Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಶೆಟ್ಪಾಲ್;‌ ಈ ಊರಲ್ಲಿ ಹಾವುಗಳೊಂದಿಗೆ ಜನರ ವಾಸ!

Public TV
Last updated: July 29, 2025 7:15 am
Public TV
Share
3 Min Read
Snake 5
SHARE

ಶ್ರಾವಣ ಮಾಸ ಬಂತೆಂದರೆ ಸಾಲುಸಾಲು ಹಬ್ಬಗಳು ಶುರುವಾಗುತ್ತದೆ. ಶ್ರಾವಣದಲ್ಲಿ ಬರುವ ಮೊದಲ ಹಬ್ಬವೇ ನಾಗರ ಪಂಚಮಿ. ನಾಗರ ಪಂಚಮಿ ದಿನ ನಾಗನಿಗೆ ಹಾಲೆರೆದು, ವಿವಿಧ ಸಿಹಿ ತಿನಿಸುಗಳನ್ನು ನೈವೇದ್ಯ ಮಾಡಿ ಪೂಜಿಸಲಾಗುತ್ತದೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಜನರ ಮನೆಯೇ ಹಾವುಗಳ ವಾಸಸ್ಥಾನವಾಗಿದೆ. ಅರೇ ಇದೇನಿದು ಹಾವುಗಳನ್ನು ನೋಡಿದ್ರೆನೇ ಭಯವಾಗುತ್ತೆ. ಅಂಥದ್ರಲ್ಲಿ ಮನುಷ್ಯರು ಹಾವುಗಳೊಂದಿಗೆ ವಾಸಿಸಲು ಸಾಧ್ಯನಾ ಎಂದು ಯೋಚಿಸುತ್ತಿದ್ದೀರಾ? ಹೌದು, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಶೆಟ್ಪಾಲ್‌ ಗ್ರಾಮದಲ್ಲಿ ಜನರು ಹಾವುಗಳೊಂದಿಗೆ ವಾಸಿಸುವುದಲ್ಲದೇ, ಅವುಗಳನ್ನು ಮನೆಯ ಸದಸ್ಯರಂತೆ ಕಾಣುತ್ತಾರೆ. ಹಾಗಿದ್ರೆ ಇಲ್ಲಿನ ಜನರು ಹಾವುಗಳೊಂದಿಗೆ ವಾಸಿಸುವುದೇಕೆ ಎಂಬ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ.

ಹಾವಿಗೆ ನಮ್ಮ ದೇಶದಲ್ಲಿ ಮಹೋನ್ನತ ಸ್ಥಾನವಿದೆ. ನಾಗರಹಾವನ್ನು ದೇವರ ಸ್ಥಾನದಲ್ಲಿ ನಾವು ನೋಡುತ್ತೇವೆ. ನಾಗರಾಜನಿಗೆ ಹಾಲೆರೆದು ಭಕ್ತಿಯಿಂದ ನಮಿಸುವ ಸಂಪ್ರದಾಯ ಇರುವ ದೇಶ ನಮ್ಮದು. ಅದೇ ಕಾರಣಕ್ಕೆ ನಮ್ಮಲ್ಲಿ ನಾಗರಪಂಚಮಿಗೆ ಬಹಳ ಮಹತ್ವವಿದೆ. ಹಾವುಗಳನ್ನು ದೇವರೆಂದು ಪೂಜಿಸುವ ಊರುಗಳ ಪೈಕಿ ಶೆಟ್ಪಾಲ್‌ ಕೂಡ ಒಂದು. ಇಲ್ಲಿ ನಾಗರ ಪಂಚಮಿಗೆ ಮಾತ್ರವಲ್ಲದೇ ಪ್ರತಿದಿನ ಹಾವುಗಳನ್ನು ಪೂಜಿಸಲಾಗುತ್ತದೆ. ಅಲ್ಲದೇ ಹಾವುಗಳೊಂದಿಗಿನ ಜನರ ನಂಟು ಕೂಡ ಮಹತ್ವವಾದದ್ದು.

SNAKE
ಸಾಂದರ್ಭಿಕ ಚಿತ್ರ

ಹಾವುಗಳೊಂದಿಗೆ ಜನರ ನಂಟು:
ಶೆಟ್ಪಾಲ್ ಗ್ರಾಮವನ್ನು ʼಭಾರತದ ಹಾವಿನ ಗ್ರಾಮʼ ಎಂದು ಕರೆಯಲಾಗುತ್ತದೆ. ಈ ಗ್ರಾಮದ ಮನೆಗಳಲ್ಲಿ ಹಾವುಗಳು ಸರಾಗವಾಗಿ ಓಡಾಡಿಕೊಂಡಿರುತ್ತವೆ.ಈ ಹಳ್ಳಿಯಲ್ಲಿ ಹಾವುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಉಪಚರಿಸಲಾಗುತ್ತದೆ. ಅಲ್ಲಿನ ಸ್ಥಳೀಯರ ಪ್ರಕಾರ, ಹಾವುಗಳಿಗೆ ಸಹ ಮನೆಯಲ್ಲಿ ವಿಶೇಷವಾದ ಜಾಗವನ್ನು ನೀಡಲಾಗುತ್ತದೆ. ಅವುಗಳು ಮನೆಯಲ್ಲಿ ಎಲ್ಲಿ ಬೇಕಾದರೂ ವಾಸಿಸುವ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ಇಲ್ಲಿ ಹಾವುಗಳಿಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ಹಳ್ಳಿಯ ಜನರು ಈ ಹಾವುಗಳಿಗೆ ಮುಕ್ತವಾಗಿ ತಿರುಗಾಡಲು ಅವಕಾಶ ಮಾಡಿಕೊಡುತ್ತಾರೆ.

ಹಾವುಗಳಿಗೆಂದೇ ವಿಶೇಷ ಮಂದಿರ:
ಹಾವು ಮತ್ತು ಆಧ್ಯಾತ್ಮ ಒಟ್ಟಿಗೆ ಸಾಗುತ್ತದೆ ಎಂಬುದು ಈ ಗ್ರಾಮದ ಜನರ ನಂಬಿಕೆ. ಅವರು ಹಾವುಗಳನ್ನು ಪೂಜಿಸುವುದು ಮಾತ್ರವಲ್ಲ, ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇಲ್ಲಿ ಪ್ರತಿ ಮನೆಯಲ್ಲೂ ಹಾವುಗಳಿಗೆ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿದೆ. ಹಾವುಗಳಿಗೆ ಮುಡಿಪಾದ ಆಲಯವು ಕೂಡ ಇದೆ. ಈ ವಿಶೇಷ ಸ್ಥಳವನ್ನು ‘ಮಂದಿರ’ ಎಂದು ಕರೆಯಲಾಗುತ್ತದೆ. ಜನರು ಹೊಸ ಮನೆಯನ್ನು ಕಟ್ಟುವಾಗ ಹಾವಿಗೆ ವಿಶೇಷ ಸ್ಥಳವನ್ನು ನಿರ್ಮಿಸಲು ಮರೆಯುವುದಿಲ್ಲ.‌

ಈ ಊರಿನಲ್ಲಿ ಪ್ರತಿಯೊಬ್ಬರ ಹೃದಯದಲ್ಲೂ ನಾಗರಹಾವಿನ ಬಗ್ಗೆ ಶ್ರದ್ಧೆಯಿದೆ, ಭಕ್ತಿ ಇದೆ. ಹೀಗಾಗಿ, ಪ್ರತಿಯೊಬ್ಬರು, ಪ್ರತಿ ಮನೆಯಲ್ಲೂ ಮನೆಗೆ ಬರುವ ಹಾವಿಗೆ ಪೂಜೆ ಸಲ್ಲಿಸುತ್ತಾರೆ. ತಂಪನ್ನರಸಿ ಹಾವುಗಳು ಬಂದರೆ ಅವುಗಳಿಗೆ ಹಾಯಾಗಿ ಮಲಗಲು ಸಹಾಯವಾಗಲಿ ಎಂದು ಮಂದಿರಗಳನ್ನು ನಿರ್ಮಿಸಲಾಗುತ್ತದೆ.

ಗ್ರಾಮಸ್ಥರು ನಾಗರ ಹಾವುಗಳನ್ನು ಶಿವನ ದ್ಯೋತಕವೆಂದು ಪರಿಗಣಿಸುತ್ತಾರೆ. ಅವುಗಳನ್ನು ಬಹಳ ಘನತೆ ಮತ್ತು ಗೌರವದಿಂದ ಪರಿಗಣಿಸಲಾಗುತ್ತದೆ. ಹಾವುಗಳಿಗಾಗಿ ಈ ಗ್ರಾಮದಲ್ಲಿ ವಿಶೇಷ ಪೂಜೆ ಮತ್ತು ಆಚರಣೆಗಳನ್ನು ನಡೆಸಲಾಗುತ್ತದೆ. ಈ ಗ್ರಾಮದಲ್ಲಿ ಹಾವುಗಳ ಸಂಖ್ಯೆ ಮನುಷ್ಯರ ಜನಸಂಖ್ಯೆಯನ್ನು ಮೀರಿದೆ. ಗ್ರಾಮಸ್ಥರೇ ಹಾವುಗಳಿಗೆ ಆಹಾರ ನೀಡುತ್ತಾರೆ ಎಂಬುದು ಇಲ್ಲಿನ ವಿಶೇಷ.

ಈ ಗ್ರಾಮದ ಮಕ್ಕಳಿಗೆ ಹಾವಿನ ಭಯವೇ ಇಲ್ಲ. ಏಕೆಂದರೆ ಜನಸಾಮಾನ್ಯರಲ್ಲಿ ಹಾವುಗಳು ಬೆಳೆಯುತ್ತಿವೆ. ಮಕ್ಕಳು ಕೂಡ ಹಾವು ಕೊರಳಲ್ಲಿ ಹಾಕಿಕೊಂಡು ಓಡಾಡುತ್ತಾರೆ. ಈ ಊರಿಗೆ ಹೋದರೆ ಹಾವು ಕಚ್ಚುತ್ತದೆ ಎಂಬ ಭಯ ಹಲವರದ್ದು. ಆದರೆ ಅಂತಹ ಸಂಗತಿಗಳು ಇಲ್ಲಿ ನಡೆಯುವುದಿಲ್ಲ. ಇದುವರೆಗೂ ಈ ಊರಲ್ಲಿ ಒಂದೇ ಒಂದು ಹಾವು ಕಚ್ಚಿದ ಪ್ರಕರಣ ವರದಿಯಾಗಿಲ್ಲ.ಇಲ್ಲಿ ಕೇವಲ ನಾಗರ ಹಾವು ಮಾತ್ರವಲ್ಲದೇ ನಾನಾರೀತಿಯ ಹಾವುಗಳು ವಾಸಿಸುತ್ತವೆ.

ಈ ಊರಿನಲ್ಲಿ ಸುಮಾರು 2,600ಕ್ಕೂ ಅಧಿಕ ಗ್ರಾಮಸ್ಥರಿದ್ದಾರೆ. ಆದರೂ ಹಾವುಗಳ ಸಂಚಾರಕ್ಕೆ ಇಲ್ಲಿ ಎಂದೂ ಅಡ್ಡಿ ಎದುರಾಗಿದ್ದೇ ಇಲ್ಲ. ಜನರು ಯಾರೂ ಹಾವುಗಳಿಗೆ ತೊಂದರೆ ಮಾಡಿದ್ದೇ ಇಲ್ಲ. ವಿಶೇಷ ಅಂದರೆ ಹಾವುಗಳು ಮನೆಗೆ ಬಂದರೆ ಇಲ್ಲಿನ ಜನ ಓಡಿ ಹೋಗುವುದಿಲ್ಲ. ಬದಲಾಗಿ ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಹಾವುಗಳಾಗಲಿ, ಜನರಾಗಲಿ ಇಲ್ಲಿ ಭಯವಿಲ್ಲದೆ ಜೀವನ ನಡೆಸುತ್ತಿದ್ದಾರೆ. ಅದೂ ಅಲ್ಲದೆ, ಇದುವರೆಗೆ ಇಲ್ಲಿ ಹಾವು ಕಚ್ಚಿ ಅಥವಾ ಹಾವಿನಿಂದ ಏನಾದರೂ ತೊಂದರೆ ಆದ ಒಂದೇ ಒಂದು ಉದಾಹರಣೆ ಇಲ್ಲ ಎನ್ನುತ್ತಾರೆ ಜನ. ಇದನ್ನು ಕೇಳುವಾಗಲೇ ಮೈ ರೋಮಾಂಚನವಾಗುತ್ತದೆ. ಈ ಊರಿನಲ್ಲಿ ಸಿದ್ದೇಶ್ವರ ದೇಗುಲ ಇದೆ. ಒಂದೊಮ್ಮೆ ಬೇರೆ ಊರಿನಲ್ಲಿ ಯಾರಿಗಾದರೂ ಹಾವು ಕಚ್ಚಿದರೆ ಅವರನ್ನು ಇಲ್ಲಿಗೆ ಕರೆತಂದರೆ ರೋಗಿ ತಕ್ಷಣ ಗುಣಮುಖರಾಗುತ್ತಾರೆ ಎಂಬ ನಂಬಿಕೆಯೂ ಇಲ್ಲಿನ ಜನರಿಗಿದೆ.

ಈ ಗ್ರಾಮದಲ್ಲಿ ಈ ರೀತಿಯ ಸಂಪ್ರದಾಯ ಯಾವಾಗ ಶುರುವಾಯಿತು ಎಂದು ಯಾರಿಗೂ ತಿಳಿದಿಲ್ಲ. ಹಲವಾರು ವರ್ಷಗಳಿಂದ ಜನ ಈ ಊರಲ್ಲಿ ಹಾವುಗಳೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಇಲ್ಲಿನ ಜನರು ಹಾವುಗಳನ್ನು ಮನೆ ಸದಸ್ಯರಂತೆ ನೋಡುತ್ತಾರೆ ಎಂಬುದು ಇಂದಿಗೂ ನಿಗೂಢವಾಗಿದೆ.

ಶೆಟ್ಪಾಲ್‌ ಎಲ್ಲಿದೆ?
ಶೆಟ್ಪಾಲ್ ಪುಣೆಯಿಂದ 200 ಕಿಮೀ ಮತ್ತು ಮುಂಬೈನಿಂದ 350 ಕಿಮೀ ದೂರದಲ್ಲಿದೆ. ಮೊಡ್ನಿಂಬ್ ರೈಲು ನಿಲ್ದಾಣ ಹತ್ತಿರದ ನಿಲ್ದಾಣವಾಗಿದೆ.

TAGGED:maharshtranagara panchamiShetphalsnakeSollapura
Share This Article
Facebook Whatsapp Whatsapp Telegram

Latest Cinema News

yajamana ramachari
ಯಜಮಾನ-ರಾಮಾಚಾರಿ; ವಾರಪೂರ್ತಿ ಒಂದು ಗಂಟೆಯ ಮಹಾಸಂಚಿಕೆ
Cinema Latest Top Stories TV Shows
prajwal devaraj 2
ಸಿನಿಮಾ ನಿರ್ಮಾಣದತ್ತ ಹೆಜ್ಜೆ ಇಟ್ಟ ಪ್ರಜ್ವಲ್ ದೇವರಾಜ್
Cinema Latest Sandalwood
Samarjit Lankesh
SIIMA Award | ನಟ ಸಮರ್ಜಿತ್‌ಗೆ ಡಬಲ್ ಪ್ರಶಸ್ತಿಗಳ ಧಮಾಕ
Cinema Latest Sandalwood Top Stories
Navya Nair
ಮಲ್ಲಿಗೆ ಮುಡಿದ ನಟಿ ನವ್ಯಾಗೆ ಆಸ್ಟ್ರೇಲಿಯಾದಲ್ಲಿ 1 ಲಕ್ಷ ದಂಡ
Cinema Latest South cinema Top Stories
Pushpa 3
`ಪುಷ್ಪ 3 ಬರೋದು ಪಕ್ಕಾ’..ಅಲ್ಲು ಅರ್ಜುನ್‌ ಗುಡ್ ನ್ಯೂಸ್ ಕೊಟ್ಟಿದ್ದೆಲ್ಲಿ?
Cinema Latest South cinema Top Stories

You Might Also Like

Siddaramaiah 1 7
Bengaluru City

ಮದ್ದೂರು ಗಲಾಟೆ | ನನ್ನ ಪ್ರಕಾರ ಪೊಲೀಸರು ತಪ್ಪು ಮಾಡಿಲ್ಲ, ಬಿಜೆಪಿ-ಜೆಡಿಎಸ್ ಪ್ರಚೋದನೆ: ಸಿದ್ದರಾಮಯ್ಯ

Public TV
By Public TV
35 minutes ago
h.d.kumaraswamy Maddur Stone Pelting
Latest

ಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ

Public TV
By Public TV
42 minutes ago
N Ravikumar
Bengaluru City

ಮದ್ದೂರು ಗಲಭೆಕೋರರನ್ನು ಬಂಧಿಸಲಿ, ಸ್ವಯಂಪ್ರೇರಿತ ಬಂದ್‌ಗೆ ನಮ್ಮ ಬೆಂಬಲ: ಎನ್.ರವಿಕುಮಾರ್

Public TV
By Public TV
51 minutes ago
Davanagere ARREST
Crime

ದಾವಣಗೆರೆ | ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ – ಮೂವರು ಅಂತರರಾಜ್ಯ ಕಳ್ಳರು ಅರೆಸ್ಟ್

Public TV
By Public TV
1 hour ago
Siddaramaiah 3
Bengaluru City

ದಸರಾ ಉದ್ಘಾಟನೆ ವಿಚಾರ ಕೋರ್ಟ್‌ನಲ್ಲೇ ತೀರ್ಮಾನ ಆಗಲಿ: ಸಿಎಂ ತಿರುಗೇಟು

Public TV
By Public TV
1 hour ago
submarine cable 2
Latest

ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್‌ ಕೇಬಲ್‌ ತುಂಡು – ಭಾರತ ಸೇರಿ ಹಲವು ದೇಶಗಳಲ್ಲಿ ಇಂಟರ್‌ನೆಟ್‌ ವ್ಯತ್ಯಯ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?