ಶಿವಮೊಗ್ಗ: ಜಿಲ್ಲೆಯ ಏರ್ ಪೋರ್ಟ್ಗೆ ಗಣ್ಯರ ಹೆಸರು ನಾಮಕರಣ ಮಾಡುವ ವಿಚಾರ ಮತ್ತಷ್ಟು ಕಾವು ಪಡೆದಿದೆ. ಮೊದಲಿಗೆ ಏರ್ ಪೋರ್ಟ್ ಗೆ ಯಡಿಯೂರಪ್ಪ ಹೆಸರು ಕೇಳಿಬಂದರೂ ಖುದ್ದು ಯಡಿಯೂರಪ್ಪನವರೇ ತಮ್ಮ ಹೆಸರು ಬೇಡ ಕುವೆಂಪು (kuvempu) ಹೆಸರಿಡಿ ಎಂದು ಪ್ರಸ್ತಾವನೆ ಇಟ್ಟಿದ್ರು. ಆದರೆ ಕುವೆಂಪು ಹೆಸರು ಬದಲಿಗೆ ಮತ್ತೊಬ್ಬರ ಹೆಸರಿಡಲು ಮಲೆನಾಡಲ್ಲಿ ಕೂಗು ಎದ್ದಿದೆ.
ದಶಕಗಳ ಕನಸಾದ ಶಿವಮೊಗ್ಗ ವಿಮಾನ ನಿಲ್ದಾಣ (Shivamogga Airport) ಈಗ ರೆಡಿಯಾಗಿದೆ. ಎಲ್ಲಾ ರೀತಿಯಲ್ಲಿಯೂ, ಲೋಹದ ಹಕ್ಕಿ ಹಾರಾಟಕ್ಕೆ ವಿಮಾನ ನಿಲ್ದಾಣ ಸಜ್ಜಾಗಿದೆ. ನೈಟ್ ಲ್ಯಾಂಡಿಂಗ್ ಸೇರಿದಂತೆ, ದೇಶದಲ್ಲಿಯೇ, ಅತ್ಯಂತ ಕಡಿಮೆ ಖರ್ಚಿನಲ್ಲಿ ರೆಡಿಯಾಗಿರೋ ಈ ವಿಮಾನ ನಿಲ್ದಾಣವನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಯೇ ಫೆಬ್ರವರಿ 27ರಂದು ಉದ್ಘಾಟನೆಗೊಳಿಸಲಿದ್ದಾರೆ. ಆದರೆ ಉದ್ಘಾಟನೆಗೆ ಡೇಟ್ ಫಿಕ್ಸ್ ಆದರೂ ಇನ್ನೂ ಏರ್ ಪೋರ್ಟ್ ಗೆ ನಾಮಕರಣವೇ ಫೈನಲ್ ಆಗಿಲ್ಲ. ಏರ್ ಪೋರ್ಟ್ ಗೆ ನನ್ನ ಹೆಸರು ಬೇಡ ಕುವೆಂಪು ಹೆಸರಿಡಿ ಅಂತ ಬಿಎಸ್ವೈ ಹೇಳಿರುವುದಕ್ಕೆ ಕೆಲವರು ಸಂತೋಷ ವ್ಯಕ್ತಪಡಿಸಿದ್ರೆ, ಜಿಲ್ಲೆಯ ಪ್ರಬಲ ಸಮುದಾಯವೊಂದು ಕುವೆಂಪು ನಾಮಕರಣಕ್ಕೆ ಅಪಸ್ವರ ಎತ್ತಿದೆ. ಇದನ್ನೂ ಓದಿ: ಮೋದಿಯಿಂದ ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆ: ಬಿಎಸ್ವೈ
ವಿವಿಧ ಹೆಸರುಗಳನ್ನು ಸೂಚಿಸಿ ಹೋರಾಟ ಮಾಡಿದವರೂ ಕುವೆಂಪು ಹೆಸರನ್ನು ಸ್ವಾಗತಿಸಿದ್ದರು. ಆದರೆ ಇದೀಗ ಜಿಲ್ಲೆಯ ಬಹು ಸಂಖ್ಯಾತ ಆರ್ಯ ಈಡಿಗ ಸಮಾಜದವರು ಸಂಘಟನೆ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ನೇತೃತ್ವದಲ್ಲಿ ಕುವೆಂಪು ಹೆಸರನ್ನು ವಿರೋಧಿಸಿದ್ದಾರೆ. ಅಲ್ಲದೇ ಮಾಜಿ ಸಿ.ಎಂ ಮತ್ತು ವರ್ಣರಂಜಿತ ರಾಜಕಾರಣಿ ಎಂದೇ ಫೇಮಸ್ ಆಗಿದ್ದ ದಿ.ಎಸ್.ಬಂಗಾರಪ್ಪ ಹೆಸರನ್ನು ಏರ್ ಪೋರ್ಟ್ ಗೆ ಇಡಿ ಅಂತಾ ಒತ್ತಾಯಿಸಿದ್ದಾರೆ.
ಒಟ್ಟಾರೆ ಜನ ಸೇವೆಗೆ ಶಿವಮೊಗ್ಗದ ಏರ್ ಪೋರ್ಟ್ ಉದ್ಘಾಟನೆ ಏನೋ ಆಗ್ತಿದೆ. ಆದರೆ ಆ ಏರ್ ಪೋರ್ಟ್ ಅನ್ನು ಯಾವ ಹೆಸರಿನಲ್ಲಿ ಕರೆಯಬೇಕು ಎಂಬುದು ಮಾತ್ರ ಇನ್ನೂ ಫೈನಲ್ ಆಗಿಲ್ಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k