಗಮಂಡಲ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ಶೋಭಾ ಕರಂದ್ಲಾಜೆ ಸಹೋದರ ಲಕ್ಷ್ಮಣ್ ಗೌಡ 166 ಎಕರೆ ಭೂಮಿ ಖರೀದಿಸಿದ್ದರು. ಈ ಭೂಮಿಯನ್ನು ಅಬ್ದುಲ್ ರೆಹಮಾನ್ ಅವರಿಂದ ಕಪಿಲ ಮಂಜುಶ್ರೀ ಅಪೆರೆಲ್ಸ್ ಎಂಬ ಸಂಸ್ಥೆಯ ಪರವಾಗಿ ಲಕ್ಷ್ಮಣ್ ಗೌಡ ಮತ್ತು ಸೆಬಾಸ್ಟಿಯನ್ ಎಂಬವರು 5 ಕೋಟಿ 10 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದರು. ಈ ಖರೀದಿಯ ನೋಂದಣಿ ಪತ್ರ ಹಾಗೂ ನೋಂದಣಿಗೆ ಪೂರಕವಾಗಿ ಸಲ್ಲಿಸಲಾದ ದಾಖಲೆಗಳನ್ನು ಆರ್‍ಟಿಐ ಮೂಲಕ ಕೇಳಲಾಗಿತ್ತು. ಆದರೆ ನೋಂದಣಿ ಪತ್ರವನ್ನು ಮಾತ್ರ ನೀಡಿರುವ ರಿಜಿಸ್ಟ್ರಾರ್, ಪೂರಕ ದಾಖಲೆಗಳನ್ನು ನೀಡಿರಲಿಲ್ಲ. ಮತ್ತೆ ಪೂರಕ ದಾಖಲೆಗಳಿಗೆ ಕೋರಿಕೆ ಸಲ್ಲಿಸಿದಾಗ ತೀರಾ ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ.

vlcsnap 2017 10 07 10h16m19s163

ಕಚೇರಿಯ ಎಲ್ಲಾ ಸಿಬ್ಬಂದಿ ವರ್ಗದೊಂದಿಗೆ ಕಚೇರಿ ಕರ್ತವ್ಯದ ವೇಳೆ ಪ್ರತಿದಿನ ದಾಖಲೆಗಳನ್ನು ಹುಡುಕಲಾಗಿತ್ತು. ಕಚೇರಿಯ ಸಮಸ್ತ ದಾಖಲೆಗಳನ್ನು ಹುಡುಕಲು ಹೆಚ್ಚಿನ ಸಮಯ ವ್ಯಯವಾಗಿದೆ. ಕಚೇರಿಯ ಸಂಪೂರ್ಣ ದಾಖಲೆಗಳನ್ನು ಹುಡುಕಲಾಗಿ ಸದರಿ ದಾಸ್ತಾವೇಜಿನೊಂದಿಗೆ ನೀಡಲಾಗಿರುವ ಪೂರಕ ದಾಖಲೆಗಳು ಅವಧಿ ಮೀರಿದ್ದೆಂದು ನಾಶಪಡಿಸಲಾಗಿದೆ. ಈ ಸಂದರ್ಭದಲ್ಲೇ ಮೇಲ್ಕಂಡ ದಿನಾಂಕ 17.08.2008ರಂದು ನೋಂದಣಿಯಾದ ಕ್ರಯಪತ್ರದ ಜೊತೆ ನೀಡಲಾದ ಲಗತ್ತುಗಳು ಹಾಗೂ ದಾಖಲೆಗಳನ್ನೂ ನಾಶಪಡಿಸಿರುವ ಸಂಭವ ಇರುತ್ತದೆ ಎಂದು ಕೊಡಗು ಜಿಲ್ಲೆಯ ಹಿರಿಯ ಉಪ ನೋಂದಣಾಧಿಕಾರಿ ತಿಳಿಸಿದ್ದಾರೆ.

2007ರಲ್ಲಿ ನೋಂದಣಿಯಾಗಿರುವ ಕಪಿಲ ಮಂಜುಶ್ರೀ ಅಪಾರೆಲ್ಸ್ ಕಂಪನಿಯ ನಿರ್ದೇಶಕ ಲಕ್ಷ್ಮಣ ಗೌಡ ಕರಾಂದ್ಲಾಜೆ ಅವರ ಸಹೋದರ. 2007ರಲ್ಲಿ ನೋಂದಣಿಯಾಗಿರುವ ಮಂಜುಶ್ರೀ ಅಪಾರೆಲ್ಸ್ ಕಂಪನಿಗೆ ಒಂದೇ ವರ್ಷದಲ್ಲಿ 5 ಕೋಟಿ 10 ಲಕ್ಷ ರೂಪಾಯಿ ಲೋನ್ ದೊರಕಿದೆ. ಇಷ್ಟು ಪ್ರಮಾಣದ ಲೋನ್ ದೊರಕುವಲ್ಲಿ ಕರಂದ್ಲಾಜೆ ಅವರ ಪಾತ್ರವೂ ಇದೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು ಆರ್.ಟಿ ನಗರದಲ್ಲಿರುವ ಫೆಡರಲ್ ಬ್ಯಾಂಕ್‍ನಿಂದ ಭೂಮಿ ಮಾರಾಟ ಮಾಡಿದ ಅಬ್ದುಲ್ ರೆಹಮಾನ್ ಅವರಿಗೆ ಖಾತೆಗೆ ನೇರವಾಗಿ ಈ ಹಣ ಸಂದಾಯವಾಗಿದೆ. ಮಂಜುಶ್ರೀ ಅಪಾರೆಲ್ಸ್ ಕಂಪನಿಯ ಧ್ಯೇಯೋದ್ದೇಶಗಳೇನು? ಕಂಪನಿಯ ನಿರ್ದೇಶಕರು ಯಾರು? ಯಾವ ಉದ್ದೇಶಕ್ಕಾಗಿ ಭೂಮಿ ಖರೀದಿ ಮಾಡಲಾಗುತ್ತಿದೆ? ಎಂಬ ಪ್ರಶ್ನೆಗಳು ಈಗ ಕಾಡುತ್ತಿವೆ.

ವಿವರಗಳು ಪೂರಕ ದಾಖಲೆಗಳಲ್ಲಿ ಇರುತ್ತವೆ. ಆದರೆ ಈಗ ಈ ದಾಖಲೆಗಳನ್ನು ನಾಶ ಮಾಡಲಾಗಿದೆ ಎನ್ನುವ ಮೂಲಕ ಮಡಕೇರಿ ರಿಜಿಸ್ಟ್ರಾರ್ ಕರ್ತವ್ಯ ಲೋಪವೆಸಗಿದ್ದಾರೆ. ಮಹತ್ವದ ದಾಖಲೆಗಳನ್ನು ಸೂಕ್ತ ನಿರ್ದೇಶನ, ನಿಯಮ ಪಾಲನೆ ಮಾಡದೆ ನಾಶವಾಗಿರಬಹುದು ಎಂಬ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.
vlcsnap 2017 10 07 10h18m33s046

ಇದು ಜಿಲ್ಲಾ ಮಟ್ಟದ ಅಧಿಕಾರಿಯ ಅತೀ ಬೇಜವಾಬ್ದಾರಿ ಹೇಳಿಕೆಯಾಗಿದ್ದು, ಅಷ್ಟಕ್ಕೂ ಈ ದಾಖಲೆಗಳಲ್ಲಿ ಇರುವ ಕಂಪನಿ ಹಾಗೂ ವ್ಯಕ್ತಿಗಳು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ನೇರವಾಗಿ ಸಂಬಂಧಿಸಿವೆ. ಕಪಿಲ ಮಂಜುಶ್ರೀ ಅಪಾರೆಲ್ಸ್ ಕಂಪನಿಯ ನಿರ್ದೇಶಕ ಲಕ್ಷ್ಮಣ ಗೌಡ ಖರೀದಿಸಿರುವ 166 ಎಕರೆ ಪ್ರದೇಶದಲ್ಲಿ 20 ಎಕರೆ ಮಾತ್ರ ಕಾಫಿ ಬೆಳೆಯಲು ಅನುಮತಿಯನ್ನು ನೀಡಲಾದೆ. ಇನ್ನುಳಿದ 146 ಎಕರೆ ಪ್ರದೇಶವು ಅರಣ್ಯ ಭೂಮಿಯಾಗಿದೆ. ಈ ಪ್ರದೇಶದಲ್ಲಿ ಕೋಟ್ಯಾಂತರ ರೂ. ಬೆಲೆ ಬಾಳುವ ಮರಳು ಇದೆ. ಪ್ರತಿ ಎಕರೆ 15ರಿಂದ 20ಲಕ್ಷ ಬೆಲೆ ಬಾಳುತ್ತದೆ. ಆದರೆ ಇವರಿಗೆ ಕೇವಲ 2 ರಿಂದ 3 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಇದರ ಹಿಂದೆ ಬೇರೆಯಾವುದೇ ಉದ್ದೇಶವಿದೆ. ಅಲ್ಲದೇ ಪ್ರಭಾವಿ ರಾಜಕಾರಣಿಗಳನ್ನು ರಕ್ಷಿಸುವ ಹಾಗೂ ಅವರ ಪ್ರಭಾವಕ್ಕೆ ಮಣಿದಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತ ಹಾಗೂ ವಕೀಲ ವಿನೋದ್ ಆರೋಪ ಮಾಡಿದ್ದಾರೆ.

TAGGED:KodagumadikeriPublic TVrecordrtishobha karandlajeಆರ್‍ಟಿಐಕೊಡಗುದಾಖಲೆಪಬ್ಲಿಕ್ ಟಿವಿಮಡಿಕೇರಿಶೋಭಾ ಕರಂದ್ಲಾಜೆ
Share This Article
Facebook Whatsapp Whatsapp Telegram

Cinema news

Samantha Ruth Prabhu 2
ನಿರ್ದೇಶಕ ರಾಜ್ ನಿಡಿಮೋರು ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ನಟಿ ಸಮಂತಾ
Cinema Latest Main Post South cinema
Darshan The Devil 1
ಡಿಬಾಸ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ – ‘ದಿ ಡೆವಿಲ್’ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್!
Cinema Latest Sandalwood Top Stories
Gilli VS Raghu BBK 12
ಬಿಗ್‌ಬಾಸ್ ಮನೇಲಿ ಗಿಲ್ಲಿ V/S ರಘು.. ಜೋರಾಯ್ತು ಜಗಳ
Cinema Latest Top Stories TV Shows
bigg boss season 12 kannada Jhanvi is out of Bigg Boss
ಬಿಗ್‌ ಬಾಸ್‌ ಮನೆಯಿಂದ ಜಾನ್ವಿ ಔಟ್‌
Cinema Karnataka Latest Main Post TV Shows

You Might Also Like

maruti alto
Automobile

ಮಾರುತಿ ಸುಜುಕಿಯಿಂದ ವರ್ಷಾಂತ್ಯದಲ್ಲಿ ಗ್ರಾಹಕರಿಗೆ ಭಾರೀ ಡಿಸ್ಕೌಂಟ್ ಆಫರ್

Public TV
By Public TV
4 hours ago
TTD ElectricCAR 1
Automobile

ಎಲೆಕ್ಟ್ರಿಕ್ ಕಾರ್ ಬಳಸಿದ ಮೊದಲ ದೇವಸ್ಥಾನ ಖ್ಯಾತಿಗೆ ತಿರುಮಲ ಸೇರ್ಪಡೆ

Public TV
By Public TV
4 hours ago
MARUTHI SUZUKI
Automobile

ಜೂನ್ ತಿಂಗಳಿನಲ್ಲಿ ಮಾರುತಿ ಕಾರು ಮಾರಾಟ ಹೆಚ್ಚಳ: ಯಾವ ಕಾರು ಎಷ್ಟು ಮಾರಾಟವಾಗಿದೆ?

Public TV
By Public TV
4 hours ago
NEW BAJAJ CHETAK
Automobile

ನೂತನ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಬಜಾಜ್ ಚೇತಕ್!

Public TV
By Public TV
4 hours ago
MARUTHI SUZUKI 1
Automobile

566 ಸ್ವಿಫ್ಟ್, 713 ಡಿಸೈರ್ ಹಿಂಪಡೆದ ಮಾರುತಿ ಕಂಪೆನಿ

Public TV
By Public TV
4 hours ago
ROYAL ENFIELD PEGASUS
Automobile

ದಾಖಲೆ ನಿರ್ಮಿಸಿದ ರಾಯಲ್ ಎನ್‍ಫೀಲ್ಡ್ ನ ಕ್ಲಾಸಿಕ್ 500 ಪೆಗಾಸಸ್ ಬೈಕ್: ಬೆಲೆ ಎಷ್ಟು? ವೈಶಿಷ್ಟ್ಯವೇನು?

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?