ಉಡುಪಿ: ನಗರದಲ್ಲಿ ಶಾಹಿನ್ಬಾಗ್ ಮಾದರಿ ಸತ್ಯಾಗ್ರಹಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳ ನಡೆಯುತ್ತಿದ್ದು, ಉಡುಪಿ ಮಸೀದಿ ರಸ್ತೆಯಲ್ಲಿ ನಿರಂತರ ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಗಿದೆ.
ಅನಿರ್ದಿಷ್ಟಾವಧಿ ಅಹೋರಾತ್ರಿ ಸತ್ಯಾಗ್ರಹ ನಡೆಯುವ ಸ್ಥಳಕ್ಕೆ ಶಾಹಿನ್ಬಾಗ್ ಎಂದು ಹೆಸರಿಡಲಾಗಿದೆ. ಶಾಹಿನ್ಬಾಗ್ ಸಂಯೋಜನಾ ಸಮಿತಿ ಸತ್ಯಾಗ್ರಹವನ್ನು ಆಯೋಜನೆ ಮಾಡಿದೆ. ಸಂವಿಧಾನ ಸಂರಕ್ಷಕಾ ಸಮಿತಿ ಬೆಂಬಲ ನೀಡಿದೆ. ಇಂದು ಸಂಜೆ 5.30 ಸುಮಾರಿಗೆ ಸತ್ಯಾಗ್ರಹಕ್ಕೆ ಚಾಲನೆ ಸಿಗಲಿದೆ.
ಮಸೀದಿ ರಸ್ತೆಯ ಖಾಸಗಿ ಜಮೀನಿನಲ್ಲಿ ಸತ್ಯಾಗ್ರಹಕ್ಕೆ ನಿರ್ಧಾರ ಮಾಡಲಾಗಿದ್ದು, ತಯಾರಿ ನಡೆಯುತ್ತಿದೆ. ಸಂವಿಧಾನ ಹಾಗು ಪೌರತ್ವ ರಕ್ಷಣೆ ಉದ್ದೇಶ ಇಟ್ಟುಕೊಂಡು ಸತ್ಯಾಗ್ರಹಕ್ಕೆ ಸಿದ್ಧತೆ ನಡೆಯುತ್ತಿದ್ದು, ಮೂರು ಪಾಳಿಯಲ್ಲಿ ಹಲವಾರು ಸಮಾನ ಮನಸ್ಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.