Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹೈಡ್ರಾಮದ ಬಳಿಕ ಸುಸೂತ್ರವಾಗಿ ನಡೆದ ಚುನಾವಣೆ- ಬಿಜೆಪಿ ನಾಯಕರ ಆದೇಶಕ್ಕೆ ತಲೆಬಾಗಿದ ಮೇಯರ್ ಅಭ್ಯರ್ಥಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಹೈಡ್ರಾಮದ ಬಳಿಕ ಸುಸೂತ್ರವಾಗಿ ನಡೆದ ಚುನಾವಣೆ- ಬಿಜೆಪಿ ನಾಯಕರ ಆದೇಶಕ್ಕೆ ತಲೆಬಾಗಿದ ಮೇಯರ್ ಅಭ್ಯರ್ಥಿ

Districts

ಹೈಡ್ರಾಮದ ಬಳಿಕ ಸುಸೂತ್ರವಾಗಿ ನಡೆದ ಚುನಾವಣೆ- ಬಿಜೆಪಿ ನಾಯಕರ ಆದೇಶಕ್ಕೆ ತಲೆಬಾಗಿದ ಮೇಯರ್ ಅಭ್ಯರ್ಥಿ

Public TV
Last updated: January 29, 2020 3:39 pm
Public TV
Share
4 Min Read
Shivamogga Mayor 1
SHARE

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ಕೊನೆಗೂ ಹೈಡ್ರಾಮದ ನಡುವೆ ಮುಗಿದಿದೆ. ಮೇಯರ್ ಆಗಿ ಬಿಜೆಪಿಯ ಸುವರ್ಣ ಶಂಕರ್ ಆಯ್ಕೆಯಾದರೆ, ಉಪಮೇಯರ್ ಆಗಿ ಸುರೇಖಾ ಮುರಳೀಧರ್ ಆಯ್ಕೆಗೊಂಡಿದ್ದಾರೆ.

ಒಂದು ಹಂತದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ಮೇಯರ್ ಆಯ್ಕೆ ಪ್ರಕರಣ ನಂತರ ಬಿಜೆಪಿ ನಾಯಕರ ಮಧ್ಯೆ ಪ್ರವೇಶದಿಂದಾಗಿ ಸುಖಾಂತ್ಯ ಕಂಡಿದೆ. ಕಣ್ಣೀರು, ಸಿಟ್ಟು, ಸಂತಸ, ಸಂಭ್ರಮ ಇವೆಲ್ಲದರ ನಡುವೆ ಮೇಯರ್ ಮತ್ತು ಉಪಮೇಯರ್ ಆಯ್ಕೆ ನಡೆದಿದೆ.

Shivamogga Mayor 2

ಕಳೆದೊಂದು ವಾರದಿಂದ ಭಾರೀ ಕೂತುಹಲ ಮತ್ತು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ 2ನೇ ಅವಧಿಗೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ಸುಖಾಂತ್ಯ ಕಂಡಿದೆ. ನ್ಯಾಯಾಲಯದ ಮೆಟ್ಟಿಲು ಸಹ ಏರಿದ್ದ ಮೇಯರ್ ಆಯ್ಕೆ ಪ್ರಕ್ರಿಯೆ ಕೊನೆಗೂ ಬಿಜೆಪಿ ಪಕ್ಷದ ಹಿರಿಯ ಮುಖಂಡರ ಮಧ್ಯಸ್ಥಿಕೆ ನಡುವೆ ಅಂತಿಮವಾಗಿ ಬಿಜೆಪಿ ಪಕ್ಷದ ಹಿರಿಯ ಸದಸ್ಯೆ ಸುವರ್ಣ ಶಂಕರ್ ಅವರ ಆಯ್ಕೆ ನಡೆದಿದೆ.

ಅಷ್ಟಕ್ಕೂ ಕಳೆದೊಂದು ವಾರದಿಂದ ಬಿಜೆಪಿಯ ಪಾಲಿಕೆ ಸದಸ್ಯರ ನಡುವೆಯೇ ಮೇಯರ್ ಆಗಬೇಕೆಂಬ ಜಿದ್ದಾಜಿದ್ದು ಏರ್ಪಟಿತ್ತು. ಬಿಸಿಎಂ (ಬಿ)ಗೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಸುವರ್ಣ ಶಂಕರ್ ಮತ್ತು ಅನಿತಾ ರವಿಶಂಕರ್ ನಡುವೆ ಭಾರೀ ಪೈಪೋಟಿ ನಡೆದಿತ್ತು. ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದ ಸುವರ್ಣ ಶಂಕರ್ ಅವರಿಗೆ ಬಿಸಿಎಂ (ಬಿ) ಜಾತಿ ಪ್ರಮಾಣ ಪತ್ರ ನೀಡಿದ್ದರ ಕುರಿತಂತೆ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಈ ಬಗ್ಗೆ ಕಾನೂನಿನ ಮೂಲಕ ಪ್ರಶ್ನಿಸಲಾಗಿತ್ತು. ಅಂತಿಮವಾಗಿ ಸುವರ್ಣ ಶಂಕರ್ ಅರ್ಜಿ ವಜಾ ಮಾಡಿ ಅನಿತಾ ರವಿಶಂಕರ್ ಅವರ ಅರ್ಜಿ ಮಾನ್ಯ ಮಾಡಿದ್ದ ಎಸಿ ನ್ಯಾಯಾಲಯ ತೀರ್ಪು ಕೂಡ ನೀಡಿತ್ತು. ಆದರೆ ಇದನ್ನ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ನಿನ್ನೆ ಸ್ಟೇ ಆರ್ಡರ್ ತಂದಿದ್ದ ಸುವರ್ಣ ಶಂಕರ್ ಇಂದು ಅಂತಿಮವಾಗಿ ಮೇಯರ್ ಆಗಿ ಆಯ್ಕೆಗೊಂಡಿದ್ದಾರೆ.

Shivamogga Mayor A 2

ಇಂದು ಮುಂಜಾನೆಯೇ ಸಚಿವ ಈಶ್ವರಪ್ಪ ಸೇರಿದಂತೆ ಪಕ್ಷದ ಹಿರಿಯ ನಾಯಕರ ನೇತೃತ್ವದಲ್ಲಿ ಪಾಲಿಕೆ ಸದಸ್ಯರ ಸಭೆ ನಡೆಸಿದ ಬಳಿಕ ಸುವರ್ಣ ಶಂಕರ್ ಅವರನ್ನೇ ಅಂತಿಮವಾಗಿ ಮೇಯರ್ ಅಭ್ಯರ್ಥಿ ಎಂದು ಘೋಷಿಸಿದರಲ್ಲದೇ ಮತ್ತೊಬ್ಬ ಪ್ರಬಲ ಸ್ಪರ್ಧಾಕಾಂಕ್ಷಿ ಅದರಲ್ಲೂ ಯಡಿಯೂರಪ್ಪ ಬಣ ಎಂದು ಗುರುತಿಸಿಕೊಂಡಿದ್ದ ಅನಿತಾ ರವಿಶಂಕರ್ ಅವರಿಗೆ ಸುಮ್ಮನಿರುವಂತೆ ತಾಕೀತು ಮಾಡಲಾಯಿತು. ಈ ವೇಳೆ ಸಿಟ್ಟಿನಿಂದಲೇ ಸಭೆಯಿಂದ ಹೊರಬಂದ ಅನಿತಾ ರವಿಶಂಕರ್ ಅಳುತ್ತಲೇ ಕಾರಿನಲ್ಲಿ ತೆರಳಿದರು. ಬಿಜೆಪಿ ಸದಸ್ಯರೆಲ್ಲರೂ ಒಂದೇ ಬಸ್ ನಲ್ಲಿ ದೇವಾಲಯಕ್ಕೆ ತೆರಳಿ ಪಾಲಿಕೆಗೆ ಬಂದರೂ ಕೂಡ ಅನಿತಾ ರವಿಶಂಕರ್ ಮಾತ್ರ ಅಂತರ ಕಾಯ್ದುಕೊಂಡೇ ಇದ್ದರು.

Shivamogga Mayor A 1

ಈ ನಡುವೆ ಪಾಲಿಕೆ ಸಭಾಂಗಣದಲ್ಲಿ ನಡೆದ ಮೇಯರ್ ಮತ್ತು ಉಪಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ, ಮೇಯರ್ ಗೆ 26 ಜನರು ಕೈ ಎತ್ತುವ ಮೂಲಕ ಮತ್ತು ಉಪಮೇಯರ್ ಗೆ 26 ಜನರು ಕೈ ಎತ್ತುವ ಮೂಲಕ ಆಯ್ಕೆ ನಡೆಸಲಾಯಿತು. ಈ ಮಧ್ಯೆ ಕಾಂಗ್ರೆಸ್ ಪಕ್ಷ ಕೂಡ ಮೇಯರ್ ಮತ್ತು ಉಪಮೇಯರ್ ಗೆ ಸ್ಪರ್ಧಿಸಿ 12 ಮತಗಳಿಗೆ ತೃಪ್ತಿಪಟ್ಟು ಕೊಳ್ಳಬೇಕಾಯಿತು.

ಈ ಎಲ್ಲಾ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್. ಈಶ್ವರಪ್ಪ, ಸ್ವಾಭಾವಿಕವಾಗಿ ಸದಸ್ಯರಿಗೆ ಮೇಯರ್ ಆಗಬೇಕೆಂಬ ಅಪೇಕ್ಷೆ ಇದ್ದೆ ಇರುತ್ತದೆ. ಆದ್ರೆ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧ ಎಂದು ತೋರಿಸಿಕೊಡುವುದೇ ಬಿಜಪಿ ಎನ್ನುವ ಮೂಲಕ ಬೇಸರಗೊಂಡಿರುವ ಸದಸ್ಯರಿಗೆ ಕಿವಿ ಮಾತು ಹೇಳಿದ್ದಾರೆ.

Shivamogga Mayor A 4

ಅಷ್ಟಕ್ಕೂ ಮೇಯರ್ ಆಗುವ ಆಸೆ ಕೈಚೆಲ್ಲಿ ಬೇಸರಗೊಂಡಿರುವ ಅನಿತಾ ರವಿಶಂಕರ್ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರೂ ಕೂಡ ಅವರ ಮುಖದಲ್ಲಿ ದುಃಖ ಎದ್ದು ಕಾಣುತಿತ್ತು. ಒಂದು ಹಂತದಲ್ಲಿ ಮತ ಚಲಾವಣೆಗೆ ಕೈ ಎತ್ತುವ ಸಂದರ್ಭದಲ್ಲಿ ಅರ್ಧ ಕೈ ಎತ್ತುವ ಮೂಲಕ ತಮ್ಮ ಅಸಮಾಧಾನವನ್ನು ಕೂಡ ಅವರು ಹೊರ ಹಾಕಿದ ಘಟನೆಯೂ ನಡೆಯಿತು.

ಈ ಮಧ್ಯೆ ಬಿಜೆಪಿ ಸದಸ್ಯರ ಕಾಲೆಳೆದ ಕಾಂಗ್ರೆಸ್ ಸದಸ್ಯರಿಗೆ ಸಚಿವ ಈಶ್ವರಪ್ಪ ಕ್ಲಾಸ್ ಕೂಡ ತೆಗೆದುಕೊಂಡರು. ಬಿಜೆಪಿಯ ಎರಡು ಬಣಗಳ ಇಬ್ಬರು ಅಭ್ಯರ್ಥಿಗಳು ರೇಸ್ ನ ಹಿನ್ನೆಲೆಯಲ್ಲಿ, ಪಾಲಿಕೆಯ ಕಾಂಗ್ರೆಸ್ ಸದಸ್ಯ ಯೋಗಿಶ್ ಬಿಜೆಪಿ ಸದಸ್ಯರ ಕಾಲೆಳೆದರು. ಈ ವೇಳೆ ಸಿಟ್ಟಿಗೆದ್ದ ಈಶ್ವರಪ್ಪ ಕಾಂಗ್ರೆಸ್ ಪ್ರಾಂತವಾರು ನಾಲ್ವರು ಕೆಪಿಸಿಸಿ ಕಾರ್ಯಧ್ಯಕ್ಷರ ಆಯ್ಕೆಗೆ ಮುಂದಾಗಿದ್ದಾರೆ ಎಂದು ಕುಟುಕಿದರು. ಕಾಂಗ್ರೆಸ್ ಪಕ್ಷದ ಹಣೆಬರಹ ನೋಡಿ ಎಂದು ಹೇಳುವ ಮೂಲಕ ಸಚಿವ ಈಶ್ವರಪ್ಪ ಚುನಾವಣಾ ಅಧಿಕಾರಿಗಳ ಮುಂದೆಯೇ ಕೈ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡರು.

Shivamogga Mayor A 3

ಈ ನಡುವೆ ಮೇಯರ್ ಮತ್ತು ಉಪಮೇಯರ್ ಆಯ್ಕೆ ಪ್ರಕ್ರಿಯೆ ಸರಾಗವಾಗಿ ನಡೆದು ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಅವಿರೋಧ ಆಯ್ಕೆಯೂ ನಡೆಯಿತು. ಇನ್ನು ನೂತನವಾಗಿ ಮೇಯರ್ ಮತ್ತು ಉಪಮೇಯರ್ ಆಗಿ ಆಯ್ಕೆಗೊಂಡ ಸುವರ್ಣ ಶಂಕರ್ ಮತ್ತು ಸುರೇಖಾ ಮುರಳೀಧರ್ ಅವರಿಗೆ ಸಚಿವ ಈಶ್ವರಪ್ಪ ಸೇರಿದಂತೆ ಬಿಜೆಪಿ ಸದಸ್ಯರು ಹಾರ ತುರಾಯಿ ಹಾಕುವ ಮೂಲಕ ಸುವರ್ಣ ಶಂಕರ್ ಪರವಾಗಿ ಇರುವುದಾಗಿ ತೋರ್ಪಡಿಸಿದರು. ಆದರೆ ಈ ವೇಳೆ ಬೇಸರಗೊಂಡ ಅನಿತಾ ರವಿಶಂಕರ್ ಸಭೆಯಿಂದ ನಿರ್ಗಮಿಸಿ ಆಗಿತ್ತು.

ಇಂದು ನಡೆದ ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮಹಾ ಪೌರರಾಗಿ ಶ್ರೀಮತಿ ಸುವರ್ಣ ಶಂಕರ್ ಹಾಗೂ ಉಪ ಮಹಾಪೌರರಾಗಿ ಶ್ರೀಮತಿ ಸುರೇಖಾ ಮುರಳೀಧರ ರವರು ಆಗಿ ಆಯ್ಕೆಯಾಗಿದ್ದಾರೆ.

ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. pic.twitter.com/ioBMfYy9Nm

— K S Eshwarappa (@ikseshwarappa) January 29, 2020

ಒಟ್ಟಿನಲ್ಲಿ ಬಲು ರೋಚಕತೆ ಪಡೆದುಕೊಂಡಿದ್ದ ಮೇಯರ್ ಆಯ್ಕೆ ಪ್ರಕ್ರಿಯೆ ಬಿಜೆಪಿ ನಾಯಕರ ಮಧ್ಯೆ ಪ್ರವೇಶದಿಂದಾಗಿ ಸುಖಾಂತ್ಯ ಕಂಡಿದೆ. ಈ ನಡುವೆ ಬಿಜೆಪಿ ಸದಸ್ಯರಲ್ಲೂ ಎಲ್ಲವೂ ಸರಿಯಿಲ್ಲ ಎಂಬುದು ತೋರ್ಪಡಿಸಿದಂತಾಗಿದ್ದು, ಯಡಿಯೂರಪ್ಪ ಬಣ ಮತ್ತು ಈಶ್ವರಪ್ಪ ಬಣದ ಸದಸ್ಯರ ಪೈಕಿ ಈಶ್ವರಪ್ಪ ಬಣದ ಸದಸ್ಯೆ ಮೇಯರ್ ಆಗಿ ಆಯ್ಕೆಗೊಂಡಂತಾಗಿದೆ. ಅಂದಹಾಗೆ ಇದೀಗ ಅಸಮಾಧಾನಗೊಂಡಿರುವ ಅನಿತಾ ರವಿಶಂಕರ್ ಅವರಿಗೆ ಯಾವ ಹುದ್ದೆ ನೀಡಿ ಮನವೊಲಿಸಲಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

TAGGED:bjpks eshwarappashivamoggashivamogga municipal corporationಕೆ.ಎಸ್.ಈಶ್ವರಪ್ಪಬಿಜೆಪಿಶಿವಮೊಗ್ಗಶಿವಮೊಗ್ಗ ಮಹಾನಗರ ಪಾಲಿಕೆ
Share This Article
Facebook Whatsapp Whatsapp Telegram

Cinema news

Rakshas kannada Web Series
ತರುಣ್ ಸುಧೀರ್ ನಿರ್ಮಾಣದಲ್ಲಿ ರಾಕ್ಷಸ ವೆಬ್ ಸಿರೀಸ್
Cinema Latest Sandalwood Top Stories
Veera Kambal Trailer Released The Glory of Tulunad Revealed Adithya SV Rajendra Singh Babu Kadri Manikanth
ವೀರ ಕಂಬಳ ಟ್ರೈಲರ್ ಬಿಡುಗಡೆ : ತುಳುನಾಡಿನ ವೈಭವ ಅನಾವರಣ
Cinema Latest Sandalwood
Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood

You Might Also Like

PM Modi AI MANAV vision sundar pichai Sam altman Dario Amode 1
Latest

ದೆಹಲಿಯಲ್ಲಿ ಎಐ ದಿಗ್ಗಜರು – ಏನಿದು ಮೋದಿಯ MANAV ವಿಷನ್‌?

Public TV
By Public TV
22 minutes ago
Shalini Rajneesh
Bengaluru City

ಮುಡಾ ಮಾಜಿ ಆಯುಕ್ತ ನಟೇಶ್‌ ಮುಂಬಡ್ತಿಗೆ ಲಂಚ ಆರೋಪ – ಆಧಾರ ರಹಿತ ಆರೋಪಕ್ಕೆ ಕ್ರಮ: ಸ್ನೇಹಮಯಿಗೆ ಸಿಎಸ್‌ ಎಚ್ಚರಿಕೆ

Public TV
By Public TV
54 minutes ago
Magadi road psi koushik
Bengaluru City

ನಿರೀಕ್ಷಣಾ ಜಾಮೀನು ಪಡೆದು ಠಾಣೆಗೆ ಹೋದ ವ್ಯಕ್ತಿ ಮೇಲೆ ಪಿಎಸ್‌ಐ ಹಲ್ಲೆ – ಎಫ್‌ಐಆರ್ ದಾಖಲು

Public TV
By Public TV
1 hour ago
d.k.shivakumar
Bengaluru City

ಮತದಾರರ ಪಟ್ಟಿ ದೋಷ ಸರಿಪಡಿಸಲು ಬೀದಿ, ಮನೆವಾರು ಮ್ಯಾಪಿಂಗ್ ಮಾಡಿ: ಚುನಾವಣಾ ಆಯೋಗಕ್ಕೆ ಡಿಕೆಶಿ ಪತ್ರ

Public TV
By Public TV
1 hour ago
kumki elephants arrived Chikkamagaluru Pura capture wild elephant
Chikkamagaluru

ಚಿಕ್ಕಮಗಳೂರು | ನರಹಂತಕ ಕಾಡಾನೆ ಸೆರೆಗೆ ಸಾಕಾನೆ ಬಳಸಿ ಕಾರ್ಯಾಚರಣೆ

Public TV
By Public TV
1 hour ago
Uttarakhand highcourt
Court

ಧಾರ್ಮಿಕ ಸ್ಥಳಗಳಲ್ಲಿ ಅಕ್ರಮ ಚಟುವಟಿಕೆ – ದೇಗುಲ, ಆಶ್ರಮಗಳಲ್ಲಿ ತಪಾಸಣೆ ನಡೆಸುವಂತೆ ಉತ್ತರಾಖಂಡ ಹೈಕೋರ್ಟ್ ಸೂಚನೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?