ಹಣ ಕೊಡಲು ಕರೆಸಿ, ಲೈಂಗಿಕ ಸಂಪರ್ಕಕ್ಕೆ ಒತ್ತಾಯ – ಬೇಡ ಅಂದಿದ್ದೇ ತಪ್ಪಾಯ್ತು

Public TV
2 Min Read
RR POLICE STATION

ಬೆಂಗಳೂರು: ವ್ಯಕ್ತಿಯೊಬ್ಬ ಮಹಿಳೆಯನ್ನು ಚಾಕುವಿನಿಂದ ಇರಿದು ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ರಾಘವೇಂದ್ರ ಶಾಸ್ತ್ರಿ ಅಲಿಯಾಸ್ ರಘು ಚಾಕುವಿನಿಂದ ಇರಿದು ಪೊಲೀಸರಿಗೆ ಶರಣಾದ ಆರೋಪಿ. ಈ ಘಟನೆ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನೈಸ್ ರಸ್ತೆಯಯ ನಿವಾಸಿಯೊಬ್ಬರಿಗೆ ಚಾಕುವಿನಿಂದ ಚುಚ್ಚಿದ್ದು, ಈಗ ಆಕೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಆರೋಪಿ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಲೈಂಗಿಕ ಸಂಪರ್ಕ ಬೇಡ ಅಂದಿದ್ದಕ್ಕೆ ಚಾಕು ಖರೀದಿಸಿ ಕೊಲೆ ಮಾಡಲು ಚುಚ್ಚಿದ್ದನು ಎಂದು ತಿಳಿದು ಬಂದಿದೆ.

polive

ನಡೆದಿದ್ದೇನು?
ಈ ಹಿಂದೆ ಆರೋಪಿ ವಿವಾಹಿತ ಮಹಿಳೆಯನ್ನ ಪ್ರೀತಿಸಿ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದನು. ನಂತರ ಕೌಟುಂಬಿಕ ಕಾರಣದಿಂದ ಮಹಿಳೆ ದೂರವಾಗಿದ್ದರು. ಈ ನಡುವೆ ಮತ್ತೆ ಇಬ್ಬರು ಹಣಕಾಸಿನ ವಿಚಾರವಾಗಿ ಸಂಪರ್ಕ ಹೊಂದಿದ್ದರು. ನಂತರ ಅಂದಿನಿಂದಲೂ ಮಹಿಳೆ ಮತ್ತು ರಘು ಫೋನಿನಲ್ಲಿ ಸಂಪರ್ಕದಲ್ಲಿದ್ದರು.

ರಘು ಹಣ ನೀಡುತ್ತೇನೆ ಎಂದು ಬನಶಂಕರಿಗೆ ಕರೆದಿದ್ದರು. ಬಳಿಕ ಮಹಿಳೆ ಅದಕ್ಕೆ ನಿರಾಕರಿಸಿ ಆರ್ ಆರ್ ನಗರದ ಬಳಿ ಇರುವ ಆರ್ಮುಗಂ ದೇವಸ್ಥಾನಕ್ಕೆ ಕರಸಿಕೊಂಡಿದ್ದರು. ಈ ಮೊದಲೇ ರಘು ಇಟ್ಟಮಡುವಿನಲ್ಲಿ ಚಾಕು ಖರೀದಿಸಿ ಕದಿರೇನಹಳ್ಳಿಯ ಕರ್ನಾಟಕ ಬಾರಿನಲ್ಲಿ ಮದ್ಯ ಸೇವಿಸಿದ್ದನು. ನಂತರ ನೈಸ್ ರಸ್ತೆಯ ಬ್ರಿಡ್ಜ್ ಬಳಿ ಮಹಿಳೆ ಬಂದಿದ್ದರು. ಆದರೆ ಈ ವೇಳೆ ರಘು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದನು. ಆದರೆ ಮಹಿಳೆ ಇದಕ್ಕೆ ನಿರಾಕರಿಸಿದ್ದಾರೆ.

POLICE 3

ಮೊದಲೇ ಕೊಲ್ಲಲೇಬೇಕೆಂದು ನಿರ್ಧರಿಸಿದ್ದ ರಘು ದೈಹಿಕ ಸಂಪರ್ಕಕ್ಕೆ ನಿರಾಕರಿಸಿದವಳ ಎದೆ ಮತ್ತು ಹೊಟ್ಟೆಗೆ 10ಕ್ಕೂ ಹೆಚ್ಚು ಬಾರಿ ಚುಚ್ಚಿದ್ದಾನೆ. ನಂತರ ಚಾಕುವನ್ನು ಅಲ್ಲಿಯೇ ಬಿಟ್ಟು ಪೊಲೀಸ್ ಠಾಣೆಗೆ ಹೋಗಿ ಸರಂಡರ್ ಆಗಿದ್ದಾನೆ. ಸದ್ಯಕ್ಕೆ ಗಾಯಾಳು ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದಾರೆ.

ಈ ಕುರಿತು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರ್‍ಆರ್ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಬಂಧಿತ ರಘುವಿಗೆ ಈಗಾಗಲೇ ಮದುವೆಯಾಗಿದ್ದು, ಆತನಿಗೆ ಎರಡು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *