– ಕಲಾವಿದರ ಸಂಘ ಸ್ಪಂದನೆ ಕೊಡುತ್ತಿಲ್ಲ; ಸಾರಾ ಗೋವಿಂದು ಬೇಸರ
ಬೆಂಗಳೂರು: ಕಮಲ್ ಹಾಸನ್ (Kamal Haasan) ಹೇಳಿಕೆ ನೋಡಿದರೆ ಕನ್ನಡಿಗರೆಲ್ಲಾ ತಮಿಳಿಗೆ ಹುಟ್ಟಿದ್ದಾರೆ ಎನ್ನುವ ರೀತಿಯಿದೆ ಎಂದು ಕನ್ನಡಪರ ಹೋರಾಟಗಾರ ಶಿವರಾಮೇಗೌಡ (Shivarame gowda) ಕಿಡಿಕಾರಿದ್ದಾರೆ.
ಫಿಲ್ಮ್ ಚೇಂಬರ್ಗೆ ಮುತ್ತಿಗೆ ಹಾಕಿ ಮಾತನಾಡಿದ ಅವರು, ಬೇಡಿಕೊಳ್ಳಬೇಡಿ. ಅವನ ಸಿನಿಮಾ ಪ್ರದರ್ಶನ ಮಾಡ್ಬೇಡಿ. ಕಮಲ್ ಹಾಸನ್ ಕ್ಷಮಾಪಣೆ ನಮಗೆ ಬೇಕಾಗಿಲ್ಲ. ಆದರೆ ನಾಯಕ, ನಟರು ಯಾಕೆ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಪ್ಯಾನ್ ಇಂಡಿಯಾ ನಟ ಎಂದು ಘೋಷಣೆ ಮಾಡಿಬಿಡಲಿ. ಕನ್ನಡ ನಾಡಿನಲ್ಲಿ ತಮಿಳು ಸಿನಿಮಾಗಳು ನೂರಕ್ಕಿಂತ ಹೆಚ್ಚು ದಿನ ಓಡುತ್ತವೆ. ಕನ್ನಡದಿಂದ ರಾಜಕುಮಾರ್, ರಾಜಕುಮಾರ್ ಅವರಿಂದ ಕನ್ನಡ ಅಲ್ಲ ಎಂದು ಅವರೇ ಹೇಳಿದ್ದಾರೆ. ಈ ವಿಚಾರವಾಗಿ ಮುಲಾಜೆ ಇಟ್ಟುಕೊಳ್ಳಬಾರದು. ಅವರ ಹತ್ತಿರ ಕ್ಷಮೆ ಕೇಳಿ ಎಂದು ಬೇಡಿಕೊಳ್ಳುವ ಅವಶ್ಯಕತೆ ಏನಿದೆ. ಅವರ ಚಿತ್ರ ಪದರ್ಶನ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ʻಥಗ್ ಲೈಫ್ʼ ಸಿನಿಮಾಗೆ ಬ್ಯಾನ್ ಬಿಸಿ – ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್
ಕ್ಷಮೆ ಕೇಳದಿದ್ರೆ ಸಿನಿಮಾ ಬ್ಯಾನ್:
ಇದೇ ವೇಳೆ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ, ಕಮಲ್ ಹಾಸನ್ ಕಾನೂನು ಹೋರಾಟ ನಡೆಸಿದ್ದಾರೆ ಎನ್ನುವ ವಿಚಾರ ಇಲ್ಲಿಯವರೆಗೆ ನಮ್ಮ ಗಮನಕ್ಕೆ ಬಂದಿಲ್ಲ, ಬಂದ್ಮೇಲೆ ಪ್ರತಿಕ್ರಿಯೆ ನೀಡುತ್ತೇವೆ. ಇವತ್ತು ವಿತರಕರ ಜೊತೆ ಚರ್ಚೆ ಮಾಡಿದ್ದೀವಿ. ಪ್ರೊಡಕ್ಷನ್ ಹೌಸ್ ಅವರು ಸಂಪರ್ಕದಲ್ಲಿದ್ದಾರೆ. ಕಮಲ್ ಹಾಸನ್ ಊರಲ್ಲಿ ಇರಲಿಲ್ಲ. ದುಬೈನಲ್ಲಿ ಇದ್ದಾರೆ. ನಾಳೆ ಬರುತ್ತಾರೆ. ಬಂದ್ಮೇಲೆ ಚರ್ಚೆ ಮಾಡ್ತೀವಿ. ನಾಳೆ ಅವರು ಕ್ಷಮೆ ಕೇಳದಿದ್ದರೆ ಕನ್ನಡಪರ ಹೋರಾಟಗಾರರು ಹೋರಾಟ ಮುಂದುವರೆಸುತ್ತಾರೆ. ಕ್ಷಮೆಯಾಚನೆ ಮಾಡದಿದ್ರೆ ಸ್ವಯಂಘೋಷಿತವಾಗಿ ನಾವೇ ಸಿನಿಮಾ ಹಾಕುವುದಿಲ್ಲ ಎಂದು ಹೇಳುತ್ತೀವಿ. ಸರ್ಕಾರವೂ ಕೂಡಾ ನಮಗೆ ಸಪೋರ್ಟ್ ನೀಡುತ್ತಿದೆ ಎಂದು ಹೇಳಿದರು.
ಕಲಾವಿದರ ಸಂಘದ ವಿರುದ್ಧ ಅಸಮಾಧಾನ:
ಇದೇ ವೇಳೆ ಸಾರಾ ಗೋವಿಂದು ಮಾತನಾಡಿ, ಇಡೀ ಚಿತ್ರೋದ್ಯಮ ಕನ್ನಡಪರವಾಗಿ ನಿಂತಿದೆ. ವಾಣಿಜ್ಯ ಮಂಡಳಿ ಯಾವುದೇ ಕಾರಣಕ್ಕೆ ಹಿಂದೆ ಹೋಗುವುದಿಲ್ಲ. ಭಾಷಾ ಸಮಸ್ಯೆ, ರಾಜ್ಯದ ಸಮಸ್ಯೆ ಹಾಗಾಗಿ ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ. ಹೆಜ್ಜೆ ಮುಂದೆ ಇಟ್ಟಿದ್ದೀವಿ ಹಿಂದಿಡುವ ಮಾತಿಲ್ಲ. ಆದರೆ ಕನ್ನಡ ಪರ ಹೋರಾಟಕ್ಕೆ ಕಲಾವಿದರ ಸಂಘ ಸ್ಪಂದನೆ ಕೊಡುತ್ತಿಲ್ಲ. ದೊಡ್ಡಣ್ಣಗೆ ಬೆಳಿಗ್ಗೆಯಿಂದ 5 ಬಾರಿ ಕರೆ ಮಾಡಿದ್ದೀನಿ. ಒಂದು ಬಾರಿಯೂ ಕರೆ ಸ್ವೀಕರಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದರೆ ಸುಮ್ಮನಿರಲ್ಲ – ವಿಜಯೇಂದ್ರ ಸಿಡಿಮಿಡಿ