ದುನಿಯಾ ವಿಜಿ, ಕಿಟ್ಟಿ ಜಗಳದ ಅಸಲಿ ಸತ್ಯ ಬಹಿರಂಗ

Public TV
2 Min Read
mastigudi collage

ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಮತ್ತು ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಜಗಳದ ಅಸಲಿ ಕತೆ ಈಗ ಬಹಿರಂಗವಾಗಿದೆ.

ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಚಿತ್ರಕ್ಕೆ ಪಾನಿಪುರಿ ಕಿಟ್ಟಿ, 40 ಲಕ್ಷ ಫೈನಾನ್ಸ್ ಮಾಡಿದ್ದರು. ಮಾಸ್ತಿಗುಡಿ ಚಿತ್ರದ ಇಬ್ಬರು ಖಳನಟರಾದ ಉದಯ್ ಮತ್ತು ಅನಿಲ್ ಮೂಲಕ ಕಿಟ್ಟಿ 40 ಲಕ್ಷ ಹಣ ಫೈನಾನ್ಸ್ ಮಾಡಿದ್ದರು. ನಂತರ ಚಿತ್ರ ಬಿಡುಗಡೆಯಾದ ಬಳಿಕ ಪಾನೀಪುರಿ ಕಿಟ್ಟಿ 40 ಲಕ್ಷ ಹಣ ವಾಪಸ್ ಕೇಳಿದರು. ಕಿಟ್ಟಿ ಫೈನಾನ್ಸ್ ಮಾಡಿದ್ದ ಹಣ ನೀಡಲು ಚಿತ್ರ ನಿರ್ಮಾಪಕ ಸುಂದರ್ ಗೌಡ ಮತ್ತು ವಿಜಯ್ ಮೀನಾ ಮೇಷ ಎಣಿಸಿದ್ದು ಕಿಟ್ಟಿ ಬೇಸರಕ್ಕೆ ಕಾರಣವಾಗಿದೆ.

duniya vijay new 2

ಮಾಸ್ತಿಗುಡಿ ಚಿತ್ರದ ಖಳನಟ ಅನಿಲ್ ಮೂಲಕ 40 ಲಕ್ಷ ಫೈನಾನ್ಸ್ ಕೊಟ್ಟಿದ್ದ ಕಿಟ್ಟಿ ಬಳಿಕ ಹಣ ವಾಪಸ್ ಕೇಳಿದ್ದರು. ಈ ವೇಳೆ ಸದ್ಯಕ್ಕೆ ಹಣ ಇಲ್ಲ, ಫಿಲಂ ಲಾಸ್ ಆಗೋಯ್ತು ಅಂತಾ ವಿಜಯ್ ಮತ್ತು ನಿರ್ಮಾಪಕ ಸುಂದರ್ ಪಿ ಗೌಡ ಹೇಳಿದ್ದರು. ಅಲ್ಲದೇ ಇಂದು ಕೊಡ್ತೀವಿ, ನಾಳೆ ಕೊಡ್ತೀವಿ ಅಂತ ಹೇಳಿ ದಿನ ಕಳೆದಂತೆ ಮಾತಿನ ವರಸೆ ಬದಲಾಯಿಸಿದ್ದರು. ಹೀಗೆ ಘಟನೆ ಹಿಂದಿನ ಹಲವು ಸತ್ಯ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

anil and uday

ಫೈನಾನ್ಸ್ ವಿಚಾರ ತಾರಕ್ಕೇರುತ್ತಿದ್ದಂತೆ ಅನಿಲ್‍ಗೆ ತಾನೇ ಹಣ ಕೊಟ್ಟಿದ್ದು ಅವರ ಬಳಿ ತೆಗೆದುಕೋ ಎಂದು ದುನಿಯಾ ವಿಜಿ ಹಾಗೂ ಸುಂದರ್ ಗೌಡ ಹೇಳಿದ್ದಾರೆ. ಇದೇ ವಿಚಾರದಿಂದ ಇಬ್ಬರ ನಡುವೆ ಸಣ್ಣ ಮನಸ್ತಾಪ ಹುಟ್ಟಿದ್ದು, ಆಪ್ತ ಸ್ನೇಹಿತರ ನಡುವೆ ದ್ವೇಷದ ಕಿಡಿ ಹೊತ್ತಿಸಿತ್ತು. ಅಂದಿನಿಂದ ವಿಜಯ್ ಮತ್ತು ಕಿಟ್ಟಿ ಹಾವು ಮುಂಗುಸಿಯಂತಾಗಿದ್ದು, ಕಳೆದ ಶನಿವಾರ ಅಂಬೇಡ್ಕರ್ ಭವನದಲ್ಲಿ ನಡೆದ ಬಾಡಿ ಬೀಲ್ಡಿಂಗ್ ಕಾಂಪಿಟೇಷನ್ ವೇಳೆ ಸ್ಫೋಟಗೊಂಡಿದೆ ಎನ್ನಲಾಗಿದೆ.

ಸದ್ಯ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಕಿಟ್ಟಿ, ನಾನು ಯಾವುದೇ ಫೈನಾನ್ಸ್ ಮಾಡಿಲ್ಲ. ಮಾಸ್ತಿಗುಡಿಗೆ 40 ಲಕ್ಷ ಕೊಟ್ಟಿದ್ದೆ ಎನ್ನುವುದು ಸುಳ್ಳು. ಅನಿಲ್ ಹಣ ಹೂಡಿದ್ದರು ಎಂದು ಹೇಳಿದ್ದಾರೆ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *