ಬೆಂಗಳೂರು: ಕಮಲ್ ಹಾಸನ್ (Kamal Haasan) ಕ್ಷಮೆ ಕೇಳೋವರೆಗೂ ಬಿಡೋದಿಲ್ಲ. ಕ್ಷಮೆ ಕೇಳಿಲ್ಲ ಅಂದರೆ ಅವರ ಸಿನಿಮಾ ಬ್ಯಾನ್ ಮಾಡ್ತೇವೆ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Thangadagi) ಪುನರುಚ್ಚರಿಸಿದರು.
ಕಮಲ್ ಹಾಸನ್ ಕ್ಷಮೆ ಕೇಳದ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಮಲ್ ಹಾಸನ್ ಕ್ಷಮೆ ಕೇಳಿಲ್ಲ. ಅಂದರೆ ಬಿಡೋರು ಯಾರು. ಹಿರಿಯ ನಟ ಅವರು. ಇದನ್ನ ನಾವು ಇಲ್ಲಿಗೆ ಬಿಡೊಲ್ಲ. ಫಿಲ್ಮ್ ಚೇಂಬರ್ ಅವರ ಜೊತೆ ಮಾತಾಡಿದ್ದೇನೆ. ಕ್ಷಮೆ ಕೇಳದೇ ಹೋದ್ರೆ ಅವರ ಸಿನಿಮಾ ಬಿಡುಗಡೆ ಮಾಡೋಕೆ ಬಿಡೊಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕಮಲ್ ಹಾಸನ್ ಕನ್ನಡ ಕಾಂಟ್ರವರ್ಸಿ ಬಗ್ಗೆ ಕೇಳ್ತಿದ್ದಂತೆ ಕೈಮುಗಿದ ಶಿವಣ್ಣ!
ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳಿಗೆ ಕಾನೂನು ತರುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಕನ್ನಡದ ಬಗ್ಗೆ ಧಿಮಾಕಿನ ಮಾತಾಡಿದ್ರೆ ಕನ್ನಡಿಗರು ಸಹಿಸುವುದಿಲ್ಲ ಎಂದರು. ಇದನ್ನೂ ಓದಿ: ಅಪ್ಪನಂತೆ ಕುದುರೆ ಸವಾರಿ ಮಾಡಿದ ವಿನೀಶ್ ದರ್ಶನ್- ಫೋಟೋ ವೈರಲ್
ಶಿವರಾಜ್ ಕುಮಾರ್ (Shiva Rajkumar) ಹಿರಿಯ ನಟರು, ಅವರಿಗೆ ಕಮಲ್ ಹಾಸನ್ ಬಗ್ಗೆ ಗೌರವ ಇದ್ದರೆ ಇರಲಿ. ಆದರೆ ಮೊದಲು ನಮ್ಮ ಭಾಷೆ ಮುಖ್ಯ. ಅವರು ಕ್ಷಮೆ ಕೇಳದೇ ಹೋದ್ರೆ ಅವರ ಸಿನಿಮಾ ಬ್ಯಾನ್ ಮಾಡುತ್ತೇವೆ. ಸರ್ಕಾರದ ವತಿಯಿಂದ ಏನು ಮಾಡಬಹುದು ಅಂತ ಸಿಎಂ ಜೊತೆಯೂ ಚರ್ಚೆ ಮಾಡ್ತೇನೆ ಎಂದು ಹೇಳಿದರು.