ಓಖಿ ವಕ್ರದೃಷ್ಟಿಗೆ ಕೇರಳ, ತಮಿಳ್ನಾಡು ತತ್ತರ- ಬೆಂಗ್ಳೂರು, ಕರಾವಳಿಯಲ್ಲಿ ಇಂದೂ ಮಳೆ ಸಾಧ್ಯತೆ

Public TV
1 Min Read
PTI11 30 2017 000103B

ಚೆನ್ನೈ: ಸುಮಾರು 12 ಮಂದಿಯನ್ನು ಬಲಿ ಪಡೆದಿರುವ ಓಖಿ ಚಂಡಮಾರುತ ಇನ್ನೂ ತಣ್ಣಗಾಗಿಲ್ಲ. ಲಕ್ಷದ್ವೀಪ, ಕೇರಳ, ತಮಿಳುನಾಡಿನಲ್ಲಿ ಅನಾಹುತ ಸೃಷ್ಟಿಸಿರುವ ಚಂಡಮಾರುತ ಇಂದು ಮತ್ತಷ್ಟು ತೀವ್ರತೆ ಪಡೆದುಕೊಳ್ಳಲಿದೆ. ಮುಂದಿನ 24 ಗಂಟೆಗಳಲ್ಲಿ ಬಿರುಗಾಳಿ ಸಹಿತ ಇನ್ನಷ್ಟು ಅಬ್ಬರ ಮಾಡಲಿದೆ. 48 ಗಂಟೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೇರಳ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿರುವ ಶಾಲಾ-ಕಾಲೇಜುಗಳಿಗೆ ಈಗಾಗಲೇ ರಜೆ ಘೋಷಿಸಲಾಗಿದೆ. ತಿರುವನಂತಪುರಂ ತೀರದಲ್ಲಿ ಇನ್ನೂ 80 ಮಂದಿ ಮೀನುಗಾರರು ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಚೆನ್ನೈನಲ್ಲಿಯೂ ಮಳೆಯಾಗ್ತಿದೆ. ಕೇರಳ ಮತ್ತು ತಮಿಳುನಾಡಿನಲ್ಲಿರುವ ನದಿಗಳು ಅಪಾಯದ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದೆ.

Cyclone Ockhi 380 AP

ಓಖಿ ಚಂಡಮಾರುತ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ತೀರ ಪ್ರದೇಶಗಳಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ. ಗಂಟೆಗೆ 45 ರಿಂದ 65 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

ಇತ್ತ ಬೆಂಗಳೂರಲ್ಲೂ ಇಂದು ಮತ್ತು ನಾಳೆ ಮಳೆ ಮುಂದುವರಿಯಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಳಿಗಾಳಿ ಬೀಸುತ್ತಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ.

ಓಖಿ ಚಂಡಮಾರುತಕ್ಕೆ ಲಕ್ಷದ್ವೀಪದಲ್ಲಿರುವ ಕಲ್ಪೇನಿ ಮತ್ತು ಮಿನಿಕಾಯ್ ದ್ವೀಪಗಳು ಥಂಡಾ ಹೊಡೆದಿವೆ. ಭೀಮಗಾತ್ರದ ಅಲೆಗಳು ತೀರ ಪ್ರದೇಶದಲ್ಲಿರುವ ಮನೆ, ರೆಸಾರ್ಟ್‍ಗಳಿಗೆ ನುಗ್ಗಿದೆ. ಸಾವು ನೋವು ಸಂಭವಿಸಿಲ್ಲವಾದರೂ ಹಲವಾರು ಮನೆಗಳು ಸಮುದ್ರ ಪಾಲಾಗಿವೆ ಎಂದು ವರದಿಯಾಗಿದೆ.

https://www.youtube.com/watch?v=nI9KBpvAA3k

Cyclone Ockhi PTI

cyc 759 1

643059 cyclone ockhi pti

618xNx645690 thump.jpg.pagespeed.ic . d8A5sDk w

01ockhi3

0.51060100 1512102218 cyclone european commission

Share This Article
Leave a Comment

Leave a Reply

Your email address will not be published. Required fields are marked *