ಮಲೆನಾಡಿಗರಿಗೆ ತಂಪೆರೆದ ಮಳೆರಾಯ

Public TV
1 Min Read
SMG 8

ಶಿವಮೊಗ್ಗ: ಬಿಸಿಲ ಬೇಗೆಯಿಂದ ಬಸವಳಿದಿದ್ದ ಮಲೆನಾಡಿಗರಿಗೆ ಮಳೆರಾಯ ತಂಪೆರೆದಿದ್ದು, ವರ್ಷದ ಮೊದಲ ಮಳೆಗೆ ಜನಸಾಮಾನ್ಯರನ್ನು ಸಂತಸ ವ್ಯಕ್ತಪಡಿಸಿದ್ದಾರೆ.

c58e4cc5 b3ba 46a9 a8fc 43ed761e91c2

ಮಲೆನಾಡಿನ ಹಲವೆಡೆ ಇಂದು ಮಧ್ಯಾಹ್ನದ ವೇಳೆ ಸಾಧಾರಣ ಮಳೆಯಾಗಿದೆ. ಹೊಸನಗರ ತಾಲೂಕಿನ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರ್ಷದ ಮೊದಲ ಮಳೆ ಕಂಡು ಜನತೆ ಖುಷಿಯಾಗಿದ್ದಾರೆ. ಇದನ್ನೂ ಓದಿ: ಬಿಸಿಲ ಬೇಗೆಯ ಮಧ್ಯೆ ವರುಣ ಸಿಂಚನ- ರಾಜ್ಯದ ಹಲವೆಡೆ ಇಂದು ಮಳೆ

a64e9479 ea1a 4078 b90e 66294e1642ce

ಅಕಾಲಿಕವಾಗಿ ಅರ್ಧ ಗಂಟೆಗಳ ಕಾಲ ಸಾಧಾರಣ ಮಳೆಯಾಗಿದ್ದು, ಬಿಸಿಲಿನಿಂದ ಬಸವಳಿದಿದ್ದ ಜನ ಮಳೆ ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. ಮಳೆಯಿಂದಾಗಿ ಕೆಲಕಾಲ ವಾಹನ ಸವಾರರು ಪರದಾಡಿದ ಪ್ರಸಂಗವೂ ನಡೆಯಿತು. ದ್ವಿಚಕ್ರ ಸವಾರರು ಅಂಗಡಿ, ಬಸ್ ನಿಲ್ದಾಣಗಳಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಆಶ್ರಯ ಪಡೆದರು.

1e988fe6 bd36 4caa 92ce f95c8d87d721

Share This Article
Leave a Comment

Leave a Reply

Your email address will not be published. Required fields are marked *