ಬೆಂಗಳೂರು: ವಕೀಲೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರಾಜೇಶ್ ಸಿಂಗ್ ಬಂಧಿತ ಆರೋಪಿ. ರಾಜೇಶ್ ಸಿಂಗ್ ಮೂಲತಃ ಉತ್ತರ ಪ್ರದೇಶ ನಿವಾಸಿಯಾಗಿದ್ದು, ಘಟನೆ ಬಳಿಕ ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ.
ಏನಿದು ಪ್ರಕರಣ?
ಜನವರಿ 25ರ ತಡರಾತ್ರಿ 11:50 ಸುಮಾರಿಗೆ ವಕೀಲೆ ಕಾರ್ಯ ನಿಮಿತ್ತ ತಡರಾತ್ರಿವರೆಗೂ ತಮ್ಮ ಕಚೇರಿಯಲ್ಲಿ ಉಳಿದಿದ್ದರು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ರಾಜೇಶ್ ಕಚೇರಿಯಿಂದ ಹೊರಟು ಪಾರ್ಕಿಂಗ್ಗೆ ಬಂದು ಲೈಟ್ಸ್ ಆಫ್ ಮಾಡಿದ್ದನು. ಆಗ ವಕೀಲೆ ಮೊಬೈಲ್ ಟಾರ್ಚ್ ಹಾಕಿ ಹೊರಗೆ ಬಂದರು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಅಲ್ಲಿ ಪ್ರತ್ಯಕ್ಷನಾಗಿ ವಕೀಲೆಯನ್ನು ದುರುಗುಟ್ಟಿ ನೋಡಿ ಡೋರ್ ಲಾಕ್ ಮಾಡಿ ಟಾರ್ಚ್ ಆಫ್ ಮಾಡಿದ್ದನು.
ಬಳಿಕ ಆರೋಪಿ ವಕೀಲೆಯನ್ನು ಕೆಳಗಡೆ ಬೀಳಿಸಿ ತಲೆ ಭಾಗವನ್ನು ಒತ್ತಿದ್ದನು. ಆರೋಪಿ ವಕೀಲೆಯ ಎದೆ, ಕೈ ಹಾಗೂ ಮೈ ಭಾಗವನ್ನು ಮುಟ್ಟಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದನು. ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾಗ ವಕೀಲೆ ಜೋರಾಗಿ ಕೂಗಿದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಈ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354,354(ಬಿ) ಅಡಿ ಕೇಸ್ ದಾಖಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv