ಅಭಿಮಾನಿಗಳ ಹಾರೈಕೆಯಿಂದ ಚೇತರಿಕೆ ಕಂಡಿದ್ದೀನಿ, ಅವರ ಪ್ರೀತಿಗೆ ನಾನು ಆಭಾರಿ: ಜಯಂತಿ

Public TV
1 Min Read
JAYANTHI DISCHARGE

ಬೆಂಗಳೂರು: ಹಿರಿಯ ನಟಿ ಜಯಂತಿ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.

ವಿಕ್ರಂ ಆಸ್ಪತ್ರೆಯಲ್ಲಿ ನಟಿ ಜಯಂತಿ ಆರೋಗ್ಯ ಕುರಿತಾಗಿ ವಿಲ್ ಚೇರ್ ನಲ್ಲಿ ಬಂದು ಮಾತನಾಡಿ, ನಾನು ಬರುವಾಗ ಹೇಗಿದ್ದೆ ಈಗಲೂ ಚೆನ್ನಾಗಿ ಇದ್ದೇನೆ. ವೈದ್ಯರು ನನಗೆ ಮರುಜನ್ಮ ಕೊಟ್ಟಿದ್ದಾರೆ. ಮಗು ತರ ನನ್ನನ್ನು ನೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅಭಿಮಾನಿಗಳ ಪ್ರೀತಿಗೆ ನಾನು ಆಭಾರಿ ಎಂದು ಭಾವುಕರಾಗಿ ಮಾತನಾಡಿದ್ದಾರೆ.

JAYANTHI DISCHARGE 2

ಡಾ. ಸತೀಶ್ ಮಾತನಾಡಿ, 10 ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಅಸ್ವಸ್ಥರಾಗಿ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಇದ್ದರು.  ಜಯಂತಿ ಅವರು ಆರೋಗ್ಯ ಚೇತರಿಕೆಯಾಗಿದ್ದು,  ಇಂದು ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಹೇಳಿದ್ದಾರೆ.

ಅಮ್ಮ ಆರಾಮವಾಗಿದ್ದಾರೆ. ಫಿಸಿಯೋಥೆರಪಿ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಡಯೆಟ್ ಚಾರ್ಟ್ ಹೇಳಿದ್ದಾರೆ. ಅಮ್ಮನಿಗೆ ಸ್ವಲ್ಪ ಇದೆಲ್ಲ ಕಷ್ಟವಾಗಬಹುದು. ಆದರೆ ಹತ್ತು ದಿನ ಬಳಿಕ ಮತ್ತೆ ರೂಟೀನ್ ಚಕಪ್ ಇದೆ. ಆಗ ಆಸ್ಪತ್ರೆಗೆ ಬರಬೇಕು. ಅಮ್ಮನಿಗೆ ರೂಮರ್ಸ್ ಬಗ್ಗೆ ಏನು ಹೇಳಿರಲಿಲ್ಲ. ಆದರೆ ಇವತ್ತು ಬೆಳಗ್ಗೆ ಹೇಳಿದೆ. ಆಗ ಅಮ್ಮ ಮೊದಲು ಸ್ವಲ್ಪ ಬೇಸರ ಮಾಡಿಕೊಂಡಿದ್ದರು. ನಂತರ ಬಿಡಪ್ಪ ಅಭಿಮಾನಿಗಳ ಹಾರೈಕೆ ಇರುವುದಕ್ಕೆ ಚೇತರಿಕೆ ಕಂಡಿದ್ದೀನಿ ಎಂದು ಹೇಳಿದ್ರು ಅಂತಾ ಮಗ ಕೃಷ್ಣ ಕುಮಾರ್ ಹೇಳಿದ್ದಾರೆ.

JAYANTHI DISCHARGE 1

ಮಾರ್ಚ್ 26 ಸೋಮವಾರ ಸ್ಯಾಂಡಲ್‍ವುಡ್ ಅಭಿನಯ ಶಾರದೆ ಜಯಂತಿ ಅವರು ಅಸ್ವಸ್ಥರಾಗಿದ್ದು, ಸುಮಾರು ಬೆಳಗ್ಗೆ 11 ಗಂಟೆಗೆ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *