ರಾಯಚೂರು: ಉಚಿತ ಬಸ್ ಪಾಸ್ ಗೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ರಾಯಚೂರಿನಲ್ಲಿ ಕರೆ ನೀಡಿರುವ ಶಾಲಾ ಕಾಲೇಜು ಬಂದ್ ಯಶಸ್ವಿಯಾಗಿದೆ.
ರಾಯಚೂರಿನ ಎಲ್ಲಾ ಶಾಲಾ ಕಾಲೇಜುಗಳು ಇಂದು ಬೀಗ ತೆಗೆಯದೆ ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ. ವಿದ್ಯಾರ್ಥಿಗಳ ಪಾಲಕರಿಗೆ ತೊಂದರೆಯಾಗದಂತೆ ಶಾಲೆಗಳಿಗೆ ರಜೆ ಘೋಷಿಸಿವೆ. ಉಚಿತ ಬಸ್ ಪಾಸ್ ನೀಡಬೇಕು. ಈಗಾಗಲೇ ಬಸ್ ಪಾಸ್ ಗಾಗಿ ನೀಡಿದ ವಿದ್ಯಾರ್ಥಿಗಳ ಹಣವನ್ನ ಮರಳಿಸಬೇಕು ಅಂತ ಬಂದ್ ಗೆ ಕರೆ ನೀಡಲಾಗಿತ್ತು.
ಎಐಡಿಎಸ್ಓ ಸೇರಿ ಮೂರು ವಿದ್ಯಾರ್ಥಿ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಹೋರಾಟಗಳಿಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಶಾಲಾ ಕಾಲೇಜು ಆಡಳಿತ ಮಂಡಳಿಗಳು ಸ್ವಯಂ ಪ್ರೇರಿತರಾಗಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.