ಇಂದು ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ 24 ಜನ ಶಾಸಕರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಅದರಲ್ಲಿ ಶಿವರಾಜ್ ಕುಮಾರ್ (Shivaraj Kumar) ಪತ್ನಿ ಗೀತಾ ಅವರ ಸಹೋದರ ಮಧು ಬಂಗಾರಪ್ಪ ಕೂಡ ಒಬ್ಬರು. ಮಧು ಪ್ರಮಾಣವಚನ (Pramanavachan) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಟ ಶಿವರಾಜ್ ಕುಮಾರ್ ಕೂಡ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
‘ಮಧು ಬಂಗಾರಪ್ಪ (Madhu Bangarappa) ಸಚಿವರಾಗುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಬಹಳ ಹಾರ್ಡ್ ವರ್ಕರ್. ಒಳ್ಳೆಯ ಮನುಷ್ಯ. ಅಂತವರಿಗೆ ಸಚಿವ ಸ್ಥಾನ ಸಿಕ್ಕಾಗ ಜನರಿಗೆ ಒಳ್ಳೆಯದಾಗಲಿದೆ ಎನ್ನುವ ಭಾವನೆ ನನ್ನದು. ಮಧು ನನಗೆ 37 ವರ್ಷದಿಂದ ಸ್ನೇಹಿತ. ಅವರು ಅಧಿಕಾರದಲ್ಲಿ ಇರದಿದ್ದಾಗಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ಹೆಲ್ಪಿಂಗ್ ನೇಚರ್ ಸೇರಿದಂತೆ ಎಲ್ಲಾದರ ಒಂದು ಕೈ ಮೇಲೂ ಅವರು. ಇಂತವರು ಸೊಸೈಟಿಯನ್ನು ಅತ್ಯುತ್ತಮವಾಗಿ ನೋಡಿಕೊಳ್ತಾರೆ ಅನ್ನೊ ನಂಬಿಕೆ’ ಎಂದರು. ಇದನ್ನೂ ಓದಿ:ಈ ಕಾರಣಕ್ಕಾಗಿ ಯಶ್ ಸಿನಿಮಾ ಕೈ ಬಿಟ್ಟರು: ನಿರ್ದೇಶಕ ನರ್ತನ್
ಮುಂದುವರೆದು ಮಾತನಾಡಿದ ಅವರು, ಸಿಎಂ ಸಿದ್ಧರಾಮಯ್ಯನವರ (Siddaramaiah) ಕುರಿತೂ ಮೆಚ್ಚುಗೆಯ ಮಾತುಗಳನ್ನು ಆಡಿದರು. ‘ಸಿದ್ದರಾಮಯ್ಯ ಅವರೆಲ್ಲ ದೊಡ್ಡ ರಾಜಕಾರಣಿ. ಅವರು ನನ್ನನ್ನ ಪ್ರೀತಿಯಿಂದ ಕ್ಯಾಂಪೇನಿಂಗ್ ಗೆ ಕರೆದಿದ್ದರು, ನಾನು ಅಷ್ಟೇ ಪ್ರೀತಿಯಿಂದ ಹೋಗಿದ್ದೆ. ನಾನು ಸಿದ್ದರಾಮಯ್ಯ ಅವರನ್ನು ಬೇರೆ ಸ್ಥಾನದಲ್ಲಿ ನೋಡುತ್ತೇನೆ. ಅವರ ಬಳಿ ಪಾಸಿಟಿವ್ ಶಕ್ತಿ ಇದೆ. ಅದಕ್ಕೆ ನಮ್ಮ ತಂದೆ ಅವರು ಕೂಡ ಅವರನ್ನ ನಮ್ಮ ಕಾಡನವರು ಅಂತ ಇದ್ರು’ ಎಂದು ಮಾತನಾಡಿದ್ದಾರೆ.