ತುಮಕೂರು: ನನಗೂ ಮೀಟೂ ಅನುಭವಾಗಿದೆ ನಾನು ಅದನ್ನು ಹೇಳಿಕೊಳ್ಳುತ್ತೇನೆ. ಆದರೆ ನನಗೆ ನ್ಯಾಯ ಸಿಗಲಿ ಎಂದಲ್ಲ. ನನಗಾದ ಕಷ್ಟ ನೋಡಿ ಇನ್ನೊಬ್ಬರು ಎಚ್ಚೆತ್ತುಕೊಳ್ಳಲಿ ಅಂತ ಎಂದು ಹಿರಿಯ ಕಲಾವಿದೆ ಬಿ.ಜಯಶ್ರೀ ಹೇಳಿಕೊಂಡಿದ್ದಾರೆ.
ತುಮಕೂರು ನಗರದ ರಾಜರಾಜೇಶ್ವರಿ ನೃತ್ಯ ಕಲಾಮಂದಿರದಲ್ಲಿ ಹಿರಿಯ ರಂಗಕರ್ಮಿ ರಾಮನ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೂ ಆ ಅನುಭವವಾಗಿದೆ. ಅದು ನನಗೆ ಗೊತ್ತು, ದೌರ್ಜನ್ಯ ಮಾಡಿದವರಿಗೆ ಗೊತ್ತು. ಅಷ್ಟಕ್ಕೆ ಅದನ್ನು ಮುಗಿಸಬೇಕು ಪುನ: ಕೆದಕಬಾರದು. ನನಗಾದ ಅನ್ಯಾಯದ ಬಗ್ಗೆ ಮಾತನಾಡಿದ್ದೇನೆ. ನನಗೆ ನ್ಯಾಯ ಸಿಗಲಿ ಎಂದು ಹೇಳಿಕೊಂಡಿಲ್ಲ. ನನಗೆ ಬಂದ ಕಷ್ಟ ಬೇರೊಬ್ಬರಿಗೆ ಬಾರದಿರಲಿ ಎಂದು ಹೇಳಿಕೊಂಡಿದ್ದೆ ಎಂದು ಬಿ.ಜಯಶ್ರೀ ಪ್ರತಿಕ್ರಿಯಿಸಿದ್ದಾರೆ.
ಮೀಟೂ ಆರೋಪದ ಬಗ್ಗೆ ಫೇಸ್ ಬುಕ್ ನಲ್ಲಿ ಹೇಳಿಕೊಳ್ಳುವುದು ತಪ್ಪು ಎಂದು ನಾನು ದೇವರಾಣೆ ಹೇಳಲ್ಲ. ಆದರೆ ಅದಕ್ಕೂ ಒಂದು ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕು ಎಂದು ಬಿ.ಜಯಶ್ರೀ ಅವರು ಸಲಹೆ ನೀಡಿದ್ದಾರೆ.
ಕೆಲವೊಮ್ಮೆ ನನ್ನ ಖಾಸಗಿವಿಚಾರ ಯಾಕೆ ಹೇಳಲಿ ಅಂದುಕೊಳ್ಳುತ್ತೇನೆ. ನನ್ನಿಂದ ಇನ್ನೊಬ್ಬರು ಎಚ್ಚೆತ್ತುಕೊಳ್ಳಲಿ ಎಂದು ಹೇಳುತ್ತೇನೆ. ನನ್ನ ಪುಸ್ತಕ `ಕಣ್ಣಮುಚ್ಚೆ ಕಾಡೆಗೂಡೆ’ಯಲ್ಲಿ ಎಲ್ಲವನ್ನೂ ಬರೆದಿದ್ದೇನೆ. ಜನ್ಮ ಕೊಟ್ಟ ಮಗುವಿನ ತಂದೆ ಯಾರೂ ಅಂತ ತಾಯಿಗೆ ಮಾತ್ರ ಗೊತ್ತಿರುತ್ತದೆ. ತಂದೆಗೆ ಗೊತ್ತಾಗಲ್ಲ. ಹಾಗಾಗಿ ಅವರವರ ನೋವುಗಳು ಅವರವರಿಗೆ ಮಾತ್ರ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ನಾವು ನೋವು ಹೇಳಿಕೊಂಡರೂ ಜನ ನಮಗೆ ಎಷ್ಟು ಬೆಂಬಲ ನೀಡುತ್ತಾರೆ ಅನ್ನೋದು ಮುಖ್ಯವಾಗತ್ತದೆ. ನಾನು ನ್ಯಾಯಕ್ಕಾಗಿ ಅನ್ಯಾಯ ಹೇಳಿಕೊಂಡಿಲ್ಲ. ನನ್ನಿಂದ ಬೇರೆಯವರು ಎಚ್ಚೆತ್ತುಕೊಳ್ಳಲಿ ಅನ್ನೋದು ನನ್ನ ಉದ್ದೇಶ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews