ಮರಳು ಮಾಫಿಯಾಗೆ ಸಿಂಹಸ್ವಪ್ನವಾಗಿದ್ದ ಸೇಡಂ ಎಸಿ ಭೀಮಾಶಂಕರ್ ವರ್ಗಾವಣೆ

Public TV
1 Min Read
AC 8

ಕಲಬುರಗಿ: ಮರಳು ಮಾಫಿಯಾಗೆ ಸಿಂಹಸ್ವಪ್ನವಾಗಿದ್ದ, `ಜನರ ಎಸಿ’ ಅಂತಾನೇ ಖ್ಯಾತಿಯಾಗಿದ್ದ ಸೇಡಂ ಎಸಿ ಭೀಮಾಶಂಕರ್ ತೆಗಳ್ಳಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ.

AC 4

ಭೀಮಾಶಂಕರ್ ತೆಗಳ್ಳಿ ಅವರು ಕಳೆದ ಎರಡು ತಿಂಗಳಲ್ಲಿ 48 ಪ್ರಕರಣ ಪತ್ತೆ ಮಾಡಿದ್ದರು. ಮಾತ್ರವಲ್ಲದೇ 2016ರಲ್ಲಿ 276 ಅಕ್ರಮ ಮರಳು ದಂಧೆ ಪ್ರಕರಣ ದಾಖಲಿಸಿದ್ದರು. ರಾತ್ರಿ ವೇಳೆ ನಡೆಯೋ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಿದ್ರು.

AC 5

ಏಕ ಕಾಲದಲ್ಲಿ ಚಿತ್ತಾಪುರ, ಸೇಡಂ ಮತ್ತು ಚಿಂಚೋಳಿ ಎಸಿಯಾಗಿ ಕರ್ತವ್ಯ ನಿರ್ವಹಣೆ ಮಾಡ್ತಿದ್ದ ಇವರು `ಜನರ ಎಸಿ’ ಅಂತಾನೆ ಖ್ಯಾತಿ ಪಡೆದಿದ್ದರು. ಕಳೆದ ವಾರ ತೆಗಳ್ಳಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೀಗ ಭೀಮಾಶಂಕರ್ ಅವರ ವರ್ಗಾವಣೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

AC 3

ಸದ್ಯ ಕೃಷ್ಣಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನ ಅಧಿಕಾರಿಯಾಗಿ ಭೀಮಾಶಂಕರ್ ತೆಗಳ್ಳಿ ವರ್ಗಾವಣೆಗೊಂಡಿದ್ದಾರೆ.

AC 7

AC 1

AC 2

Share This Article
Leave a Comment

Leave a Reply

Your email address will not be published. Required fields are marked *