ಭಾನುವಾರ ಬೆಳಗ್ಗೆ 10.30ರಿಂದ ಶಿರಾಡಿಘಾಟ್ ಸಂಚಾರಕ್ಕೆ ಮುಕ್ತ- ಸಚಿವ ಎಚ್.ಡಿ ರೇವಣ್ಣ

Public TV
1 Min Read
SHIRADI GHAT

ಹಾಸನ: ನಾಳೆಯಿಂದ ಶಿರಾಡಿಘಾಟ್ ಸಂಚಾರಕ್ಕೆ ಮುಕ್ತವಾಗಲಿದ್ದು, ಉಳಿದಿರುವ ಕಾಮಗಾರಿಗಳ ಬಗ್ಗೆ ತ್ವರಿತ ಕಾಮಗಾರಿಗೆ ಸೂಚನೆ ನೀಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್‍ಡಿ ರೇವಣ್ಣ ಅವರು ಭನುವಾರ ಬೆಳಗ್ಗೆ 10.30ಕ್ಕೆ ಸಕಲೇಶಪುರದಲ್ಲಿ ಮೊದಲು ಚಾಲನೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಅವರು ತಿಳಿಸಿದ್ರು.

ಇದೇ ವೇಳೆ ಬಿಳಿಕೆರೆ-ಬೇಲೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರವಾಗಿ ಆರಂಭವಾಗಲಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗಿದೆ. ಭೂಸ್ವಾಧೀನ ಕುರಿತು ಅಧಿಕಾರಿಗಳ ಸಭೆ ನಡೆಸಲಾಗಿದೆ. ಎಲ್ಲಾ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಅಂತ ಹೇಳಿದ್ರು.

ಬ್ರಾಹ್ಮಣ ಅಧಿಕಾರಿ ಕಾಲ್ಗುಣದಿಂದಾಗಿ ಈ ಬಾರಿ ಮಳೆ ಬೆಳೆ ಚೆನ್ನಾಗಿದೆ. ಗೊರೂರು ಜಲಾಶಯ ಬಳಿ ಬೃಂದಾವನ ಮಾದರಿಯಲ್ಲೇ ಪ್ರವಾಸಕೇಂದ್ರ ಮಾಡಲು 98 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಅಂತ ಅವರು ತಿಳಿಸಿದ್ರು.

HD REVANNA

ಕಳೆದ ನಾಲ್ಕು ವರ್ಷಗಳಿಂದ ತುಂಬದ ಹೇಮಾವತಿ ಇದೀಗ ಭರ್ತಿಯಾಗಿದೆ. ಅಧಿಕಾರಿಗಳಿಗೆ ನೀರಿನ ಸದ್ಬಳಕೆಗೆ ಸೂಚನೆ ನೀಡಲಾಗಿದೆ. ಕಾಮಸಮುದ್ರ, ಕಾಚೇನಹಳ್ಳಿ, ಹುಚ್ಚನಕೊಪ್ಪಲು, ಬಾಗೂರು ನವಿಲೆ ಸೇರಿದಂತೆ ಎಲ್ಲ ಕಡೆ ಕೃಷಿ ಆರಂಭಿಸಲು ಸೂಚಿಸಿಲಾಗಿದೆ. ದೈವಾನುಗ್ರಹ ಕುಮಾರಸ್ವಾಮಿ ಸರ್ಕಾರದಲ್ಲಿ ನೀರು ತುಂಬಿದ್ದು, ಸಂತಸ ತಂದಿದೆ. ಭತ್ತ ಬೆಳೆಯುವವರಿಗೆ ನೀರು ಲಭ್ಯವಾಗಲಿದೆ. ಮಳೆಯಿಂದಾಗಿರುವ ನಷ್ಟಕ್ಕೆ ಕ್ರಮಕೈಗೊಳ್ಳಲಾಗುವುದು ಅಂತ ಅವರು ಭರವಸೆ ನೀಡಿದರು.

ಕಳೆದ ಜನವರಿ 20 ರಿಂದ ಆರಂಭವಾಗಿದ್ದ 74 ಕೋಟಿ ರೂ. ವೆಚ್ಚ, 12.38 ಕಿಮೀ ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿ ಮುಗಿದಿದೆ. ಸೈಡ್ ವಾಲ್, ಸೂಚನಾ ಫಲಕ ಅಳವಡಿಕೆ ಸೇರಿದಂತೆ ಕೆಲವು ಸಣ್ಣಪುಟ್ಟ ಕೆಲಸ ಹೊರತುಪಡಿಸಿದರೆ ಸಿಮೆಂಟ್ ಹಾಕುವ ಕೆಲಸ ಮುಗಿದಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಿರುವ ಒಟ್ಟು 26 ಕಿ.ಮೀ ಉದ್ದದ ಶಿರಾಡಿಘಾಟ್ ಕಾಂಕ್ರೀಟ್ ರಸ್ತೆ ಸುಮಾರು 30 ವರ್ಷ ಬಾಳಿಕೆ ಬರಲಿದೆ ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *