ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸಿದ್ದ ಶಿರೂರು ಶ್ರೀ ಆಪ್ತೆ ರಮ್ಯಾ ಶೆಟ್ಟಿ ಬಂಧನ

Public TV
1 Min Read
SHIROORU SHREE 1

ಮಂಗಳೂರು: ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅಸಹಜ ಸಾವು ಪ್ರಕರಣ ಕುರಿತಂತೆ ಪೊಲೀಸ್ ವಿಚಾರಣೆ ಬಳಿಕ ರಮ್ಯಾ ಶೆಟ್ಟಿ ಪರಾರಿಯಾಗಲು ಯತ್ನಿಸಿದ್ದಾರೆ.

ಬುರ್ಖಾ ಹಾಕಿ ರಮ್ಯಾ ಪರಾರಿಯಾಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಶ್ರೀ ಸತ್ಯದೇವತೆ ದೇವಸ್ಥಾನದ ಎದುರು ಪೊಲೀಸರು ಆಕೆಯನ್ನು ಹಿಡಿದಿದ್ದಾರೆ.

ಮೂವರು ಮಹಿಳೆಯರೊಂದಿಗೆ ಎರ್ಟಿಗಾ ಕಾರ್ ನಲ್ಲಿ ರಮ್ಯಾ ಶೆಟ್ಟಿ ತೆರಳುತ್ತಿದ್ದಳು. ಈ ವೇಳೆ ಅಳದಂಗಡಿ ದೇವಸ್ಥಾನದ ಬಳಿ ಕಾರ್ ಪಂಕ್ಚರ್ ಆಗಿದೆ. ಸಂಶಯಗೊಂಡ ಸ್ಥಳೀಯರಿಂದ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಉಡುಪಿ ಪೊಲೀಸರ ಸೂಚನೆ ಮೇರೆಗೆ ಕಾರ್ ಫಾಲೋ ಮಾಡಿಕೊಂಡು ಬರುತ್ತಿದ್ದ ವೇಣೂರು ಪೊಲೀಸರು, ಆಕೆಯನ್ನು ಹಿಡಿದು ಉಡುಪಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *