ಲಕ್ನೋ: ಅಯೋಧ್ಯೆಯ (Ayodhya) ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ರಾಮಲಲ್ಲಾ ಮೂರ್ತಿ (RamLala Idol) ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸರ್ವಾನುಮತದಿಂದ ಆಯ್ಕೆಯಾದ ಮೂರ್ತಿಯನ್ನು ಜ.22 ರಂದು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ರಾಮ ಜನ್ಮಭೂಮಿ (Ram Janmbhoomi) ತೀರ್ಥ ಕ್ಷೇತ್ರದ ಟ್ರಸ್ಟಿ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ತಿಳಿಸಿದ್ದಾರೆ.
ಭವ್ಯ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವ ಶ್ರೀ ರಾಮಲಲ್ಲಾ ವಿಗ್ರಹವನ್ನು ಆಯ್ಕೆ ಮಾಡಲು ಮತದಾನ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ. ವಿಗ್ರಹವನ್ನು ಒಮ್ಮೆ ನೋಡಿದರೆ ನೀವು ಮಂತ್ರಮುಗ್ಧರಾಗುತ್ತೀರಿ. ವಿಗ್ರಹವು ನಿಮ್ಮೊಂದಿಗೆ ಮಾತನಾಡುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರಾಮನೂರಿನಲ್ಲಿಂದು ಮೋದಿ ಮೆಗಾ ಶೋ – 15,000 ಕೋಟಿ ರೂ. ಯೋಜನೆಗೆ ಚಾಲನೆ
ಹಲವು ವಿಗ್ರಹಗಳನ್ನು ಒಟ್ಟಿಗೆ ಇರಿಸಿದರೂ, ಕಣ್ಣುಗಳು ಉತ್ತಮವಾದವುಗಳ ಕಡೆ ಆಕರ್ಷಣೆಗೊಳ್ಳುತ್ತವೆ. ಕಾಕತಾಳೀಯವೆಂದರೆ ನಾನು ವಿಗ್ರಹವನ್ನು ಇಷ್ಟಪಟ್ಟೆ ಮತ್ತು ಅದಕ್ಕೆ ನನ್ನ ಮತವನ್ನು ನೀಡಿದ್ದೇನೆ. ಆಯ್ಕೆಯಾದ ಮೂರ್ತಿಯನ್ನು ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಮಲಲ್ಲಾ ಮೂರ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಮೂರು ಮೂರ್ತಿಗಳ ಪೈಕಿ ಯಾವ ಮೂರ್ತಿ ಅಂತಿಮವೆಂದು ಇಂದು ಬೆಳಗ್ಗೆ 11 ಗಂಟೆಗೆ ನಿರ್ಣಯವಾಗಲಿದೆ. ಇಬ್ಬರು ಕರ್ನಾಟಕ ಒಬ್ಬರು ರಾಜಸ್ಥಾನ ಮೂಲದ ಶಿಲ್ಪಿಗಳಿಂದ ಬಾಲರಾಮನ ಮೂರ್ತಿ ಕೆತ್ತನೆಯಾಗಿದ್ದು, ರಾಮ ಮಂದಿರ ಟ್ರಸ್ಟ್ ಸಭೆಯ ಬಳಿಕ ಪ್ರತಿಷ್ಠಾಪನೆಗೆ ಯಾವ ಮೂರ್ತಿ ಎಂದು ಖಚಿತಪಡಿಸಲಾಗುತ್ತದೆ.
ಇತ್ತೀಚೆಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಕಾರ್ಯದರ್ಶಿ ಚಂಪತ್ ರೈ ಅವರು ಮೂರು ವಿಗ್ರಹಗಳಲ್ಲಿ ಐದು ವರ್ಷದ ರಾಮ್ ಲಲ್ಲಾನನ್ನು ಪ್ರತಿಬಿಂಬಿಸುವ (51 ಇಂಚು) 4.3 ಅಡಿ ಎತ್ತರದ ರಾಮನ ವಿಗ್ರಹವನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದರು.
ಐದು ವರ್ಷದ ಬಾಲಕನ ರೂಪದಲ್ಲಿ, ಬಿಲ್ಲು ಬಾಣ ಹಿಡಿದು ಕಮಲದ ಮೇಲೆ ಕುಳಿತಿರುವ ಬಾಲರಾಮನ ದರ್ಶನಕ್ಕೆ 35 ಅಡಿಗಳ ದೂರದಿಂದ ಅವಕಾಶ ಮಾಡಲಾಗಿದೆ. ಇದನ್ನೂ ಓದಿ: Ram Mandir Inauguration: ಈ ಐವರಿಗೆ ಮಾತ್ರ ರಾಮಮಂದಿರದ ಗರ್ಭಗುಡಿ ಪ್ರವೇಶಕ್ಕೆ ಅವಕಾಶ