ಬೀದರ್‍ನಲ್ಲಿ ಛತ್ರಪತಿ ಶಿವಾಜಿಯ ಪುತ್ಥಳಿ ಧ್ವಂಸ- ಮರಾಠ ಸಮುದಾಯದಿಂದ ಪ್ರತಿಭಟನೆ

Public TV
1 Min Read
BDR STATUE

ಬೀದರ್: ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ಔರಾದ ತಾಲೂಕಿನ ಬಾದಲಗಾಂವ ಗ್ರಾಮದಲ್ಲಿ ನಡೆದಿದೆ.

ಬಾದಲಗಾಂವ ಗ್ರಾಮದ ಸರ್ಕಲ್‍ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಇತ್ತು. ಆದರೆ ತಡರಾತ್ರಿ ಸುಮಾರು 1.30 ಕ್ಕೆ ಕೀಡಿಗೇಡಿಗಳು ಶಿವಾಜಿ ಮಹಾರಾಜರ ಪುತ್ಥಳಿಯ ಶಿರವನ್ನ ಧ್ವಂಸ ಮಾಡಿದ್ದಾರೆ. ಮುಂಜಾನೆ ಈ ವಿಚಾರವನ್ನು ತಿಳಿದ ಮರಾಠ ಸಮುದಾಯದವರು ಪ್ರತಿಭಟನೆ ಮಾಡುತ್ತಿದ್ದಾರೆ.

vlcsnap 2017 10 31 10h34m20s93
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಬಂದಿದ್ದು, ವೈಎಸ್‍ಪಿ ವೇಂಕನಗೌಡ ನೇತೃತ್ವದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ, ಆದರೆ ಈ ಕೃತ್ಯವನ್ನು ಮಾಡಿರುವ ಕಿಡಿಗೇಡಿಗಳು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

vlcsnap 2017 10 31 10h34m13s22

vlcsnap 2017 10 31 10h34m32s224

vlcsnap 2017 10 31 10h35m46s217

vlcsnap 2017 10 31 10h35m11s95

vlcsnap 2017 10 31 10h33m58s137 1

 

Share This Article
Leave a Comment

Leave a Reply

Your email address will not be published. Required fields are marked *