ನಟ ರಮೇಶ್ ಅರವಿಂದ್ (Ramesh Aravind) ಇಂದು ಹುಟ್ಟು ಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. ಇವರ ಹುಟ್ಟು ಹಬ್ಬಕ್ಕಾಗಿಯೇ ರಮೇಶ್ ನಟನೆಯ ‘ಶಿವಾಜಿ ಸುರತ್ಕಲ್ 2’ (Shivaji Surathkal 2) ಸಿನಿಮಾದ ಟೀಸರ್ (Teaser) ರಿಲೀಸ್ ಮಾಡಲಾಗಿದೆ. ಇದೊಂದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಾಜಿ ಸುರತ್ಕಲ್ ಸಿನಿಮಾದ ಮುಂದುವರಿಕೆ ಭಾಗವಾಗಿದೆ. ಮೊದಲ ಭಾಗದಲ್ಲೇ ಈ ಸಿನಿಮಾ ಯಶಸ್ಸು ಕಂಡಿದ್ದು, ಎರಡನೇ ಭಾಗ ಕೂಡ ಕುತೂಹಲ ಮೂಡಿಸಿದೆ.
2020ರಲ್ಲಿ ಶಿವಾಜಿ ಸುರತ್ಕಲ್ ಕೇಸ್ ಆಫ್ ರಣಗಿರಿ ಹೆಸರಿನಲ್ಲಿ ಸಿನಿಮಾ ಮೂಡಿ ಬಂದಿತ್ತು. ಆಕಾಶ್ ಶ್ರೀವಾತ್ಸವ್ (Akash Srivatsa) ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲೂ ಸಖತ್ ಕಮಾಯಿ ಮಾಡಿತ್ತು. ಹೀಗಾಗಿ ಎರಡನೇ ಭಾಗದಲ್ಲಿ ಈ ಚಿತ್ರವನ್ನು ತಯಾರಿಸಲಾಗುತ್ತಿದೆ. ರಮೇಶ್ ಅರವಿಂದ್ ಈ ಸಿನಿಮಾದಲ್ಲಿ ತನಿಖಾಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಕೇಸ್ ನಂ 131ನ್ನು ಬೇಧಿಸುವಂತಹ ಪಾತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ರಾಕೇಶ್ ಸ್ಮಾರ್ಟ್ ಗೇಮ್ ಆಡುತ್ತಿದ್ದಾನೆ- ಸಾನ್ಯಾ ಕೆಂಡಾಮಂಡಲ
ಈ ನಡುವೆ ರಮೇಶ್ ಅರವಿಂದ್ ಅವರು ಬರೆದ, ಸಾವಣ್ಣ ಪಬ್ಲಿಕೇಷನ್ (Sawanna Books) ಪ್ರಕಟಿಸಿರುವ ‘ಪ್ರೀತಿಯಿಂದ ರಮೇಶ್’ ಯಶಸ್ಸಿನ ಸರಳ ಸೂತ್ರಗಳು ಹೆಸರಿನ ಪುಸ್ತಕವು (Book) ರವಿವಾರ ಬಿಡುಗಡೆ ಆಗುತ್ತಿದ್ದು, ಯಶಸ್ಸಿಗೆ ಸಂಬಂಧಿಸಿದಂತೆ ಬರಹಗಳು ಈ ಪುಸ್ತಕದಲ್ಲಿ ಇವೆ. ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಹಿತ್ಯ ವಲಯದಲ್ಲೂ ರಮೇಶ್ ಅವರು ಗುರುತಿಸಿಕೊಳ್ಳುತ್ತಿದ್ದಾರೆ. ಕಳೆದ ತಿಂಗಳವಷ್ಟೇ ವೀರಲೋಕ ಪ್ರಕಾಶನವು ರಮೇಶ್ ಅವರ ಮತ್ತೊಂದು ಪುಸ್ತಕವನ್ನು ಪ್ರಕಟಿಸಿತ್ತು. ಈಗ ಮತ್ತೊಂದು ಪುಸ್ತಕ ಓದುಗರ ಮಡಿಲಿಗೆ ಹಾಕಿದ್ದಾರೆ.