ಪ್ರಧಾನಿ ಮೋದಿ ‘ಭಾರತ್ ಮಾತಾ ಕೀ ಜೈ’ ಹೇಳಬಾರದು: ರಾಹುಲ್ ಗಾಂಧಿ

Public TV
1 Min Read
RAHUL GANDI MODI

ಜೈಪುರ: ಪ್ರಧಾನಿ ನರೇಂದ್ರ ಮೋದಿ ಭಾರತ್ ಮಾತಾ ಕೀ ಜೈ ಬದಲು ಅಂಬಾನಿ ಕೀ ಜೈ ಎಂದು ಹೇಳಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಚುನಾವಣಾ ನಿಮಿತ್ತ ರಾಜಸ್ಥಾನದ ಆಲ್ವಾರ್‍ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಎಲ್ಲೇ ಹೋಗಲಿ, ತಮ್ಮ ಭಾಷಣಗಳಲ್ಲಿ ಮೊದಲು ‘ಭಾರತ್ ಮಾತಾ ಕೀ ಜೈ’ ಎನ್ನುವ ಘೋಷ ವಾಕ್ಯವನ್ನು ಹೇಳುತ್ತಾರೆ. ಭಾರತ ಮಾತೆ ದೇಶದ ರೈತರು, ಯುವಜನತೆ, ಮಹಿಳೆಯರು ಹಾಗೂ ಕಾರ್ಮಿಕರ ಭಾವನೆಗೆ ಸಂಬಂಧಿಸಿದ್ದಾಗಿದೆ. ಆದರೆ ಮೋದಿ ಅವರು ಉದ್ಯಮಿ ಅಂಬಾನಿಗಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ಮೋದಿ ‘ಭಾರತ್ ಮಾತಾ ಕೀ ಜೈ’ ಎನ್ನುವ ಬದಲು, ‘ಅನಿಲ್ ಅಂಬಾನಿ ಕೀ ಜೈ’, ‘ನೀರವ್ ಮೋದಿ ಕೀ ಜೈ’ ಎಂದು ಹೇಳಬೇಕೆಂದು ವ್ಯಂಗ್ಯವಾಡಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಗಳು ಈಡೇರಿಲ್ಲ. ಪ್ರಧಾನಿ ಮೋದಿಯವರ ಭರವಸೆಯಂತೆ ಉದ್ಯೋಗಗಳು ಸೃಷ್ಟಿಯಾಗಿದ್ದರೇ, ಆಲ್ವಾರ್ ನಲ್ಲಿ ಯುವಕರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಭಾರತ ಮಾತೆಯ ಬಗ್ಗೆ ಮಾತನಾಡುತ್ತೀರಿ ಎಂದಾದರೇ, ರೈತರ ಸಾಲಮನ್ನಾವನ್ನು ಏಕೆ ಮಾಡಿಲ್ಲ? ರೈತರನ್ನೇಕೆ ನಿರ್ಲಕ್ಷಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ರಫೇಲ್ ಒಪ್ಪಂದದಲ್ಲಿ ಭಾಗಿಯಾಗಿರುವುದರಿಂದಲೇ, ಪ್ರಧಾನಿ ಮೋದಿಯವರು ತಮ್ಮ ಯಾವುದೇ ಭಾಷಣಗಳಲ್ಲಿ ಇದರ ಬಗ್ಗೆ ಒಂದಿಷ್ಟು ಮಾತನಾಡಲ್ಲ. ಒಂದು ಈ ವೇಳೆ ಈ ಒಪ್ಪಂದದ ಬಗ್ಗೆ ಅವರು ಹೇಳಿಕೊಂಡರೇ, ಅವರನ್ನು ಜನ ‘ಚೌಕಿದಾರ್ ಚೋರ್ ಹೈ’ ಎಂದು ಹೇಳಿಕೊಳ್ಳುತ್ತಾರೆಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *